ಚಾಮರಾಜನಗರ: ಬೇಟೆ ಸಿಕ್ಕೇ ಬಿಟ್ಟಿತೆಂಬ ಖುಷಿಯಲ್ಲಿ ಚಿರತೆವೊಂದು ಬೋನಿಗೆ ಬಿದ್ದಿರುವ ಘಟನೆ ಚಾಮರಾಜನಗರ ತಾಲೂಕಿನ ವೀರನಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಮೀನೊಂದರಲ್ಲಿ ನಾಯಿ ಕಟ್ಟಿಹಾಕಿ ಇಟ್ಟಿದ್ದ ಬೋನಿನಲ್ಲಿ ಎರಡು ವರ್ಷ ಅಂದಾಜಿನ ಗಂಡು ಚಿರತೆವೊಂದು ಸೆರೆಯಾಗಿದೆ. ಕರಿಕಲ್ಲು ಕ್ವಾರಿ ಪಕ್ಕದಲ್ಲೇ ಈ ಚಿರತೆ ಸೆರೆಯಾಗಿದ್ದು, ಇನ್ನೂ ಹತ್ತಾರು ಚಿರತೆಗಳಿವೆ ಇಲ್ಲಿವೆ ಎಂದು ರೈತರು ಆತಂಕ ಹೊರಹಾಕಿದ್ದಾರೆ.
ಚಾಮರಾಜನಗರ ತಾಲೂಕಿನಲ್ಲಿ ಕಳೆದ 5 ತಿಂಗಳುಗಳಲ್ಲಿ ಸೆರೆಸಿಕ್ಕ 6ನೇ ಚಿರತೆ ಇದಾಗಿದ್ದು, ಈ ಹಿಂದೆ ಹುಲಿಗಾಗಿ ಇಟ್ಟಿದ್ದ ಬೋನಿನಲ್ಲಿ ಚಿರತೆವೊಂದು ಬಿದ್ದಿತ್ತು.