ETV Bharat / state

ಚಾಮರಾಜನಗರ: ವಿದ್ಯುತ್ ತಗುಲಿ ಆನೆ ಸಾವು

author img

By

Published : Aug 27, 2020, 4:38 PM IST

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ. ಪಾಳ್ಯ ಸಮೀಪದ ಸಿರಿಗೋಡು ಎಂಬಲ್ಲಿ ವಿದ್ಯುತ್ ತಗುಲಿ ಆನೆಯೊಂದು ಸಾವನ್ನಪ್ಪಿದೆ.

Elephant died
Elephant died

ಚಾಮರಾಜನಗರ:‌ ವಿದ್ಯುತ್ ತಗುಲಿ ಆನೆಯೊಂದು ಸಾವನ್ನಪ್ಪಿರುವ ಘಟನೆ ಹನೂರು ತಾಲೂಕಿನ ಪಿ.ಜಿ. ಪಾಳ್ಯ ಸಮೀಪದ ಸಿರಿಗೋಡು ಎಂಬಲ್ಲಿ ನಡೆದಿದೆ.

ಆನೆಗೆ ಅಂದಾಜು 35 ವರ್ಷ ವಯಸ್ಸಾಗಿದ್ದು, ಇದು ಆಹಾರ‌ ಹುಡುಕುತ್ತಾ ಹೋಗುತ್ತಿರುವಾಗ ವಿದ್ಯುತ್ ತಗುಲಿ ಸಾವನ್ನಪ್ಪಿದೆ. ಶ್ಯಾಮ್ ಎಂಬುವರು ಬೆಳೆ ರಕ್ಷಣೆಗಾಗಿ ಸೋಲಾರ್ ಬೇಲಿ ಹಾಕಿಸಿ ಅಕ್ರಮವಾಗಿ ವಿದ್ಯುತ್ ಹಾಯಿಸಿರುವುದು ಆನೆ ಸಾವಿಗೆ ಕಾರಣ ಎನ್ನಲಾಗುತ್ತಿದೆ.

ಈ ಸಂಬಂಧ ಮಲೆ ಮಹಾದೇಶ್ವರ ವನ್ಯಜೀವಿ ಧಾಮದ ಅಧಿಕಾರಿಗಳು ಶ್ಯಾಮ್ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಬಂಧಿಸಲು ಮುಂದಾಗಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.