ETV Bharat / state

ಮನೆ ಮಾಲೀಕನ ಕೊಲೆಗೆ ಯತ್ನ, ಪೊಲೀಸರ ಮೇಲೂ ದಾಳಿ ಮಾಡಲೆತ್ನಿಸಿ  ಗುಂಡೇಟು ತಿಂದ ಆರೋಪಿ

author img

By

Published : Mar 14, 2020, 3:31 AM IST

ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿ ಕುಮಾರ್​ ಎಂಬಾತನನ್ನು ಪೊಲೀಸರು ಬಂಧಿಸಲು ಹೋದಾಗ, ಆತ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆಗ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

Cops shoot the accused
ಕೊಲೆಯತ್ನ ಪ್ರಕರಣದ ಆರೋಪಿಯನ್ನು ಶೂಟ್​​ ಮಾಡಿದ ಪೊಲೀಸರು

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿ ಕುಮಾರ್​ ಎಂಬಾತನ ಕಾಲಿಗೆ ಪೊಲೀಸರು ಶೂಟ್​​ ಮಾಡಿದ್ದಾರೆ.

ಚಂದ್ರು ಎಂಬುವವರು ಕುಮಾರ್​ಗೆ ತಮ್ಮ ಮನೆಯನ್ನ ಬಾಡಿಗೆಗೆ ಕೊಟ್ಟಿದ್ದರು. ಈ ವೇಳೆ ಪುಂಡಾಟ ಮೆರೆದಿದ್ದ ಕುಮಾರ್ ಮನೆ ಬಾಡಿಗೆಯನ್ನ ನೀಡದೆ ಹೆದರಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಚಂದ್ರು ಅವರು ಮಾರತಹಳ್ಳಿ ಠಾಣೆಯಲ್ಲಿ ದೂರು ನೀಡಿ, ಮನೆ ಖಾಲಿ ಮಾಡಿಸಿದ್ದರು.

Cops shoot the accused
ಕೊಲೆಯತ್ನ ಪ್ರಕರಣದ ಆರೋಪಿಯನ್ನು ಶೂಟ್​​ ಮಾಡಿದ ಪೊಲೀಸರು

ಇದೆ ದ್ವೇಷವಿಟ್ಟುಕೊಂಡಿದ್ದ ಆರೋಪಿ ಕುಮಾರ ತನ್ನ ಸಹಚರರೊಂದಿಗೆ ಮಾರ್ಚ್ 3ರಂದು ನಗರದ ದೇವರಬೀಸನಹಳ್ಳಿಯ ಫ್ಲಿಫ್ ಕಾರ್ಟ್​ಗೇಟ್ ಬಳಿ ಚಂದ್ರು ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಆದ್ರೆ ಕೊನೆ ಹಂತದಲ್ಲಿ ಗನ್​ ಕೈ ಕೊಟ್ಟು, ಪ್ಲಾನ್​ ಫ್ಲಾಪ್​ ಆಗಿ ಅಲ್ಲಿಂದ ಎಸ್ಕೇಪ್​ ಆಗಿದ್ದ. ಈ ವೇಳೆ ಚಂದ್ರನ ಸ್ನೇಹಿತ ಉದಯ್ ಎಂಬಾತನಿಗೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಚಂದ್ರು ವೈಟ್ ಫೀಲ್ಡ್ ಪೊಲೀಸರಿಗೆ ದೂರು ನೀಡಿದ್ದರು.

ಮತ್ತೆ ಚಂದ್ರು ಅವರನ್ನು ಹತ್ಯೆ ಮಾಡಲು ಆರೋಪಿ ಸಂಚು ರೂಪಿಸಿದ್ದ. ಈ ಮಾಹಿತಿ ತಿಳಿದ ಪೊಲೀಸರು ಆರೋಪಿಯನ್ನ ಬಂಧಿಸಲು ವಿಶೇಷ ತಂಡ ರಚನೆ ಮಾಡಿದ್ದರು. ಆರೋಪಿಗಳು ವರ್ತೂರಿನ ಗುಂಜೂರು ಪಾಳ್ಯದ ಬಳಿ ಇದ್ದ ಮಾಹಿತಿ ತಿಳಿದು ಬಂಧಿಸಲು ಮುಂದಾಗಿದ್ದರು. ಈ ವೇಳೆ ಕುಮಾರ್​ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆತ್ಮರಕ್ಷಣೆಗಾಗಿ ಮಾರತಹಳ್ಳಿ ಇನ್​​​ಸ್ಪೆಕ್ಟರ್ ರಮೇಶ್. ಜೆ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡ ಆರೋಪಿ ಕುಮಾರ್​ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.