ETV Bharat / state

ಬಳ್ಳಾರಿ ಪಾಲಿಕೆ ಚುನಾವಣೆ ಮತ ಎಣಿಕೆ: ಆಂಬ್ಯುಲೆನ್ಸ್​ಗೆ ದಾರಿ‌ ಬಿಡದ ಪೊಲೀಸರು!

author img

By

Published : Apr 30, 2021, 10:21 AM IST

ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹಿನ್ನೆಲೆ ಪೊಲೀಸರು ಆಂಬ್ಯುಲೆನ್ಸ್​ಗಳಿಗೆ ದಾರಿ ಬಿಡದ ಘಟನೆ ನಗರದಲ್ಲಿ ನಡೆದಿದೆ.

Police problem to Ambulance, Police problem to Ambulance at Bellary, Bellary municipality election result, Bellary municipality election result news,  ಆಂಬ್ಯುಲೆನ್ಸ್​ಗೆ ದಾರಿ‌ ಬಿಡದ ಪೋಲಿಸರು, ಬಳ್ಳಾರಿಯಲ್ಲಿ ಆಂಬ್ಯುಲೆನ್ಸ್​ಗೆ ದಾರಿ‌ ಬಿಡದ ಪೋಲಿಸರು, ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ, ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಸುದ್ದಿ,
ಆಂಬ್ಯುಲೆನ್ಸ್​ಗೆ ದಾರಿ‌ ಬಿಡದ ಪೋಲಿಸರು

ಬಳ್ಳಾರಿ: ಗಣಿನಾಡು ಬಳ್ಳಾರಿ ನಗರದಲ್ಲಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹಿನ್ನೆಲೆ ಕೆಲವೊಂದು ಮುಖ್ಯ ರಸ್ತೆಗಳು ಬಂದಾಗಿವೆ. ಆದ್ರೆ ಆಂಬ್ಯುಲೆನ್ಸ್​ಗಳಿಗೆ ದಾರಿ ಮಾಡಿಕೊಡಬೇಕಾದ ಪೊಲೀಸರೇ ಬೇಜವಾಬ್ದಾರಿಯಿಂದ ವರ್ತಿಸಿದ್ದು, ಆಂಬ್ಯುಲೆನ್ಸ್​ಗೆ ದಾರಿ ಬಿಡದೆ ಅನ್ಯ ಮಾರ್ಗದಿಂದ ತೆರಳುವಂತೆ ಸೂಚಿಸಿದ್ದಾರೆ.

ಚುನಾವಣೆ ಫಲಿತಾಂಶ ಹಿನ್ನೆಲೆ ನಿನ್ನೆ ಸಂಜೆಯಿಂದಲೇ ಸರ್ಕಾರಿ ಪಾಲಿಟ್ನಿಕ್ ಕಾಲೇಜ್ ರಸ್ತೆ ಸಂಪೂರ್ಣ ಬಂದ್ ಮಾಡಿದ್ದಾರೆ. ಕಾಲೇಜ್​ ಮುಂಭಾಗದಿಂದ ಜಿಲ್ಲಾಸ್ಪತ್ರೆಗೆ ತೆರಳಬೇಕಾಗಿದ್ದ ಆಂಬ್ಯುಲೆನ್ಸ್​ವೊಂದನ್ನು ಪೊಲೀಸರು ತಡೆ ಹಿಡಿದಿದ್ದಾರೆ. ರಸ್ತೆ ಬಂದ್​ ಆಗಿದೆ, ನೀವು ಅನ್ಯ ಮಾರ್ಗದಿಂದ ತೆರಳುವಂತೆ ಪೊಲೀಸರು ಚಾಲಕನಿಗೆ ಹೇಳಿದ್ದಾರೆ. ಆಂಬ್ಯುಲೆನ್ಸ್​ ಚಾಲಕ ಅನ್ಯ ಮಾರ್ಗದಿಂದ ಆಸ್ಪತ್ರೆಗೆ ತೆರಳಿದ್ದಾನೆ.

ಆಂಬ್ಯುಲೆನ್ಸ್​ಗೆ ದಾರಿ‌ ಬಿಡದ ಪೊಲೀಸರು

ರೋಗಿಗಳು ಮೃತಪಟ್ಟರೆ ಹೊಣೆ ಯಾರ?

ಚುನಾವಣಾ ಫಲಿತಾಂಶ ಪ್ರಯುಕ್ತ ನಗರದ ಕೆಲವೊಂದು ರಸ್ತೆಗಳನ್ನು ಪೊಲೀಸ್​ ಇಲಾಖೆ ಬಂದ್​ ಮಾಡಿದೆ. ಆದ್ರೆ ವಿಮ್ಸ್​ನಿಂದ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಹೋಗಲು ಕೋಟೆ ಪ್ರದೇಶದಿಂದ ಮೂರು ಕಿ.ಮೀ. ಸುತ್ತಿ ಹೋಗಬೇಕು. ಈ ವೇಳೆ ರೋಗಿಗಳ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇರುತ್ತೆ. ಒಂದು ವೇಳೆ ರೋಗಿ ಸಾವನ್ನಪ್ಪಿದ್ರೆ ಯಾರು ಹೊಣೆ ಎಂಬ ಪ್ರಶ್ನೆ ರೋಗಿಗಳ ಸಂಬಂಧಿಕರದ್ದಾಗಿದೆ.

ಅದು ಏನೇ ಇರಲಿ ಆಂಬ್ಯುಲೆನ್ಸ್​ಗಳಿಗೆ ದಾರಿ ಮಾಡಿಕೊಡಬೇಕಾದ ಪೊಲೀಸರು ಬೇರೆ ದಾರಿಗಳ ಮೂಲಕ ಆಸ್ಪತ್ರೆಗೆ ಕಳುಹಿಸುತ್ತಿರುವುದು ವಿಪರ್ಯಾಸವೇ ಸರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.