ETV Bharat / state

ಚಾಮರಾಜನಗರ : ಮೂವರು ತಹಶೀಲ್ದಾರ್​ ಸೇರಿ 534 ಮಂದಿಗೆ ಕೋವಿಡ್ : ಸೋಂಕಿಗೆ ವ್ಯಕ್ತಿ ಬಲಿ

author img

By

Published : Jan 24, 2022, 7:47 PM IST

ಇಂದು 144 ಮಂದಿ ವೈರಸ್​ನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 2255 ಮಂದಿ ಹೋಂ ಐಸೋಲೇಷನ್​ನಲ್ಲಿದ್ದಾರೆ. ಓರ್ವ ಸೋಂಕಿತ ಐಸಿಯುನಲ್ಲಿ ದಾಖಲಾಗಿದ್ದಾರೆ. 7403 ಮಂದಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ಇರಿಸಿದ್ದು, 1 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ಟೆಸ್ಟ್‌ ನಡೆಸಲಾಗಿದೆ‌..

chamarajanagara
ಚಾಮರಾಜನಗರ

ಚಾಮರಾಜನಗರ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ದ್ವಿಗುಣಗೊಳ್ಳುತ್ತಿದೆ. ಇಂದು ಹೊಸದಾಗಿ 534 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2968ಕ್ಕೆ ಏರಿಕೆಯಾಗಿದೆ‌.

ಇಂದಿನ ಹೊಸ ಪ್ರಕರಣಗಳಲ್ಲಿ ಯಳಂದೂರು ತಹಶೀಲ್ದಾರ್​, ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಹಶೀಲ್ದಾರ್​ ಅವರಿಗೆ ಕೊರೊನಾ ವಕ್ಕರಿಸಿದೆ. ಒಟ್ಟಾರೆ 128 ಮಕ್ಕಳಲ್ಲೂ ಸೋಂಕು ಪತ್ತೆಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲೇ ಸೋಂಕು ಹೆಚ್ಚು ಬಾಧಿಸುತ್ತಿದೆ. ಸೋಂಕಿತರ ಸಂಖ್ಯೆಯಲ್ಲೂ ಗ್ರಾಮಾಂತರದವರ ಪಾಲೇ ಹೆಚ್ಚಿದೆ.

ಇಂದು 144 ಮಂದಿ ವೈರಸ್​ನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 2255 ಮಂದಿ ಹೋಂ ಐಸೋಲೇಷನ್​ನಲ್ಲಿದ್ದಾರೆ. ಓರ್ವ ಸೋಂಕಿತ ಐಸಿಯುನಲ್ಲಿ ದಾಖಲಾಗಿದ್ದಾರೆ. 7403 ಮಂದಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ಇರಿಸಿದ್ದು, 1 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ಟೆಸ್ಟ್‌ ನಡೆಸಲಾಗಿದೆ‌.

ಸೋಂಕಿಗೆ ವೃದ್ಧ ಸಾವು : ಮೂರನೇ ಅಲೆಯಲ್ಲಿ ಕೊರೊನಾ ಸೋಂಕಿಗೆ ನಾಲ್ಕನೇ ವ್ಯಕ್ತಿಯೊಬ್ಬರು ಇಂದು ಬಲಿಯಾಗಿದ್ದಾರೆ‌‌. ಕೊಳ್ಳೇಗಾಲದ 74 ವರ್ಷದ ವೃದ್ಧರೊಬ್ಬರು ಕಳೆದ 22ರಂದು ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಈವರೆಗೆ ವೈರಸ್​ಗೆ 525 ಮಂದಿ ಬಲಿಯಾಗಿದ್ದಾರೆ.

ಓದಿ: ಐಎಎಸ್ ನಿಯಮಗಳನ್ನು ತಿರುಚುವ ಪ್ರಸ್ತಾಪ ವಿರೋಧಿಸಿ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.