ETV Bharat / state

ಹುಚ್ಚು ನಾಯಿ ಕಡಿತ.. ಬಳ್ಳಾರಿಯಲ್ಲಿ ಇಬ್ಬರು ಮಕ್ಕಳು ಬಲಿ

author img

By

Published : Dec 3, 2022, 7:39 AM IST

ಮನೆ ಮುಂದೆ ಆಟ ಆಡುವಾಗ ಹುಚ್ಚುನಾಯಿ ಕಡಿದ ಹಿನ್ನೆಲೆ ಕುರಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿವೆ.

mad dog bites two children died in ballari
ಹುಚ್ಚು ನಾಯಿ ಕಡಿತ.. ಬಳ್ಳಾರಿಯಲ್ಲಿ ಇಬ್ಬರು ಮಕ್ಕಳು ಬಲಿ

ಬಳ್ಳಾರಿ: ಕಳೆದ ತಿಂಗಳು ಜಿಲ್ಲೆಯ ಕುರಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಹುಚ್ಚುನಾಯಿ ಕಡಿತದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುರಕ್ಷಿತಾ (3) ಹಾಗೂ ಶಾಂತಕುಮಾರ್ (7) ಮೃತ ಮಕ್ಕಳು. ಮನೆ ಮುಂದೆ ಆಟ ಆಡುವಾಗ ಮಕ್ಕಳ ಮೇಲೆ ಹುಚ್ಚುನಾಯಿ ದಾಳಿ ಮಾಡಿದೆ.

ಹುಚ್ಚುನಾಯಿ ಕಡಿದ ವಿಷಯವನ್ನು ಪಾಲಕರು ವೈದ್ಯರಿಂದ ಮುಚ್ಚಿಟ್ಟು, ಮಗು ಬಿದ್ದು ಗಾಯ ಮಾಡಿಕೊಂಡಿದೆ ಎಂದು ಹೇಳಿದ್ದಾರೆ. ಹೀಗಾಗಿ, ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಟಿಟಿ ಇಂಜೆಕ್ಷನ್ ಹಾಕಿ ಕಳಿಸಿದ್ದಾರೆ. ಇದಾದ ಬಳಿಕ ಮಕ್ಕಳಲ್ಲಿ ರೇಬೀಸ್ ರೋಗದ ಲಕ್ಷಣಗಳು ಕಂಡು ಬಂದಿವೆ. ನಂತರ ಶಾಂತಕುಮಾರ್​ನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅದಾದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ನ.22 ರಂದು ಮೃತಪಟ್ಟಿದ್ದಾನೆ.

ಹುಚ್ಚುನಾಯಿ ಕಡಿತ ಕುರಿತು ಮಾಹಿತಿ ನೀಡಿದ ತಾಲೂಕು ವೈದ್ಯಾಧಿಕಾರಿ ಮೋಹನ್ ಕುಮಾರಿ

ಇದನ್ನೂ ಓದಿ: ಎರಡು ಗಂಟೆಯಲ್ಲಿ 15 ಜನರಿಗೆ ಕಚ್ಚಿದ ಹುಚ್ಚು ನಾಯಿ : ಬೆಚ್ಚಿಬಿದ್ದ ಸವದತ್ತಿ ಜನ

ಇನ್ನು ಬಾದನಹಟ್ಟಿ ಸರಸ್ವತಿ ಮತ್ತು ಈರಣ್ಣಾ ಎಂಬುವರ ಪುತ್ರಿ ಸುರಕ್ಷಿತ ಕೂಡ ನವೆಂಬರ್ 21 ರಂದು ಮೃತಪಟ್ಟಿದ್ದಾಳೆ. ಪೋಷಕರು ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡಿಸಿದ್ರೆ ಮಕ್ಕಳು ಬದಕುವ ಸಾಧ್ಯತೆ ಇತ್ತು. ಆದ್ರೆ, ಹೆತ್ತವರ ನಿರ್ಲಕ್ಷ್ಯದಿಂದ ಮಕ್ಕಳು ಮೃತಪಟ್ಟಿವೆ ಎಂದು ತಾಲೂಕು ವೈದ್ಯಾಧಿಕಾರಿ ಮೋಹನ್ ಕುಮಾರಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.