ಚಾಮರಾಜನಗರ: ಕೊರೊನಾ ಕಟ್ಟೆಚ್ಚರವಾಗಿ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಮೂರು ದಿನಗಳ ಕಾಲ ಭಕ್ತಾದಿಗಳ ಪ್ರವೇಶ ನಿರ್ಬಂಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಶ್ರಾವಣ ಮಾಸದ ಕೊನೆಯ ದಿನಗಳಾಗಿರುವ ಸೆ. 5ರಿಂದ 7 ಅಂದರೆ ನಾಳೆ ಭಾನುವಾರದಿಂದ ಮಂಗಳವಾರದ ತನಕ ಎಣ್ಣೆಮಜ್ಜನ, ಅಮವಾಸ್ಯೆ ಪೂಜೆ ಹಾಗೂ 108 ಕುಂಭಾಭಿಷೇಕ ನಡೆಯಲಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಭಕ್ತರು ಬರುವ ಹಿನ್ನೆಲೆಯಲ್ಲಿ ಮೂರು ದಿನ ಪ್ರವೇಶ ನಿಷೇಧಿಸಿ, ವಿಶೇಷ ಪೂಜೆಯನ್ನು ಸ್ಥಳೀಯವಾಗಿ, ಸರಳವಾಗಿ ಆಚರಿಸಲು ಪ್ರಾಧಿಕಾರ ನಿರ್ಧರಿಸಿದೆ.
![no-entry-to-male-mahadeshwara-hill-temple-for-three-days](https://etvbharatimages.akamaized.net/etvbharat/prod-images/kn-cnr-01-mmhills-av-ka10038_04092021084905_0409f_1630725545_176.jpg)
ಈಗಾಗಲೇ ಕಳೆದ ನಾಲ್ಕು ವಾರಗಳಿಂದ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಶ್ರಾವಣ ಶನಿವಾರಗಳಲ್ಲಿ ಜನರ ಪ್ರವೇಶಕ್ಕೆ ನಿರ್ಬಂಧವಿದೆ.
ಇದನ್ನೂ ಓದಿ: ಮಕ್ಕಳನ್ನು ಆಕರ್ಷಿಸಲು ಹೊಸ ಪ್ರಯತ್ನ.. ರೈಲು ಬೋಗಿಯಾಗಿ ಬದಲಾಯ್ತು ಕಾಳನಕೊಪ್ಪಲು ಶಾಲೆ