ETV Bharat / state

ನಮ್ಮಲ್ಲಿ ರಾಗಿ ಮುದ್ದೆ ಇದ್ದಾಗ ಪಿಜ್ಜಾ, ಬರ್ಗರ್ ಏಕೆ?: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪ್ರಶ್ನೆ

author img

By

Published : Aug 24, 2021, 5:59 PM IST

ನಾವು ಪಶ್ಚಿಮ ಮತ್ತು ಪಾಶ್ಚಾತ್ಯೀಕರಣ ಅಳವಡಿಸಿಕೊಳ್ಳಲು ಆರಂಭಿಸಿದೆವು. ನಮ್ಮ ಕೆಲವು ಮಕ್ಕಳು ಕೂಡ ಆ ದೌರ್ಬಲ್ಯ ಬೆಳೆಸಿಕೊಂಡಿದ್ದಾರೆ. ವಿವಿಧ ಕಂಪನಿಗಳ ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ವಿಭಾಗಗಳು ಕುರುಕಲು ತಿಂಡಿಯನ್ನು ಜನಪ್ರಿಯಗೊಳಿಸಿದನ್ನು ಗಮನಿಸಬಹುದಾಗಿದೆ. ಚಿಕನ್ ಮಂಚೂರಿಯನ್ ಬಗ್ಗೆ ಹೆಚ್ಚಿನವರು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ನಮ್ಮದೇ ಆದ ಸ್ಥಳೀಯವಾಗಿ ತಯಾರಿಸಿದ ಬಿರಿಯಾನಿ ಇರುವಾಗ ಮಂಚೂರಿಯನ್ ಕಡೆ ಆಸಕ್ತಿ ಯಾಕೆ ಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದರು.

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಬೆಂಗಳೂರು: ಆರೋಗ್ಯ ಕಾಪಾಡಿಕೊಳ್ಳಲು ಜನರು ಜಂಕ್​ಫುಡ್ ಅನ್ನು ತ್ಯಜಿಸಿ ಮತ್ತು ಸಾಂಪ್ರದಾಯಿಕ ಭಾರತೀಯ ಆಹಾರವನ್ನು ಅನುಸರಿಸುವಂತೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮನವಿ ಮಾಡಿದರು.

ರಾಜಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ಆಹಾರ ಪದ್ಧತಿ ಕುರಿತು ಪ್ರಸ್ತಾಪಿಸಿದರು. ಜಂಕ್ ಫುಡ್ಸ್ ತಪ್ಪಿಸಿ. ಸಾಂಪ್ರದಾಯಿಕ, ಸ್ಥಳೀಯ ಆಹಾರ ಸೇವಿಸಿ. ಅವುಗಳಲ್ಲಿ ಕೆಲವು ಈಗ ಆಹಾರ ಕ್ಷೇತ್ರದ ಜನಪ್ರಿಯ ಪ್ರಪಂಚವಾಗಿ ಮಾರ್ಪಟ್ಟಿವೆ. ನಮ್ಮದೇ ಆದ ಸಾಂಪ್ರದಾಯಿಕ ಆಹಾರವನ್ನು ಹೊಂದಿರುವಾಗ ನಾವು ಪಿಜ್ಜಾ ಮತ್ತು ಬರ್ಗರ್ಗಳಂತಹ ಜಂಕ್ ಫುಡ್​ಗಳ ಹಿಂದೆ ಏಕೆ ಓಡಬೇಕು ಎಂದು ತಿಳಿಯಲು ಪ್ರಯತ್ನಿಸಿದೆ. ಕುರುಕಲು ತಿಂಡಿ (ಜಂಕ್ ಫುಡ್) ಕೆಲವು ವಿದೇಶಗಳ ಪರಿಸ್ಥಿತಿಗಳಿಗೆ ಸೂಕ್ತವಾಗುತ್ತಾರೆ, ಆದರೆ ಅವು ಭಾರತೀಯ ಪರಿಸ್ಥಿತಿಗಳಿಗೆ ಸೂಕ್ತವಲ್ಲ ಎಂದರು.

ರಾಜಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಸಮಾರಂಭ
ರಾಜಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಸಮಾರಂಭ

ದುರದೃಷ್ಟವಶಾತ್, ನಾವು ಪಶ್ಚಿಮ ಮತ್ತು ಪಾಶ್ಚಾತ್ಯೀಕರಣವನ್ನು ಅಳವಡಿಸಿಕೊಳ್ಳಲು ಆರಂಭಿಸಿದೆವು. ನಮ್ಮ ಕೆಲವು ಮಕ್ಕಳು ಕೂಡ ಆ ದೌರ್ಬಲ್ಯ ಬೆಳೆಸಿಕೊಂಡಿದ್ದಾರೆ. ವಿವಿಧ ಕಂಪನಿಗಳ ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ವಿಭಾಗಗಳು ಕುರುಕಲು ತಿಂಡಿ ಜನಪ್ರಿಯಗೊಳಿಸಿದ್ದನ್ನು ಗಮನಿಸಬಹುದಾಗಿದೆ. ಚಿಕನ್ ಮಂಚೂರಿಯನ್ ಬಗ್ಗೆ ಹೆಚ್ಚಿನವರು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ನಮ್ಮದೇ ಆದ ಸ್ಥಳೀಯವಾಗಿ ತಯಾರಿಸಿದ ಬಿರಿಯಾನಿ ಇರುವಾಗ ಮಂಚೂರಿಯನ್ ಕಡೆ ಆಸಕ್ತಿ ಯಾಕೆ ಬೇಕು ಎಂದರು.

ರಾಗಿ ಮುದ್ದೆ ನಾಟಿ ಕೋಳಿ ಇರುವಾಗ ಚಿಕನ್​65 ಯಾಕೆ ಬೇಕು

ಮಕ್ಕಳು ಕೂಡ ಈ ದಿನಗಳಲ್ಲಿ ಚಿಕನ್ 65 ಅನ್ನು ಕೇಳುತ್ತಾರೆ. ಕರ್ನಾಟಕದಲ್ಲಿ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಕರಿ ಇದ್ದಾಗ ಅದ್ಭುತವಾಗಿ ಇದನ್ನು ಆನಂದಿಸಿ. ಬೇರೆ ಯಾವುದೋ ಆಹಾರ ಪದ್ಧತಿಯತ್ತ ಆಸಕ್ತಿ ಸರಿಯೇ? ದಯವಿಟ್ಟು ನಿಮ್ಮ ಸ್ವಂತ ಆರೋಗ್ಯಕ್ಕಾಗಿ ಭಾರತೀಯ ಆಹಾರ, ಸಾಂಪ್ರದಾಯಿಕ ಆಹಾರ, ಸಾವಯವ ಆಹಾರವನ್ನು ಅನುಸರಿಸಿ. ಏಕೆಂದರೆ ಆರೋಗ್ಯವು ಸಂಪತ್ತು ಎಂದು ಹೇಳಿದರು.

ಕೋವಿಡ್​ ಇನ್ನೂ ಮುಗಿದಿಲ್ಲ- ಜಾಗ್ರತೆಯಿಂದಿರಿ

ಕೋವಿಡ್ ಇನ್ನೂ ಮುಗಿದಿಲ್ಲ ಎಂದು ಹೇಳಲು ನಾನು ಬಯಸುತ್ತೇನೆ. ಮೂರನೇ ಅಲೆ ಬಗ್ಗೆ ಮಾತನಾಡುವ ಕಾರಣ ಒಬ್ಬರು ಹೆಚ್ಚು ಜಾಗರೂಕರಾಗಿರಬೇಕು. ಅಲ್ಲದೇ ನಿಯಮಾವಳಿಯನ್ನು ನಾವು ಅನುಸರಿಸಬೇಕು. ಭಾರತ ಸರ್ಕಾರ ಮತ್ತು ರಾಜ್ಯವು ಹೊರಡಿಸಿದ ಪ್ರೋಟೋಕಾಲ್, ಕಾಲಕಾಲಕ್ಕೆ ವೈದ್ಯಕೀಯ ತಜ್ಞರು ಕೂಡ ಅದನ್ನು ಅನುಸರಿಸುತ್ತಾರೆ ಎಂದು ಹೇಳಿದರು.

ಲಸಿಕೆ ಹಾಕಿಸಿಕೊಳ್ಳುವುದು, ಆರು ಅಡಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ನಿಯಮಿತವಾಗಿ ಕೈ ತೊಳೆಯುವುದು, ಶಿಸ್ತುಬದ್ಧ ಜೀವನ ಕ್ರಮ, ದೈಹಿಕ ಸಾಮರ್ಥ್ಯ ಮತ್ತು ಜಂಕ್ ಫುಡ್​ಗಳನ್ನು ತಪ್ಪಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಂತೆ ಜನರಿಗೆ ಕರೆ ನೀಡಿದರು.

ಓದಿ: ಸಿಲಿಕಾನ್​ ಸಿಟಿಯಲ್ಲಿ ವ್ಹೀಲಿಂಗ್​ ಮಾಡುತ್ತಿದ್ದ 8 ಜನರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.