ರೈತನೊಂದಿಗೆ ಉಡಾಫೆಯಾಗಿ ಮಾತನಾಡಿದರೇ ಸಚಿವ ಭಗವಂತ ಖೂಬಾ?: ಆಡಿಯೋ ವೈರಲ್

author img

By

Published : Jun 16, 2022, 7:24 PM IST

Updated : Jun 16, 2022, 8:11 PM IST

Minister Bhagavanta Khooba

ಬೀದರ್ ಜಿಲ್ಲೆಯ ಔರಾದ ತಾಲೂಕಿನ ಹೆಡಗಾಪೂರ್ ಗ್ರಾಮದ ರೈತರಾದ ಕುಶಾಲ್ ಪಾಟೀಲ್ ಎಂಬುವರು ಸಚಿವ ಭಗವಂತ ಖೂಬಾ ಅವರಿಗೆ ಕರೆ ಮಾಡಿದ್ದಾರೆ. ಈ ವೇಳೆ ಅವರ ಊರಿಗೆ ರಸಗೊಬ್ಬರ ಬಂದಿಲ್ಲದಿರುವ ಬಗ್ಗೆ ಹೇಳಿದ್ದಾರೆ. ಆಗ ಸಚಿವರು ಈ ವಿಷಯವಾಗಿ ಅವರೊಂದಿಗೆ ಉಡಾಫೆಯಿಂದ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದೆ.

ಬೀದರ್​​: ರಸಗೊಬ್ಬರಕ್ಕಾಗಿ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ರೈತರೊಬ್ಬರು ದೂರವಾಣಿ ಕರೆ ಮಾಡಿದ್ದಾಗ, ಸಚಿವರು ಉಡಾಫೆಯಾಗಿ ಮಾತನಾಡಿದ್ದರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೀದರ್ ಜಿಲ್ಲೆಯ ಔರಾದ ತಾಲೂಕಿನ ಹೆಡಗಾಪೂರ್ ಗ್ರಾಮದ ರೈತರಾದ ಕುಶಾಲ್ ಪಾಟೀಲ್ ಕೇಂದ್ರ ಸಚಿವರಿಗೆ ಕರೆ ಮಾಡಿ, ಬಿತ್ತನೆ ಆರಂಭವಾಗುತ್ತಿದೆ, ಈವರೆಗೂ ನಮ್ಮ ಊರಲ್ಲಿ ಗೊಬ್ಬರ ಸಿಗುತ್ತಿಲ್ಲ ಸರ್ ಎಂದು ಹೇಳಿದ್ದಾರೆ.


ಇದಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ, ನಾನು ಭಾರತ ಸರ್ಕಾರದ ಮಂತ್ರಿಯಾಗಿದ್ದೇನೆ. ರಾಜ್ಯಕ್ಕೆ ಗೊಬ್ಬರ ತರುವುದಷ್ಟೇ ನನ್ನ ಕೆಲಸ. ಮುಂದಿನದು ಅಧಿಕಾರಿಗಳ ಕೆಲಸ. ನನಗೇನು ಕೇಳುತ್ತೀಯಾ ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ. ಅದಕ್ಕೆ ರೈತ ಕುಶಾಲ್ ಪಾಟೀಲ್ ಕೂಡ ಮುಂಬರುವ ಚುನಾವಣೆಯಲ್ಲಿ ನಾವು ನೋಡಿಕೊಳ್ಳುವುದಾಗಿ ಜೋರು ಧ್ವನಿಯಿಂದಲೇ ಹೇಳುತ್ತಾರೆ.

ಇದನ್ನೂ ಓದಿ: ಮುಂದಿನ ಚುನಾವಣೆಗಿದು ದಿಕ್ಸೂಚಿ ಅಲ್ಲ, ಜನ ಬದಲಾವಣೆ ಬಯಸಿದ್ದಾರೆ: ಸಿದ್ದರಾಮಯ್ಯ

Last Updated :Jun 16, 2022, 8:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.