ETV Bharat / state

'ನಾನು ಹಿಂದೂ ಎಂದು ಗರ್ವದಿಂದ ಹೇಳಿ': ಬೆಳಗಾವಿಯಲ್ಲಿ ಅಸ್ಸಾಂ ಸಿಎಂ

author img

By

Published : Mar 17, 2023, 8:43 AM IST

Updated : Mar 17, 2023, 10:18 AM IST

ಔರಂಗಜೇಬ್ ಅಂತಹವರನ್ನು ಭಾರತ ಸಲಹಿದೆ. ಅವರನ್ನೆದುರಿಸಿ ನಿಲ್ಲುವಂತಹ ಧೈರ್ಯಶಾಲಿ ಛತ್ರಪತಿ ಶಿವಾಜಿ ಮಹಾರಾಜರಂತಹ ರಾಜರಿಗೂ ಭಾರತ ಜನ್ಮ ನೀಡಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹೇಳಿದರು.

ಅಸ್ಸೋಂ ಸಿಎಂ
ಅಸ್ಸೋಂ ಸಿಎಂ

ಬೆಳಗಾವಿ: "ಬೆಳಗಾವಿಗೆ ಬಂದಿರುವುದು ನನಗೆ ತೀರ್ಥಯಾತ್ರೆಗೆ ಬಂದಿರುವ ರೀತಿ ಅನುಭವವಾಗುತ್ತಿದೆ. ಭಕ್ತಿ ಭಾವದಿಂದಲೇ ಈ ವಾತಾವರಣ ನಿರ್ಮಾಣವಾದಂತಿದೆ" ಎಂದು ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹರ್ಷ ವ್ಯಕ್ತಪಡಿಸಿದರು. ಗುರುವಾರ ಬೆಳಗಾವಿಯ ಶಹಾಪುರದ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವನ ಬಳಿಯ ಶಿವಚರಿತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

"ನಾನು ಗೂಗಲ್ ಮ್ಯಾಪ್‌ನಲ್ಲಿ ನೋಡ್ತಿದ್ದೆ. ಅಸ್ಸಾಂ ಹಾಗೂ ಬೆಳಗಾವಿ ನಡುವೆ ಸುಮಾರು 3 ಸಾವಿರ ಕಿ.ಮೀ ಅಂತರವಿದೆ. ಆದರೆ ನನಗೆ ಇಲ್ಲಿಗೆ ಬಂದಿದ್ದು ತೀರ್ಥಕ್ಷೇತ್ರಕ್ಕೆ ಬಂದ‌ ಅನುಭವ ನೀಡಿದೆ. ಬೆಳಗಾವಿ ನೆಲಕ್ಕೆ ಛತ್ರಪತಿ ಶಿವಾಜಿ ಮಹಾರಾಜರಿಂದ‌ ಹಿಡಿದು ಮಹಾತ್ಮ ಗಾಂಧೀಜಿಯವರೆಗೆ ಹಲವು ಮಹಾತ್ಮರು ಭೇಟಿ ನೀಡಿದ್ದಾರೆ" ಎಂದರು.

  • नरेंद्र मोदी जी के नेतृत्व में भारत में नए इतिहास का निर्माण हो रहा है। नया भारत वैक्सीन ख़ुद बना सकता है, ग़रीबों को मुफ़्त अनाज दे सकता है, एक्सप्रेस-वे बना सकता है। pic.twitter.com/awtWMsG6NT

    — Himanta Biswa Sarma (@himantabiswa) March 16, 2023 " class="align-text-top noRightClick twitterSection" data=" ">

"ಇಡೀ ದೇಶದಲ್ಲಿಯೇ ಇನ್ಮುಂದೆ‌ ಸನಾತನ ಧರ್ಮವೇ ಉಳಿಯಲಿದೆ. ಶಿವಾಜಿ ಮಹಾರಾಜರ ಚಿಂತನೆಗಳು ಎಲ್ಲೆಲ್ಲೂ ಇರಲಿವೆ. ಹಿಂದೂಗಳು ಗರ್ವದಿಂದ ಹೇಳಿಕೊಳ್ಳಬೇಕು ನಾನೊಬ್ಬ ಹಿಂದೂ ಎಂದು. ಆಗ ಮಾತ್ರ ಸನಾತನ ಧರ್ಮ ಭಾರತದಲ್ಲಿ ಉಳಿಯಲು ಸಾಧ್ಯ" ಎಂದು ಹೇಳಿದರು.

"ಈ ನೆಲದಲ್ಲಿ ಔರಂಗಜೇಬ್ ಅಂತಹವರನ್ನು ಭಾರತ ತಾಳ್ಮೆಯಿಂದ ಸಲಹಿದೆ. ಆದ್ರೆ ಅವರನ್ನು ಎದುರಿಸಿ ನಿಲ್ಲುವಂತಹ ಛತ್ರಪತಿ ಶಿವಾಜಿ ಮಹಾರಾಜರಂತಹ ರಾಜರಿಗೂ ಭಾರತಮಾತೆ ಜನ್ಮ ನೀಡಿದ್ದರು. ಪೂರಾ ಭಾರತ ಔರಂಗಜೇಬ್‌ನ ನಿಯಂತ್ರಣದಲ್ಲಿತ್ತು ಎಂದು ಇತಿಹಾಸಕಾರರು ಹೇಳ್ತಾರೆ. ಆದ್ರೆ ಔರಂಗ್‌ಜೇಬ್‌ಗಿಂತ ನೂರು ಪಟ್ಟು ಧೈರ್ಯಶಾಲಿಯಾಗಿದ್ದವರು ಛತ್ರಪತಿ ಶಿವಾಜಿ ಮಹಾರಾಜರು" ಎಂದು ತಿಳಿಸಿದರು.

  • बेलगाम में सब जय भवानी जय शिवाजी और भारत माता की जय का नारा लगा रहे हैं। @BJP4Karnataka pic.twitter.com/yPH2B79mOf

    — Himanta Biswa Sarma (@himantabiswa) March 16, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಮೋದಿ ವ್ಯಕ್ತಿ ಅಲ್ಲ ದೇಶದ ಶಕ್ತಿ: ಬಳ್ಳಾರಿಯಲ್ಲಿ ಅಸ್ಸಾಂ ಸಿಎಂ ಹೇಮಂತ್​ ಬಿಸ್ವಾ

"ಕಳೆದ ಆರು ವರ್ಷಗಳ ಹಿಂದೆ ಅಭಯ್ ಪಾಟೀಲ್ ಈ ಕಾರ್ಯಕ್ರಮದ ಕನಸು ಕಂಡಿದ್ರು. ಆದ್ರೆ ಕಾಂಗ್ರೆಸ್ ಸರ್ಕಾರ ಅದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಈ ಕಾರ್ಯಕ್ರಮ ಈಗ ಉದ್ಘಾಟನೆಗೊಂಡಿರುವುದು ಸಂತೋಷ ತಂದಿದೆ" ಎಂದು ಹೇಳಿದರು.

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್, ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ, ಬೆಳಗಾವಿ ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನಾ, ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜಿರಲಿ ಸೇರಿ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ನಿಂದ ಭಾರತ ಜೋಡೋ ಅಲ್ಲ, ತೋಡೋ ಯಾತ್ರೆ: ಅಸ್ಸೋಂ ಸಿಎಂ ಬಿಸ್ವಾಸ್

ರಾಜ್ಯ ವಿಧಾನಸಭೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿಯೂ ಕೆಲವೆಡೆ ಪಾಲ್ಗೊಂಡು ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಕೊಪ್ಪಳ, ಬಳ್ಳಾರಿ ಸೇರಿದಂತೆ ಹಲವೆಡೆ ಪ್ರಚಾರ ಕೈಗೊಂಡಿದ್ದಾರೆ. "ರಾಹುಲ್ ಬಾಬಾ ಭಾರತ ಒಗ್ಗೂಡಿಸುವ ಉದ್ದೇಶಕ್ಕೆ ಭಾರತ ಜೋಡೋ ಯಾತ್ರೆ ಹಮ್ಮಿಕೊಂಡಿದ್ದರು. ವಾಸ್ತವದಲ್ಲಿ ಭಾರತ ತೋಡೋ (ಇಬ್ಭಾಗಿಸುವ) ಯಾತ್ರೆ ಆರಂಭಿಸಿದ್ದೇ ರಾಹುಲ್ ಅವರ ತಾತ ನೆಹರು" ಎಂದು ಗಂಗಾವತಿಯಲ್ಲಿ ಮತ ಪ್ರಚಾರದ ವೇಳೆ ಅಸ್ಸಾಂ ಸಿಎಂ ದೂರಿದ್ದರು.

ಇದನ್ನೂ ಓದಿ: ಕೊಪ್ಪಳದ ಗವಿಮಠಕ್ಕೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವ ಶರ್ಮಾ ಭೇಟಿ

Last Updated : Mar 17, 2023, 10:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.