ವಿಜಯನಗರ: ಜಲಾಶಯದಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕರ ಶವ ಪತ್ತೆ

author img

By

Published : Sep 12, 2022, 7:23 PM IST

the-dead-body-of-youths-found-who-missing-at-reservoir

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಮಾಲವಿ ಜಲಾಶಯದ ವೀಕ್ಷಣೆಗೆ ಬಂದಿದ್ದ ಏಳು ಜನ ಸ್ನೇಹಿತರಲ್ಲಿ, ನಾಪತ್ತೆಯಾಗಿದ್ದ ಇಬ್ಬರ ಮೃತದೇಹ ಇಂದು ಜಲಾಶಯದಲ್ಲಿ ಪತ್ತೆಯಾಗಿವೆ.

ವಿಜಯನಗರ : ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಮಾಲವಿ ಜಲಾಶಯ ದಶಕಗಳ ಬಳಿಕ ಇದೀಗ ಮಳೆಯಿಂದಾಗಿ ತುಂಬಿ ತುಳುಕುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಆದರೆ ನಿನ್ನೆ ಜಲಾಶಯ ನೋಡಲು ಬಂದಿದ್ದ ಏಳು ಜನರಲ್ಲಿ, ಎಂ.ಆರ್. ಹಾಲೇಶ್( 34), ಚರಣ್ ರಾಜ್ (33) ಎಂಬವರು ನಾಪತ್ತೆಯಾಗಿದ್ದರು.

ಅಗ್ನಿಶಾಮಕ ದಳದ ಸಿಬ್ಬಂದಿಯ ತೀವ್ರ ಶೋಧಕಾರ್ಯದ ನಂತರ ಇಂದು ನಾಪತ್ತೆಯಾಗಿದ್ದ ಈ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮೃತ ಚರಣರಾಜ್ ಕೊಟ್ಟೂರಿನ ಮೂಲದವರಾಗಿದ್ದು, ರಾಂಪುರ ಗ್ರಾಮದ ಜ್ಞಾನತುಂಗಾ ಹಿರಿಯ ಪ್ರಾರ್ಥನಾ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಮೃತ ಎಂ.ಆರ್. ಹಾಲೇಶ್ ಕೂಡ್ಲಿಗಿ ಮೂಲದವರಾಗಿದ್ದು, ಪೋಸ್ಟಲ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.

ವಿಜಯನಗರ: ಜಲಾಶಯದಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕರ ಶವ ಪತ್ತೆ

ನಿನ್ನೆ ಸ್ನೇಹಿತರೊಂದಿಗೆ ಜಲಾಶಯಕ್ಕೆ ಬಂದಿದ್ದ ಸಂದರ್ಭ ಈ ಘಟನೆ ನಡೆದಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ವಿಜಯನಗರ: ಜಲಾಶಯದಲ್ಲಿ ಈಜಲು ಹೋದ ಇಬ್ಬರು ಯುವಕರು ನಾಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.