ETV Bharat / state

ಬೆಳಗಾವಿ: ಕಟ್ಟಡ ಕಾರ್ಮಿಕನ ಬರ್ಬರ ಹತ್ಯೆ, ರಸ್ತೆಬದಿ ಶವ ಪತ್ತೆ

author img

By

Published : Jan 14, 2022, 3:04 PM IST

ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿ ಶವವನ್ನು ರಸ್ತೆ ಪಕ್ಕ ಬಿಸಾಡಿ ಹೋಗಲಾಗಿದೆ. ಈ ಘಟನೆ ಕಿತ್ತೂರಿನ ಬಚ್ಚನಕೇರಿ ಕ್ರಾಸ್ ಬಳಿ ನಡೆದಿದೆ.

ಕಟ್ಟಡ ಕಾರ್ಮಿಕನ ಬರ್ಬರ ಹತ್ಯೆಮಾಡಿ ರಸ್ತೆ ಪಕ್ಕ ಶವ ಬಿಸಾಕಿದ ಹಂತಕರು
ಕಟ್ಟಡ ಕಾರ್ಮಿಕನ ಬರ್ಬರ ಹತ್ಯೆಮಾಡಿ ರಸ್ತೆ ಪಕ್ಕ ಶವ ಬಿಸಾಕಿದ ಹಂತಕರು

ಬೆಳಗಾವಿ: ಕಟ್ಟಡ ಕಾರ್ಮಿಕನನ್ನು ಬರ್ಬರವಾಗಿ ಹತ್ಯೆಗೈದಿರುವ ಹಂತಕರು ರಸ್ತೆ ಪಕ್ಕ ಶವ ಬಿಸಾಕಿ ಹೋಗಿರುವ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಬಚ್ಚನಕೇರಿ ಕ್ರಾಸ್ ಬಳಿ ನಡೆದಿದೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಮರೀಕಟ್ಟಿ ಗ್ರಾಮದ ರಮೇಶ್ ಮಾದಿಗರ (36) ಕೊಲೆಯಾದ ದುರ್ದೈವಿ. ರಮೇಶ್ ಹಿರೇಬಾಗೇವಾಡಿಯಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕಿತ್ತೂರಲ್ಲಿ ಕೆಲಸ ಇದೆ ಎಂದು ಹೇಳಿ‌ ಮನೆಯಿಂದ ತೆರಳಿದ್ದನಂತೆ.

ಕಟ್ಟಡ ಕಾರ್ಮಿಕನ ಬರ್ಬರ ಹತ್ಯೆಮಾಡಿ ರಸ್ತೆ ಪಕ್ಕ ಶವ ಬಿಸಾಕಿದ ಹಂತಕರು
ಕಟ್ಟಡ ಕಾರ್ಮಿಕ ರಮೇಶ್ ಮಾದಿಗರ ಮೃತದೇಹ

ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ ತೆರಳುವ ವಿಚಾರದಲ್ಲಿ ಜಗಳ: ಪತ್ನಿ ಕೊಂದ ಪತಿ

ಕೊಲೆಗೆ ನಿಖರ ಕಾರಣ‌ ತಿಳಿದು ಬಂದಿಲ್ಲ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ರಮೇಶ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.