ಚಿಕ್ಕೋಡಿ: ಡಿ.5 ರಂದು ನಡೆಯಲಿರುವ ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ 18 ಅಭ್ಯರ್ಥಿಗಳಿಂದ 25 ನಾಮಪತ್ರಗಳು ಸಲ್ಲಿಕೆಯಾಗಿವೆ. ಹಾಗೆಯೇ ಕಾಗವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಒಟ್ಟು 16 ಅಭ್ಯರ್ಥಿಗಳಿಂದ 17 ನಾಮಪತ್ರಗಳು ಸಲ್ಲಿಕೆಯಾಗಿವೆ.
18ರ ಪೈಕಿ 2 ತಿರಸ್ಕೃತವಾಗಿದ್ದು, 16 ನಾಮಪತ್ರಗಳು ಉಳಿದುಕೊಂಡಿವೆ. ಇದರಲ್ಲಿ ಪಕ್ಷೇತರ ಅಭ್ಯರ್ಥಿ ಸದಾಶಿವ ಕೆ ಬುಟಾಳಿ ಹಾಗೂ ಶಹಾಜಹಾನ ಡೊಂಗರಗಾಂವ ಪೈಕಿ ಒಬ್ಬರು ಸ್ಪರ್ಧೆ ಮಾಡುವ ಲಕ್ಷಣಗಳು ಎದ್ದು ಕಾಣಿತ್ತಿದೆ. ಇಬ್ಬರಲ್ಲಿ ಒಬ್ಬರು ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳುವ ನೀರಿಕ್ಷೆ ಇದೆ ಎಂದು ಮತ ಕ್ಷೇತ್ರದಲ್ಲಿ ಕೇಳಿ ಬರುವಂತಹ ಮಾತುಗಳಾಗಿವೆ.
ನಾಮಪತ್ರ ಸಲ್ಲಿಸಿದವರು:
1.ಗಜಾನನ ಮಂಗಸೂಳಿ(ಕಾಂಗ್ರೆಸ್), 2. ಮಹೇಶ್ ಕುಮಟಳ್ಳಿ (ಬಿಜೆಪಿ), 3.ಗುರಪ್ಪ ದಾಶ್ಯಾಳ(ಜೆಡಿಎಸ್), 4.ಶಹಾಜಹಾನ ಡೊಂಗರಗಾಂವ( ಪಕ್ಷೇತರ), 5.ನಾಗನಾಥ (ಉತ್ತಮ ಪ್ರಜಾಕೀಯ ಪಕ್ಷ), 6.ದಾವುಲಸಾಬ ನದಾಫ( ರಾಷ್ಟ್ರೀಯ ಮಹಿಳಾ ಪಕ್ಷ), 7.ಶಿದ್ರಾಮಗೌಡ ಪಾಟೀಲ್ ( ಪಕ್ಷೇತರ), 8.ಬಾಹುಬಲಿ ಅಜ್ಜಪ್ಪಗೋಳ( ಪಕ್ಷೇತರ), 9. ರವಿ ಪಡಸಲಗಿ ( ಪಕ್ಷೇತರ), 10. ರಸೂಲಸಾಬ ನದಾಫ( ಪಕ್ಷೇತರ), 11. ರಾಜು ಡವರಿ( ಪಕ್ಷೇತರ), 12.ಇಮ್ರಾನ ಪಟೇಲ (ಪಕ್ಷೇತರ), 13. ಸದಾಶಿವ ಕೆ ಬುಟಾಳಿ ( ಪಕ್ಷೇತರ), 14. ಗುರುಪುತ್ರ ಕುಳ್ಳುರ ( ಪಕ್ಷೇತರ), 15. ಶ್ರೀಶೈಲ ಹಳ್ಳದಮಳ( ಪಕ್ಷೇತರ), 16. ವಿನಾಯಕ ಮಠಪತಿ( ಕರ್ನಾಟಕ ಜನತಾ ಪಕ್ಷ)
ಕಾಗವಾಡದಲ್ಲಿ 10 ನಾಮಪತ್ರಗಳು ಉರ್ಜಿತ:
ಸಲ್ಲಿಕೆಯಾದ 17ರಲ್ಲಿ ಒಬ್ಬರು ಮಾತ್ರ 2 ನಾಮಪತ್ರ ಸಲ್ಲಿಕೆ ಮಾಡಿದ್ದರು. ಅದರಲ್ಲಿ 6 ತಿರಸ್ಕೃತವಾಗಿದ್ದು, 10 ನಾಮಪತ್ರಗಳು ಉರ್ಜಿತವಾಗಿವೆ.
1. ಭರಮಗೌಡ ಕಾಗೆ(ರಾಜು ಕಾಗೆ) ಕಾಂಗ್ರೆಸ್, 2. ಸಚಿನ್ ಕಲ್ಲಪ್ಪ ಆಲಗುರೆ, ಉತ್ತಮ ಪ್ರಜಾಕಿಯ ಪಕ್ಷ, 3. ಶ್ರೀಮಂತ ಪಾಟೀಲ್, ಬಿಜೆಪಿ, 4. ಮುರಗೆಪ್ಪ ದೇವರೆಡ್ಡಿ, ಪಕ್ಷೇತರ, 5. ಶ್ರೀಶೈಲ್ ತುಗಶೆಟ್ಟಿ, ಜೆಡಿಎಸ್, 6. ದೀಪಕ್ ಬುರ್ಲಿ, ಪಕ್ಷೇತರ, 7. ಅರ್ಚನಾ ಮೋಳೆಕರ್, ಪಕ್ಷೇತರ, 8.ಸಂದೀಪ್ ಕಾಂಬಳೆ, ಪಕ್ಷೇತರ, 9. ವಿವೇಕ ಶೆಟ್ಟಿ, ವಂಚಿತ ಬಹುಜನ ಆಗಾಡಿ, 10. ಅಮುಲ್ ಸಾರದೆ, ಪಕ್ಷೇತರ.
ಹೀಗೆ ಒಟ್ಟು 10 ಜನರ ನಾಮಪತ್ರಗಳು ಉರ್ಜಿತಗೊಂಡಿವೆ ಎಂದು ಅಥಣಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಜೀನಾಲಿ ಮೊಕಾಶಿ ಮಾಹಿತಿ ನೀಡಿದ್ದಾರೆ.