ETV Bharat / state

ಸಿಡಿ ಪ್ರಕರಣ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಬಂದ ರಮೇಶ್​ ಜಾರಕಿಹೊಳಿ

author img

By

Published : Mar 30, 2021, 10:13 AM IST

Updated : Mar 30, 2021, 11:18 AM IST

Ramesh Jarkiholi arrived native place, Ramesh Jarkiholi arrived native place after cd case, Ramesh Jarkiholi arrived native place after cd case in Belagavi, Belagavi news, Belagavi lok sabha election, Belagavi lok sabha election news, ಮೊದಲ ಬಾರಿ ಸ್ವಕ್ಷೇತ್ರಕ್ಕೆ ಆಗಮಿಸಿರುವ ರಮೇಶ್ ಜಾರಕಿಹೊಳಿ, ಸಿಡಿ ಪ್ರಕರಣ ಬಳಿಕ ಮೊದಲ ಬಾರಿ ಸ್ವಕ್ಷೇತ್ರಕ್ಕೆ ಆಗಮಿಸಿರುವ ರಮೇಶ್ ಜಾರಕಿಹೊಳಿ, ಬೆಳಗಾವಿ ಸುದ್ದಿ, ಬೆಳಗಾವಿ ಲೋಕಸಭಾ ಚುನಾವಣೆ, ಬೆಳಗಾವಿ ಲೋಕಸಭಾ ಚುನಾವಣೆ ಸುದ್ದಿ,
ಸಿಡಿ ಪ್ರಕರಣ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಬಂದ ರಮೇಶ್​ ಜಾರಕಿಹೊಳಿ

06:14 March 30

ಸಿಡಿ ಪ್ರಕರಣ ಬಯಲಾದ ಬಳಿಕ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸ್ವಕ್ಷೇತ್ರಕ್ಕೆ ಆಗಮಿಸಿದ್ದಾರೆ.

ಬೆಳಗಾವಿ: ಸಿಡಿ ಪ್ರಕರಣ ಬಯಲಾದ ಬಳಿಕ ಮೊದಲ ಬಾರಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಸ್ವಕ್ಷೇತ್ರ ಗೋಕಾಕಿಗೆ ಆಗಮಿಸಿದ್ದಾರೆ. ಬರೊಬ್ಬರಿ 29 ದಿನಗಳ ಬಳಿಕ ರಮೇಶ್ ಗೋಕಾಕಿಗೆ ಆಗಮಿಸಿದ್ದು, ರಮೇಶ್ ಭೇಟಿಗಾಗಿ ಬೆಂಬಲಿಗರು ದೌಡಾಯಿಸುತ್ತಿದ್ದಾರೆ.

ಇಂದು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ರಮೇಶ್ ಜಾರಕಿಹೊಳಿ‌ ಭಾಗಿಯಾಗಲಿದ್ದಾರೆ. ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರವಾಗಿ ರಮೇಶ್ ಜಾರಕಿಹೊಳಿ‌ ಪ್ರಚಾರ ಮಾಡಲಿದ್ದಾರೆ.

ಗೋಕಾಕ ಮತಕ್ಷೇತ್ರದಿಂದ ರಮೇಶ್ ಬೆಂಬಲಿಗರು ಹಾಗೂ ಬಿಜೆಪಿಯ ನೂರಾರು ಕಾರ್ಯಕರ್ತರು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಇದಕ್ಕಾಗಿ ಗೋಕಾಕ್‌ನ ರಮೇಶ್ ಜಾರಕಿಹೊಳಿ‌ ಗೃಹಕಚೇರಿ ಎದುರು ಬೆಂಬಲಿಗರು ಜಮಾವಣೆಗೊಳ್ಳುತ್ತಿದ್ದಾರೆ.

ಸುಮಾರು 60ಕ್ಕೂ ಹೆಚ್ಚು ವಾಹನಗಳಲ್ಲಿ ಬೆಂಬಲಿಗರು ಬೆಳಗಾವಿಗೆ ಆಗಮಿಸಲಿದ್ದಾರೆ. ಆ ಮೂಲಕ ಸಿಎಂ ಮುಂದೆ ರಮೇಶ್ ಜಾರಕಿಹೊಳಿ‌ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

Last Updated : Mar 30, 2021, 11:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.