ETV Bharat / state

'ಡಬಲ್ ಇಂಜಿನ್' ಸರ್ಕಾರಕ್ಕೆ ಸೆಡ್ಡು ಹೊಡೆದ 'ಬಾಹುಬಲಿ': ಬೀದರ್​​ನಲ್ಲಿ 'ಕೈ' ಕಿಲ ಕಿಲ, ಕಮಲ ಪಾಳಯದಲ್ಲಿ ಕೋಲಾಹಲ

author img

By

Published : Dec 14, 2021, 5:38 PM IST

Updated : Dec 14, 2021, 5:44 PM IST

ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ 1,789 ಮತಗಳು ಪಡೆದರೆ, ಬಿಜೆಪಿ ಅಭ್ಯರ್ಥಿ ಪ್ರಕಾಶ್​​ ಖಂಡ್ರೆ 1,562 ಮತಗಳು ಪಡೆದರು. ಅಲ್ಲದೇ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಗೊವಿಂದರಾವ್ 15 ಮತಗಳು ಪಡೆದರೆ, ಅಲ್ಲದೇ 84 ಮತಗಳು ತಿರಸ್ಕೃತವಾಗಿವೆ.

ಬೀದರ್ ನಲ್ಲಿ 'ಕೈ' ಕಿಲ ಕಿಲ
ಬೀದರ್ ನಲ್ಲಿ 'ಕೈ' ಕಿಲ ಕಿಲ

ಬೀದರ್: ಪರಿಷತ್ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ, ಆಡಳಿತಾರೂಢ ಬಿಜೆಪಿಗೆ ಬೀದರ್​​​ನಲ್ಲಿ ಸೋಲಾಗಿದೆ. ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ರಾಜ್ಯ ಸಚಿವ ಪ್ರಭು ಚವ್ಹಾಣ ಸಚಿವರಿಬ್ಬರ ಡಬಲ್ ಇಂಜನ್ ಸರ್ಕಾರ ಎಂದೇ ಖ್ಯಾತಿಯಾದ ಜೋಡಿಗೆ ಸೆಡ್ಡು ಹೊಡೆದು ಕಾಂಗ್ರೆಸ್​​ನ ಬಾಹುಬಲಿಯಾಗಿ ಭೀಮರಾವ್ ಪಾಟೀಲ್ ವಿಜಯ ಪತಾಕೆ ಹಾರಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಪ್ರತಿಸ್ಪರ್ಧಿ ಬಿಜೆಪಿಯ ಪ್ರಕಾಶ್​​ ಖಂಡ್ರೆ ಅವರನ್ನು ಸೋಲಿಸಿ ಬರೋಬ್ಬರಿ 227 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರದ ಇಬ್ಬರು ಸಚಿವರಿಗೆ ಭಾರಿ ಹಿನ್ನಡೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ 1,789 ಮತಗಳು ಪಡೆದರೆ, ಬಿಜೆಪಿ ಅಭ್ಯರ್ಥಿ ಪ್ರಕಾಶ್​​ ಖಂಡ್ರೆ 1,562 ಮತಗಳು ಪಡೆದರು. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಗೊವಿಂದರಾವ್ 15 ಮತಗಳು ಪಡೆದರೆ, 84 ಮತಗಳು ತಿರಸ್ಕೃತವಾಗಿವೆ.

ಬೀದರ್​​ನಲ್ಲಿ 'ಕೈ' ಕಿಲ ಕಿಲ

ಪ್ರತಿಷ್ಠೆಯ ಕಣವಾಗಿದ್ದ ಬೀದರ್:

ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬೀದರ್ ಪರಿಷತ್ ಅಖಾಡದಲ್ಲಿ ಅಭ್ಯರ್ಥಿ ಗೆಲ್ಲಿಸಲೇಬೇಕು ಎಂದು ಬಿಜೆಪಿ ಪಾಳಯ ಪ್ರತಿಷ್ಠೆಗೆ ತೆಗೆದುಕೊಂಡು ಪ್ರಚಾರ ಮಾಡಿದ್ದರು. ಕಾಂಗ್ರೆಸ್​​​​​​ನ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಗಳು ಮಾಡಿದ್ದರು. ಪರಿಣಾಮ ಸ್ಥಳೀಯ ಸಂಸ್ಥೆಗಳ ಮತದಾರ 'ಕೈ' ಗೆ ಜೈ ಅಂದಿದ್ದಾರೆ.

ವೈಯಕ್ತಿಕ ಆರೋಪ ಪ್ರತ್ಯಾರೋಪ:

ಪರಿಷತ್ ಚುನಾವಣೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ಅವರ ನಡುವೆ ನೇರವಾದ ವೈಯಕ್ತಿಕ ಆರೋಪಗಳು ನಡೆದವು. ಚುನಾವಣೆ ಪ್ರಚಾರದ ವೇಳೆಯಲ್ಲಿ ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಹಾಗೂ ಈಶ್ವರ್​ ಖಂಡ್ರೆ 5 ಲಕ್ಷ ರೂಪಾಯಿ ಮೌಲ್ಯದ ಕನ್ನಡಕ ಹಾಕುತ್ತಾರೆ. ಈಶ್ವರ್​ ಖಂಡ್ರೆ ಮನೆ ಮುರುಕ ಎಂದು ಸಚಿವ ಖೂಬಾ ಹೇಳಿದ್ದೆ, ಚುನಾವಣೆ ಕಾವು ಜಾಸ್ತಿಯಾಗಿ ವೈಯಕ್ತಿಕ ಪ್ರತಿಷ್ಠೆಯ ಕಣವಾಗಿತ್ತು.

ಚುನಾವಣೆ ದಿನ ಜಿದ್ದಾ ಜಿದ್ದಿ :

ಚುನಾವಣೆ ಮತದಾನದ ವೇಳೆಯಲ್ಲಿ ಭಾಲ್ಕಿ ತಾಲೂಕಿನಲ್ಲಿ ಈಶ್ವರ್​ ಖಂಡ್ರೆ ಹಿಂದೆ ಬಿಜೆಪಿ ಅಭ್ಯರ್ಥಿ ಪ್ರಕಾಶ್​​​​ ಖಂಡ್ರೆ ಬೆನ್ನು ಬಿದ್ದರೆ. ಔರಾದ್ ತಾಲೂಕಿನಲ್ಲಿ ಸಚಿವ ಪ್ರಭು ಚವ್ಹಾಣ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಫಾಲೋ ಮಾಡಿದ್ದರು. ಎರಡು ಪಕ್ಷಗಳ ಹೈಡ್ರಾಮಾ ಮತಗಟ್ಟೆಗಳ ಸುತ್ತಲು ನಡೆದು ಜಿದ್ದಾ ಜಿದ್ದಿಗೆ ಕಾರಣವಾಗಿತ್ತು.

ಜಿಲ್ಲೆಯಲ್ಲಿ ಬಲವಾಯ್ತು ಪಾಟೀಲ್ ಪರಿವಾರ:

ಹುಮನಾಬಾದ್ ಪಾಟೀಲ್ ಪರಿವಾರ ಜಿಲ್ಲಾ ರಾಜಕಾರಣದಲ್ಲಿ ಇಂದಿನ ಬಲವಾಗಿ ಬೇರು ಸ್ಥಾಪಿಸಿದೆ. ಹುಮನಾಬಾದ್ ನಲ್ಲಿ ರಾಜಶೇಖರ್ ಪಾಟೀಲ್ ಶಾಸಕರಾಗಿದ್ದಾರೆ. ಅವರ ಸಹೋದರ ಪದವೀಧರ ಕ್ಷೇತ್ರದಿಂದ ಪರಿಷತ್​​​ಗೆ ಆಯ್ಕೆಯಾಗಿದ್ದಾರೆ. ಇದೀಗ ಸ್ಥಳೀಯ ಸಂಸ್ಥೆಯಿಂದ ಭೀಮರಾವ್ ಪಾಟೀಲ್ ಅವರು ಆಯ್ಕೆಯಾಗುವ ಮೂಲಕ ಜಿಲ್ಲೆಯಲ್ಲಿ ಪ್ರಬಲ ರಾಜಕೀಯ ಕುಟುಂಬವಾಗಿ ಹೊರ ಹೊಮ್ಮಿದೆ.

ಇದನ್ನೂ ಓದಿ : ಲಖನ್‌ಗೆ 'ಕುಂದಾ'ಸ್ವೀಟ್‌.. ಸಾಹುಕಾರ್‌ 'ರೆಬೆಲ್‌' ಆಟಕ್ಕೆ ಕಮರಿದ ಕವಟಗಿಮಠ-ಕಮಲ.. ಶಕ್ತಿ ಹೆಚ್ಚಿಸಿಕೊಂಡ ಜಾರಕಿಹೊಳಿ ಬ್ರದರ್ಸ್‌!!

Last Updated :Dec 14, 2021, 5:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.