ETV Bharat / state

ಶಾಲೆ ಪುನಾರಂಭ; ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಸಚಿವರ ಸಂವಾದ

author img

By

Published : Jan 1, 2021, 4:06 PM IST

ಇಂದಿನಿಂದ ಶಾಲೆ-ಕಾಲೇಜುಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಕೋವಿಡ್​ ಕುರಿತಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸುತ್ತಿದ್ದಾರೆ. ಇಂದು ಕೂಡ ಸಚಿವರು ಆನೇಕಲ್ಲಿನ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಶಿಕ್ಷಣ ಸಚಿವರು
Education Minister conversation with students

ಆನೇಕಲ್: ಹೊಸ ವರ್ಷದ ಮೊದಲ ದಿನವಾದ ಇಂದು ಶಾಲೆ-ಕಾಲೇಜುಗಳು ಆರಂಭವಾಗಿದ್ದು, ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಅವರು ಮಕ್ಕಳನ್ನು ಶಾಲೆಗೆ ಸ್ವಾಗತಿಸಿದರು.

ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಶಿಕ್ಷಣ ಸಚಿವರು

ಇಂದು ಬೆಳಗ್ಗೆ ಶಾಲಾ ಆರಂಭಕ್ಕೆ ಮುನ್ನವೇ ಸಚಿವರು ಶಾಲೆಗೆ ಆಗಮಿಸಿದ್ದರು. ಇದಕ್ಕೆ ವಿದ್ಯಾರ್ಥಿ ಸಮುದಾಯ ಸಂತಸ ವ್ಯಕ್ತಪಡಿಸಿತು. ಈ ವೇಳೆ ವಿದ್ಯಾರ್ಥಿನಿಯೋರ್ವಳು ಸಚಿವರ ಬಳಿ ಮಾತನಾಡುತ್ತಾ, ಕಳೆದ ಕೆಲ ದಿನಗಳಿಂದ ರೂಪಾಂತರ ಕೊರೊನಾ ವೈರಸ್​ ಆತಂಕ ಹೆಚ್ಚಾಗಿದೆ. ಇದೀಗ ಶಾಲೆಗಳು ಆರಂಭವಾಗಿರುವುದು ಖುಷಿಯ ವಿಚಾರ. ಮತ್ತೆ ವೈರಸ್ ಹೆಚ್ಚಾಯಿತು ಎಂದು ಶಾಲೆಗಳನ್ನು ಮುಚ್ಚಬೇಡಿ. ನಮಗೆ ನೆಟ್​ವರ್ಕ್​ ಸಮಸ್ಯೆಯಿದೆ, ಅಷ್ಟೇ ಅಲ್ಲದೆ ಆನ್​ಲೈನ್​ ತರಗತಿಗಳಿಗೆ ನಮ್ಮ ಪೋಷಕರಿಂದ ಮೊಬೈಲ್​ ಕೊಡಿಸಿಕೊಳ್ಳಲು ಕಷ್ಟ ಸಾಧ್ಯವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಓದಿ: ಮೈಸೂರಿನಲ್ಲಿ ಮೂರು ಕಡೆ ಕೋವಿಡ್ ಲಸಿಕೆ ಡ್ರೈ ರನ್​​ಗೆ ಸಿದ್ಧತೆ

ಶಾಲೆ ಆರಂಭವಾದ ಹಿನ್ನೆಲೆಯಲ್ಲಿ ಹೆಬ್ಬಗೋಡಿ, ಹೆನ್ನಾಗರ, ಚಂದಾಪುರ ಅತ್ತಿಬೆಲೆ ಶಾಲೆಗಳಿಗೆ ಬಿಇಒ ರಾಮಮೂರ್ತಿ, ತಹಶೀಲ್ದಾರ್ ಮಹಾದೇವಯ್ಯರೊಂದಿಗೆ ಶಾಲೆಗಳಿಗೆ ಭೇಟಿ ನೀಡಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸಲಹೆಗಳನ್ನು ಹಂಚಿಕೊಂಡರು. ಶಾಲಾ ವಿದ್ಯಾರ್ಥಿಗಳಿಗೆ ಬಸ್​​ಪಾಸ್ ವ್ಯವಸ್ಥೆ, ಬಿಸಿಯೂಟ, ಪುಸ್ತಕ, ಸಮವಸ್ತ್ರ ಪಠ್ಯಕ್ರಮ ನಿಗದಿ, ಪರೀಕ್ಷಾ ಕಾಲ ಇನ್ನಿತರೆ ವಿಚಾರಗಳ ಕುರಿತು ನೇರವಾಗಿ ಮಕ್ಕಳೊಂದಿಗೆ ಸಿಹಿ ಹಂಚುವ ಮುಖಾಂತರ ವಿಚಾರ ವಿನಿಮಯ ಮಾಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.