ETV Bharat / state

ಕುಂಬಾರರ ಸಂಘದ ಕಚೇರಿಯಲ್ಲಿ ಗಲಾಟೆ: 2ನೇ ಮಹಡಿಯಿಂದ ಬಿದ್ದು ವ್ಯಕ್ತಿಗೆ ಗಾಯ

author img

By

Published : Dec 18, 2022, 10:09 AM IST

ಬೆಂಗಳೂರಿನ ಕಲಾಸಿಪಾಳ್ಯದಲ್ಲಿರುವ ಕುಂಬಾರರ ಸಂಘದ ಕಚೇರಿಯಲ್ಲಿ ತಡರಾತ್ರಿ ಎರಡು ಬಣಗಳ ನಡುವೆ ಗಲಾಟೆ ನಡೆದಿದೆ.

person falls from 2nd floor
2ನೇ ಮಹಡಿಯಿಂದ ವ್ಯಕ್ತಿ ಬಿದ್ದು ‌ಅಸ್ವಸ್ಥ

ಬೆಂಗಳೂರು: ತಡರಾತ್ರಿ ಕಲಾಸಿಪಾಳ್ಯದಲ್ಲಿರುವ ಕುಂಬಾರರ ಸಂಘದ ಕಟ್ಟಡದಲ್ಲಿ ಎರಡು ಬಣಗಳ‌ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಎರಡನೇ ಮಹಡಿಯಿಂದ ಬಿದ್ದು ಅಸ್ವಸ್ಥನಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳು ಯುವಕನನ್ನು ಬದ್ರಿನಾಥ್ ಎಂದು ಗುರುತಿಸಲಾಗಿದೆ. ಕುಂಬಾರರ ಸಂಘದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನಿನ್ನೆ ರಾತ್ರಿ ಅಧ್ಯಕ್ಷ ಹಾಗೂ ಕೆಲವು ಸದಸ್ಯರ ನಡುವೆ ಗಲಾಟೆ ಆರಂಭವಾಗಿತ್ತು. ಬಳಿಕ ಎರಡೂ ಬಣಗಳ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಈ ಸಂದರ್ಭದಲ್ಲಿ ಯುವಕ ಆಯತಪ್ಪಿ ಕಟ್ಟಡದಿಂದ ಬಿದ್ದಿದ್ದಾನೆ. ಸ್ಥಳಕ್ಕೆ ಕಲಾಸಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವೆ ಗಲಾಟೆ: ಓರ್ವನ ಕೊಲೆಯಲ್ಲಿ ಅಂತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.