ETV Bharat / state

ಕಾನೂನು ಸುವ್ಯವಸ್ಥೆ ಜೊತೆ ಜನಸೇವೆಗೆ ಮುಂದಾದ ಪಿಎಸ್ಐಗಳು

author img

By

Published : Jun 10, 2021, 1:48 PM IST

ಕಾನೂನು ವ್ಯವಸ್ಥೆ ಜೊತೆ ಜನಸೇವೆಗೂ ನಾವು ಸೈ ಎಂದ ಬೆಳಗಾವಿ ಜಿಲ್ಲಾ ಚಿಕ್ಕೋಡಿ ಪೊಲೀಸ್ ಠಾಣೆ ಹಾಗೂ ನಿಪ್ಪಾಣಿ ಠಾಣೆಯ ಪಿಎಸ್ಐಗಳು ಬಡ ಜನರಿಗೆ ಆಹಾರದ ಕಿಟ್​ ವಿತರಿಸುವ ಮೂಲಕ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

Belagavi police
Belagavi police

ಚಿಕ್ಕೋಡಿ (ಬೆಳಗಾವಿ): ಲಾಕ್‌ಡೌನ್ ‌ಪಾಲನೆ ಜೊತೆ ನೊಂದವರ ಹೊಟ್ಟೆ ತುಂಬಿಸಿ ಪಿಎಸ್ಐಗಳು ಮಾನವೀಯತೆ ಮೆರೆದಿದ್ದಾರೆ. ಕಾನೂನು ವ್ಯವಸ್ಥೆ ಜೊತೆ ಜನಸೇವೆಗೂ ನಾವು ಸೈ ಎಂದ ಚಿಕ್ಕೋಡಿ, ನಿಪ್ಪಾಣಿ ಪಿಎಸ್ಐಗಳು ಬಡ ಜನರಿಗೆ ಆಹಾರದ ಕಿಟ್​ ವಿತರಿಸುವ ಮೂಲಕ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

Belagavi police
ಜನಸೇವೆಗೆ ಮುಂದಾದ ಪಿಎಸ್ಐಗಳು

ಬೆಳಗಾವಿ ಜಿಲ್ಲಾ ಚಿಕ್ಕೋಡಿ ಪೊಲೀಸ್ ಠಾಣೆ ಪಿಎಸ್ಐ ರಾಕೇಶ್ ಬಗಲಿ ಹಾಗೂ ನಿಪ್ಪಾಣಿ ಶಹರ ಪೋಲಿಸ್ ಠಾಣೆ ಪಿಎಸ್ಐ ಅನಿಲ್‌ ಕುಂಬಾರ ಅಧಿಕಾರಿಗಳು ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.

Belagavi police
ಜನಸೇವೆಗೆ ಮುಂದಾದ ಪಿಎಸ್ಐಗಳು

ಲಾಕ್‌ಡೌನ್​‌ನಿಂದಾಗಿ ನೊಂದವರನ್ನು ಗುರುತಿಸಿ ನೆರವು ನೀಡಲು ಮುಂದಾದ ಈ‌ ಇಬ್ಬರು ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡುವುದಲ್ಲದೆ ಹಸಿವಿನಿಂದ‌ ನರಳುತ್ತಿರುವ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿ 50ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಅಧಿಕಾರಿಗಳ ಈ ಸೇವೆಗೆ ಚಿಕ್ಕೋಡಿ ಹಾಗೂ ನಿಪ್ಪಾಣಿ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Belagavi police
ಜನಸೇವೆಗೆ ಮುಂದಾದ ಪಿಎಸ್ಐಗಳು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.