ETV Bharat / state

ಸೋಂಕಿತರ ಸಾವಿನ ಸಂಖ್ಯೆ ಕಡಿಮೆಯಾಗ್ತಿಲ್ಲ: ತಜ್ಞರು ಕೊಡುವ ಕಾರಣ ಹೀಗಿದೆ..

author img

By

Published : May 25, 2021, 2:13 PM IST

Updated : May 25, 2021, 5:38 PM IST

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಮೃತಪಡುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಹೋದಂತೆ, ಕೋವಿಡ್ ಸೋಂಕಿತರ ಸಾವಿಗೆ ಹಲವು ಕಾರಣಗಳು ಕಂಡು ಬರುತ್ತವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Covid death in Bengaluru
ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ

ಬೆಂಗಳೂರು: ರಾಜ್ಯಾದ್ಯಂತ, ಅದರಲ್ಲೂ ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಸಮಾಧಾನ ತಂದಿದೆಯಾದರೂ, ಕೋವಿಡ್ ಮರಣ ಮೃದಂಗಕ್ಕೆ ತಡೆ ಬೀಳದಿರುವುದು ಭೀತಿ ಹುಟ್ಟಿಸಿದೆ.

ನಗರದಲ್ಲಿ ಪ್ರತಿನಿತ್ಯ 26 ಸಾವಿರದಷ್ಟು ಬರುತ್ತಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ, 5 ರಿಂದ 6 ಸಾವಿರಕ್ಕೆ ಇಳಿಕೆಯಾಗಿದೆ. ಆದರೆ, ಸಾವಿನ ಸಂಖ್ಯೆ ಮಾತ್ರ 300 ರ ಆಸುಪಾಸಿನಲ್ಲೇ ಇದೆ. ಐಸಿಯು, ವೆಂಟಿಲೇಟರ್ ಕೊರತೆಯೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗ್ತಿದೆ. ಕಳೆದ ಹತ್ತು ದಿನದಲ್ಲಿ ರಾಜ್ಯಾದ್ಯಂತ 5 ಸಾವಿರಕ್ಕೂ ಹೆಚ್ಚು ಮಂದಿ ಕೋವಿಡ್​ನಿಂದ ಮೃತಪಟ್ಟಿದ್ದಾರೆ.

ತಜ್ಞರು ಕೊಡುವ ಕಾರಣ ಹೀಗಿದೆ.

ಅಲ್ಲದೆ, ರಾಜ್ಯದ ಏಳು ಜಿಲ್ಲೆಗಳಾದ ರಾಮನಗರ, ಕೊಡಗು, ಚಾಮರಾಜನಗರ, ಉತ್ತರಕನ್ನಡ, ಯಾದಗಿರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಕೋವಿಡ್ ಸಾವುಗಳು ಹೆಚ್ಚಾಗುತ್ತಿವೆ.

ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ:

ಮೇ ತಿಂಗಳ ಮೊದಲೆರಡು ವಾರಗಳಲ್ಲಿ ಅತಿಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬಂದ 10-15 ದಿನಗಳ ಬಳಿಕ ಕೋವಿಡ್ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುವುದು ಸಾಮಾನ್ಯ. ಐಸಿಯುನಲ್ಲಿರುವ ರೋಗಿಗಳು ಚೇತರಿಕೆ ಕಾಣದೆ ಮೃತಪಡುವ ಸಾಧ್ಯತೆ ಇರುತ್ತದೆ. ಈಗ ಪ್ರಕರಣಗಳು ಹೊಸ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಕೂಡ ಕಡಿಮೆಯಾಗಬಹುದೆಂದು ಡಾ.ಆಂಜನಪ್ಪ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ತಡವಾಗಿ ಕೋವಿಡ್ ಪರೀಕ್ಷೆ ಮಾಡಿಕೊಳ್ಳುತ್ತಿರುವುದು, ಸರಿಯಾದ ವೈದ್ಯಕೀಯ ಸಲಹೆ ಸಿಗದೆ ಔಷಧಗಳನ್ನು ತೆಗೆದುಕೊಳ್ಳುತ್ತಿರುವಲ್ಲಿ ವಿಳಂಬವಾಗುತ್ತಿರುವುದರಿಂದ ಮನೆಯಲ್ಲೇ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆರೋಗ್ಯ ಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗಿದ ನಂತರ ಐಸಿಯು ಬೆಡ್​ಗಾಗಿ ಹುಡುಕಾಟ ನಡೆಸುತ್ತಿರುವುದು. ಯುವಕರಲ್ಲಿ ಏಕಾಏಕಿ ಸೋಂಕು ಉಲ್ಬಣಿಸಿ ಆಗುತ್ತಿರುವ ಸಾವುಗಳು, ಸೋಂಕಿತರು ಆಮ್ಲಜನಕದ ಪ್ರಮಾಣ ಪ್ರತಿ ದಿನ ಪರೀಕ್ಷಿಸಿಕೊಳ್ಳದೆ ಇರುವುದು ಕೂಡ ಇದಕ್ಕೆ ಕಾರಣವಾಗಿದೆ.

ವಾರದ ಕೋವಿಡ್ ಸಾವಿನ ಲೆಕ್ಕ :

ಕ್ರ. ಸಂದಿನಾಂಕರಾಜ್ಯಬೆಂಗಳೂರು
1ಮೇ 17476 239
2ಮೇ 18525298
3ಮೇ 19468 218
4ಮೇ 20548289
5ಮೇ 21353 129
6ಮೇ 22451 200
7ಮೇ 23626 362
8ಮೇ 24 529 297

ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, ಆಮ್ಲಜನಕ ಬೆಡ್​ಗಳ ಲಭ್ಯತೆ ಇದೆ. ಸಿಸಿ ಕೇಂದ್ರಗಳಲ್ಲಿಯೂ 3 ಸಾವಿರಕ್ಕಿಂತ ಹೆಚ್ಚು ಸಾಮಾನ್ಯ ಬೆಡ್​ಗಳು ಇವೆ. ಇದರಲ್ಲಿ ಸಾವಿರ ಆಕ್ಸಿಜನ್ ಬೆಡ್​ಗಳು ಇವೆ.‌ ಸ್ಟೆಪ್ ಡೌನ್ ಆಸ್ಪತ್ರೆಗಳಲ್ಲಿ 1,200 ಬೆಡ್​ಗಳು ಇವೆ. ಹೀಗಾಗಿ, ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಬ್ಲ್ಯಾಕ್​ ಫಂಗಸ್ ಬಗ್ಗೆಯೂ ತಜ್ಞರ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಮೂರನೇ ಅಲೆಯ ಪೂರ್ವ ಸಿದ್ಧತೆಗಳ ಬಗ್ಗೆಯೂ ಚರ್ಚೆ ನಡೆಯುತ್ತಿವೆ. ಐಸಿಯು ಬೆಡ್ ಹೆಚ್ಚಳದ ಬಗ್ಗೆ ಚಿಂತಿಸಲಾಗ್ತಿದೆ ಎಂದರು.

Last Updated : May 25, 2021, 5:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.