ETV Bharat / state

ರಾಜ್​​ಕುಮಾರ್ ಸಿವಿಲ್ ಸರ್ವಿಸ್​​ ಅಕಾಡೆಮಿಯಲ್ಲಿ ಅಭ್ಯಸಿಸಿ UPSCಯಲ್ಲಿ ಪಾಸ್​ : ಮೆಚ್ಚುಗೆ ವ್ಯಕ್ತಪಡಿಸಿದ ನಟ ರಾಘಣ್ಣ

author img

By

Published : May 31, 2022, 4:58 PM IST

Updated : May 31, 2022, 6:52 PM IST

2021ನೇ ಸಾಲಿನ ಲೋಕಸೇವಾ ಆಯೋಗದ ಫಲಿತಾಂಶ ಹೊರ ಬಿದ್ದಿದೆ. ಈ ಪರೀಕ್ಷೆಯಲ್ಲಿ ದೇಶದ 600ಕ್ಕೂ ಅಧಿಕ ಮಂದಿ ಪಾಸ್ ಆಗಿದ್ದಾರೆ. ಇದರಲ್ಲಿ ಕರ್ನಾಟಕದ 20ಕ್ಕೂ ಅಧಿಕ ಮಂದಿ ಉತ್ತೀರ್ಣರಾಗಿದ್ದು, 8 ಮಂದಿ ಡಾ.ರಾಜ್​ಕುಮಾರ್​​ ಸಿವಿಲ್​ ಸರ್ವಿಸ್​ ಅಕಾಡೆಮಿಯಿಂದ ಆಯ್ಕೆ ಆಗಿದ್ದಾರೆ..

ರಾಜ್​​ಕುಮಾರ್ ಸಿವಿಲ್ ಸರ್ವಿಸ್​ನಲ್ಲಿ ಪಾಸಾದವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಘಣ್ಣ
ರಾಜ್​​ಕುಮಾರ್ ಸಿವಿಲ್ ಸರ್ವಿಸ್​ನಲ್ಲಿ ಪಾಸಾದವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಘಣ್ಣ

ವರನಟ ಡಾ.ರಾಜ್​ಕುಮಾರ್ ಹೆಸರಲ್ಲಿ ರಾಜ್ ಕುಟುಂಬದವರು ಸಿವಿಲ್ ಸರ್ವಿಸ್ ಅಕಾಡೆಮಿ ಸ್ಥಾಪಿಸಿ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಈ ಅಕಾಡೆಮಿ ಮೂಲಕ ತರಬೇತಿ ನೀಡುತ್ತಿದ್ದಾರೆ. ಈ ಬಾರಿ ಹಲವರು ರ‍್ಯಾಂಕ್ ಪಡೆದು ಈ ಅಕಾಡೆಮಿಯಿಂದ ಪಾಸ್ ಆಗಿದ್ದಾರೆ. ಈ ಸಂಬಂಧ ರಾಘಣ್ಣ ಅವರು ಯುಪಿಎಸ್‌ಸಿಯಲ್ಲಿ ಸಾಧನೆ ಮಾಡಿದವರಿಗೆ ಅಭಿನಂಧನೆ ಸಲ್ಲಿಸಿದ್ದಾರೆ.

ಈ ಬಾರಿ ಸಂಸ್ಥೆಯಿಂದ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅಕಾಡೆಮಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. 2021ನೇ ಸಾಲಿನ ಲೋಕಸೇವಾ ಆಯೋಗದ ಫಲಿತಾಂಶ ಹೊರ ಬಿದ್ದಿದೆ. ಈ ಪರೀಕ್ಷೆಯಲ್ಲಿ ದೇಶದ 600ಕ್ಕೂ ಅಧಿಕ ಮಂದಿ ಪಾಸ್ ಆಗಿದ್ದಾರೆ. ಇದರಲ್ಲಿ ಕರ್ನಾಟಕದ 20ಕ್ಕೂ ಅಧಿಕ ಮಂದಿ ಉತ್ತೀರ್ಣರಾಗಿದ್ದಾರೆ.

ಪಾಸ್​ ಆದವರ ವಿವರ
ಪಾಸ್​ ಆದವರ ವಿವರ

ಇವರಲ್ಲಿ 8 ಮಂದಿ ಡಾ.ರಾಜ್​ಕುಮಾರ್​​ ಸಿವಿಲ್​ ಸರ್ವಿಸ್​ ಅಕಾಡೆಮಿಯಿಂದ ಆಯ್ಕೆಯಾಗಿದ್ದಾರೆ. ಅವರಿಗೆ ಶುಭಾಶಯ ಕೋರಿದ್ದಾರೆ. 455ನೇ ರ್ಯಾಂಕ್ ಪಡೆದ ರವಿನಂದನ್, 139 ರ್ಯಾಂಕ್ ಪಡೆದಿರುವ ನಿಖಿಲ್ ಪಾಟೀಲ್, 311ನೇ ರ್ಯಾಂಕ್ ಪಡೆದಿರುವ ದೀಪಕ್ ಶೆಟ್ಟಿಯನ್ನ ಮನೆಗೆ ಕರೆಯಿಸಿಕೊಂಡು ರಾಘವೇಂದ್ರ ರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿ ರವಿನಂದನ್ ಮಾತನಾಡಿ, ಪದೇಪದೆ ಫೇಲ್ಯೂರ್ ಆದ್ರೆ ಹತಾಶೆ ಪಡಬೇಡಿ, ಈ ಪರೀಕ್ಷೆಗೆ ಓದುವ ವಿಧಾನವನ್ನ ಮೈಗೂಡಿಸಿಕೊಳ್ಳಬೇಕು ಅಂತಾ ತಮ್ಮ ಅನುಭವವನ್ನ ಹಂಚಿಕೊಂಡರು.

ಇದನ್ನೂ ಓದಿ: ಸ್ಕೂಟಿ-ಬೈಕ್​ ನಡುವೆ ಮುಖಾಮುಖಿ ಡಿಕ್ಕಿ, ಓರ್ವ ಸಾವು : ಸಿಸಿಟಿವಿಯಲ್ಲಿ ಭಯಾನಕ‌ ದೃಶ್ಯ

Last Updated : May 31, 2022, 6:52 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.