ETV Bharat / state

ಚಾಮರಾಜನಗರ: ಕಾಡಂಚಿನ ಗ್ರಾಮದಲ್ಲಿ ಯುವತಿಯರಿಂದ ಕೋವಿಡ್ ಜಾಗೃತಿ, ಯುವಕರ ಸಾಥ್​

author img

By

Published : May 30, 2021, 12:45 PM IST

ಪಚ್ಚೆದೊಡ್ಡಿ ಗ್ರಾಮದ ನಂದಿನಿ, ವಿಜಯಲಕ್ಷ್ಮಿ, ಅಭಿನಯ ಎಂಬ ಯುವತಿಯರು ಪಚ್ಚೆದೊಡ್ಡಿ, ಕಾಂಚಳ್ಳಿ ಗ್ರಾಮದ ಮನೆ ಮನೆಗೆ ತೆರಳಿ ಸ್ವಚ್ಛತೆ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ, ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಇದಕ್ಕೆ ಈಗ ಯುವಕರೂ ಸಾಥ್​ ನೀಡಿದ್ದಾರೆ.

covid awareness from youngsters in chamrajnagara
ಯುವತಿಯರಿಂದ ಕೋವಿಡ್ ಜಾಗೃತಿ

ಚಾಮರಾಜನಗರ: ಕೊರೊನಾ ಮಹಾಮಾರಿ ಹಳ್ಳಿಗಳಲ್ಲೀಗ ವಿಪರೀತವಾಗಿ ವ್ಯಾಪಿಸುತ್ತಿರುವುದರಿಂದ ಯುವತಿಯರು ಕಳೆದ ನಾಲ್ಕೈದು ದಿನಗಳಿಂದ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿರುವ ಘಟನೆ ಹನೂರು ತಾಲೂಕಿನ ಕಾಡಂಚಿನ ಗ್ರಾಮ ಪಚ್ಚೆದೊಡ್ಡಿಯಲ್ಲಿ ನಡೆದಿದೆ.

ಯುವತಿಯರಿಂದ ಕೋವಿಡ್ ಜಾಗೃತಿ, ಯುವಕರ ಸಾಥ್​

ಪಚ್ಚೆದೊಡ್ಡಿ ಗ್ರಾಮದ ನಂದಿನಿ, ವಿಜಯಲಕ್ಷ್ಮಿ, ಅಭಿನಯ ಎಂಬ ಯುವತಿಯರು ಪಚ್ಚೆದೊಡ್ಡಿ, ಕಾಂಚಳ್ಳಿ ಗ್ರಾಮದ ಮನೆ ಮನೆಗೆ ತೆರಳಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅಂಗಡಿ-ಮುಂಗಟ್ಟುಗಳು, ಹಾಲಿನ ಡೈರಿಗಳು, ಅರಳಿಕಟ್ಟೆಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ತಮ್ಮೂರಿನಲ್ಲಿ ಮಹಾಮಾರಿ ಅಟ್ಟಹಾಸ ಮೆರೆಯದಂತೆ ಜನರು ಎಚ್ಚರದಿಂದ ಇರುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್​ ವಿಸ್ತರಣೆ ಬಗ್ಗೆ ಜೂನ್​ 6ರ ವೇಳೆಗೆ ಅಂತಿಮ ತೀರ್ಮಾನ: ಬಿಎಸ್​ವೈ

ನಿರಂತರ ತಲೆನೋವು, ವಿಪರೀತ ಸುಸ್ತು, ನೆಗಡಿ, ಜ್ವರ ಕಾಣಿಸಿಕೊಳ್ಳುತ್ತಿರುವವರ ಮಾಹಿತಿಯನ್ನು ಸಂಗ್ರಹಿಸಿ, ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡುವುದರ ಮೂಲಕ ಸಹಕರಿಸುತ್ತಿದ್ದಾರೆ. ಜತೆಗೆ ಲಸಿಕೆ ಹಾಕಿಸಿಕೊಳ್ಳುವಂತೆಯೂ ಉತ್ತೇಜಿಸುವ ಮೂಲಕ ಇವರು ಗಮನ ಸೆಳೆದಿದ್ದಾರೆ.

ಈ ಯುವತಿಯರ ತಂಡದ ಜತೆಗೆ ಕೆಲ ಯುವಕರು ಸೇರಿಕೊಂಡು ಗ್ರಾಮದಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದು, ಮತ್ತಷ್ಟು ಕ್ರಿಯಾಶೀಲತೆಯಿಂದ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎನ್ನುತ್ತಾರೆ ಯುವತಿ ನಂದಿನಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.