ETV Bharat / state

ಭಾರತದ ಆತ್ಮ ಅಧ್ಯಯನಕ್ಕೆ ಸಂಸ್ಕೃತ ಭಾಷೆ ಕಲಿಕೆ ಬಹಳ ಮುಖ್ಯ: ಉಪರಾಷ್ಟ್ರಪತಿ ಪ್ರತಿಪಾದನೆ

author img

By

Published : Jul 9, 2022, 10:26 PM IST

ಸಂಸ್ಕೃತ ವಿಶ್ವವಿದ್ಯಾನಿಲಯದ 9ನೇ ಘಟಿಕೋತ್ಸವದಲ್ಲಿ ಆಚಾರ್ಯ ಪ್ರದ್ಯುಮ್ನ, ಡಾ.ವಿ.ಎಸ್.ಇಂದಿರಮ್ಮ, ವಿದ್ವಾನ್ ಉಮಾಕಾಂತ ಭಟ್ ಅವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

sanskrit-learning-should-become-a-people-movement-says-vp-venkaiah-naidu
ಭಾರತದ ಆತ್ಮ ಅಧ್ಯಯನಕ್ಕೆ ಸಂಸ್ಕೃತ ಭಾಷೆ ಕಲಿಕೆ ಬಹಳ ಮುಖ್ಯ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಬೆಂಗಳೂರು: ಭಾರತದ ಆತ್ಮವನ್ನು ಅಧ್ಯಯನ ಮಾಡಲು ಸಂಸ್ಕೃತ ಭಾಷೆಯನ್ನು ಕಲಿಯುವುದು ಬಹಳ ಮುಖ್ಯವಾಗಿದೆ. ಸಂಸ್ಕೃತ ಕಲಿಕೆ ಜನಾಂದೋಲನವಾಗಬೇಕು ಮತ್ತು ಸಂಸ್ಕೃತ ಭಾಷೆಯನ್ನು ಪ್ರತಿಯೊಬ್ಬರ ಬಳಿಗೆ ಕೊಂಡೊಯ್ಯುವ ಕೆಲಸವಾಗಬೇಕೆಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.

ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ 9ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಕುಟುಂಬಗಳಲ್ಲಿ, ನಮ್ಮ ಸಮಾಜದಲ್ಲಿ ಮತ್ತು ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕೃತ ಭಾಷೆ ಉತ್ತೇಜಿಸಲು ಪ್ರಯತ್ನಿಸಬೇಕು. ಈ ದಿಸೆಯಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯಗಳು, ಅಧ್ಯಾಪಕರು ಮತ್ತು ಸಂಸ್ಕೃತಕ್ಕೆ ಸಂಬಂಧಿಸಿದ ಪ್ರತಿಯೊಬ್ಬರೂ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.

sanskrit-learning-should-become-a-people-movement-says-vp-venkaiah-naidu
ಭಾರತದ ಆತ್ಮ ಅಧ್ಯಯನಕ್ಕೆ ಸಂಸ್ಕೃತ ಭಾಷೆ ಕಲಿಕೆ ಬಹಳ ಮುಖ್ಯ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಪ್ರಪಂಚದಾದ್ಯಂತ ಆಗುತ್ತಿರುವ ತಾಂತ್ರಿಕ ಬದಲಾವಣೆಗಳ ಲಾಭವನ್ನು ಪಡೆದುಕೊಳ್ಳುವಾಗ ಸಂಸ್ಕೃತ ಮತ್ತು ಇತರ ಪ್ರಾಚೀನ ಭಾರತೀಯ ಭಾಷೆಗಳನ್ನು ಸಂರಕ್ಷಿಸುವ ಅವಶ್ಯಕತೆಯಿದೆ. ಪ್ರಾಚೀನ ಹಸ್ತಪ್ರತಿಗಳು, ಶಾಸನಗಳು, ಶಾಸನಗಳ ಡಿಜಿಟಲೀಕರಣ, ವೇದಾಧ್ಯಯನದ ಧ್ವನಿಮುದ್ರಣ ಮತ್ತು ಸಂಬಂಧಿತ ಪುಸ್ತಕಗಳ ಪ್ರಕಟಣೆಯ ಜೊತೆಗೆ ಸುಲಭವಾಗಿ ಕಲಿಯುವ ಮತ್ತು ಅರ್ಥಮಾಡಿಕೊಳ್ಳುವ ಸಂಸ್ಕೃತ ಭಾಷ್ಯಗಳನ್ನು ಉಳಿಸುವ ಅಗತ್ಯವಿದೆ ಎಂದೂ ಅಭಿಪ್ರಾಯಪಟ್ಟರು.

sanskrit-learning-should-become-a-people-movement-says-vp-venkaiah-naidu
ಭಾರತದ ಆತ್ಮ ಅಧ್ಯಯನಕ್ಕೆ ಸಂಸ್ಕೃತ ಭಾಷೆ ಕಲಿಕೆ ಬಹಳ ಮುಖ್ಯ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಸಂಸ್ಕೃತ ಭಾಷೆ ನಿಗೂಢವಾಗಿದ್ದು, ಭಾರತೀಯತೆ ಮತ್ತು ನಮ್ಮ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಇತ್ತೀಚೆಗೆ ವಿಶ್ವವು ಸಂಸ್ಕೃತ ಭಾಷೆಯನ್ನು ಕಲಿಯಲು ಆಸಕ್ತಿ ವಹಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಶಿಕ್ಷಣ ವಿಭಾಗದ ಉಪಕುಲಪತಿ ಪ್ರೊ.ಕೆ.ಇ.ದೇವನಾಥನ್, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.