ETV Bharat / state

ಬೇಟೆ ಸಿಕ್ಕಿದ ಖುಷಿಯಲ್ಲಿ ಬೋನಿಗೆ ಬಿದ್ದ ಚಿರತೆ: 5 ತಿಂಗಳಲ್ಲಿ ಇದು ಆರನೇ ಸೆರೆ!

author img

By

Published : Jan 8, 2022, 7:24 PM IST

ಚಾಮರಾಜನಗರ ತಾಲೂಕಿನ ವೀರನಪುರ ಗ್ರಾಮದ ಜಮೀನೊಂದರಲ್ಲಿ ನಾಯಿ ಕಟ್ಟಿಹಾಕಿ ಇಟ್ಟಿದ್ದ ಬೋನಿನಲ್ಲಿ ಎರಡು ವರ್ಷ ಅಂದಾಜಿನ ಗಂಡು ಚಿರತೆವೊಂದು ಸೆರೆಯಾಗಿದೆ‌. ಚಾಮರಾಜನಗರ ತಾಲೂಕಿನಲ್ಲಿ ಕಳೆದ 5 ತಿಂಗಳುಗಳಲ್ಲಿ ಸೆರೆಸಿಕ್ಕ 6 ನೇ ಚಿರತೆ ಇದಾಗಿದ್ದು, ಈ ಹಿಂದೆ ಹುಲಿಗಾಗಿ ಇಟ್ಟಿದ್ದ ಬೋನಿನಲ್ಲಿ ಚಿರತೆವೊಂದು ಬಿದ್ದಿತ್ತು.

ಬೋನಿಗೆ ಬಿದ್ದ ಚಿರತೆ
ಬೋನಿಗೆ ಬಿದ್ದ ಚಿರತೆ

ಚಾಮರಾಜನಗರ: ಬೇಟೆ ಸಿಕ್ಕೇ ಬಿಟ್ಟಿತೆಂಬ ಖುಷಿಯಲ್ಲಿ ಚಿರತೆವೊಂದು ಬೋನಿಗೆ ಬಿದ್ದಿರುವ ಘಟನೆ ಚಾಮರಾಜನಗರ ತಾಲೂಕಿನ ವೀರನಪುರ ಗ್ರಾಮದಲ್ಲಿ ನಡೆದಿದೆ.

ಬೋನಿಗೆ ಬಿದ್ದ ಚಿರತೆ

ಗ್ರಾಮದ ಜಮೀನೊಂದರಲ್ಲಿ ನಾಯಿ ಕಟ್ಟಿಹಾಕಿ ಇಟ್ಟಿದ್ದ ಬೋನಿನಲ್ಲಿ ಎರಡು ವರ್ಷ ಅಂದಾಜಿನ ಗಂಡು ಚಿರತೆವೊಂದು ಸೆರೆಯಾಗಿದೆ‌. ಕರಿಕಲ್ಲು ಕ್ವಾರಿ ಪಕ್ಕದಲ್ಲೇ ಈ ಚಿರತೆ ಸೆರೆಯಾಗಿದ್ದು, ಇನ್ನೂ ಹತ್ತಾರು ಚಿರತೆಗಳಿವೆ ಇಲ್ಲಿವೆ ಎಂದು ರೈತರು ಆತಂಕ ಹೊರಹಾಕಿದ್ದಾರೆ.

ಚಾಮರಾಜನಗರ ತಾಲೂಕಿನಲ್ಲಿ ಕಳೆದ 5 ತಿಂಗಳುಗಳಲ್ಲಿ ಸೆರೆಸಿಕ್ಕ 6ನೇ ಚಿರತೆ ಇದಾಗಿದ್ದು, ಈ ಹಿಂದೆ ಹುಲಿಗಾಗಿ ಇಟ್ಟಿದ್ದ ಬೋನಿನಲ್ಲಿ ಚಿರತೆವೊಂದು ಬಿದ್ದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.