ETV Bharat / state

ಮಳೆ ತಂದ ಅವಾಂತರ: ಕತ್ತಲಲ್ಲೇ ಕಾಲ ಕಳೆದ ಸಿಲಿಕಾನ್​ ಸಿಟಿ ಜನತೆ

author img

By

Published : May 29, 2020, 11:33 PM IST

ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಇಂದು ಮಳೆ ಮತ್ತೆ ಅವಾಂತರ ಸೃಷ್ಟಿಸಿದೆ. ಸಂಜೆ ವೇಳೆಗೆ ಸುರಿದ ಭಾರಿ ಮಳೆಗೆ ನಗರದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಬೃಹತ್​ ಮರಗಳು ಧರೆಗುರುಳಿವೆ. ಇದಲ್ಲದೆ ನಗರ ವಾಸಿಗಳೂ ಸಹ ಕರೆಂಟ್​​ ಇಲ್ಲದೆ ಕತ್ತಲೆಯಲ್ಲಿಯೇ ಕಾಲ ಕಳೆಯುವಂತಾಗಿತ್ತು.

people in the capital faced power cut because of heavy rain
ಮಳೆ ತಂದ ಅವಾಂತರ: ಕತ್ತಲೆಯಲ್ಲೇ ಕಾಲ ಕಳೆದ ರಾಜಧಾನಿಯ ಜನರು

ಬೆಂಗಳೂರು: ನಗರದಲ್ಲಿ ಸಂಜೆ ಸುರಿದ ಗುಡುಗು ಸಹಿತ ಭಾರೀ ಗಾಳಿ-ಮಳೆಯಿಂದಾಗಿ ಹಲವೆಡೆ ಸಿಲಿಕಾನ್​​ ಸಿಟಿ ಜನ ಕತ್ತಲಲ್ಲಿ ದಿನದೂಡುವಂತಾಯಿತು. ಹತ್ತಾರು ಮರಗಳು ಬಿದ್ದು ವಿದ್ಯುತ್ ತಂತಿ ತುಂಡಾಗಿ, ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ.

ಇತ್ತ ಜನರ ಅಹವಾಲು ಸ್ವೀಕರಿಸಬೇಕಾದ ಬೆಸ್ಕಾಂ ಸಹಾಯವಾಣಿಯೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ವಿದ್ಯುತ್ ಇಲ್ಲದೆ , ಪಂಪ್ ಮಾಡಲೂ ಸಾಧ್ಯವಾಗದೆ ಕಟ್ಟಡಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಮರ ತೆರವು ಮಾಡುವಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆ ವಿದ್ಯುತ್, ನೀರು ಇಲ್ಲದೆ ಜನಜೀವನ ಅಸ್ತವ್ಯಸ್ತವಾಗಿದೆ.

people in the capital faced power cut because of heavy rain
ಮಳೆ ತಂದ ಅವಾಂತರ

ಪೂರ್ವ ವಿಭಾಗದಲ್ಲಿ 0.51- 31.50 ಮಿ.ಮೀ , ದಕ್ಷಿಣದಲ್ಲಿ 5- 25.50 ಮಿ.ಮೀ, ಆರ್.ಆರ್ ನಗರದಲ್ಲಿ 4.50-67 ಮಿ.ಮೀ, ಯಲಹಂಕದಲ್ಲಿ 33.50- 71. 50 ಮಿ.ಮೀ, ದಾಸರಹಳ್ಳಿಯಲ್ಲಿ 35-53 ಮಿ.ಮೀ, ಮಹದೇವಪುರದಲ್ಲಿ 2-27 ಮಿ.ಮೀ, ಬೊಮ್ಮನಹಳ್ಳಿ 3.50-26.50ಮಿ.ಮೀ, ಪಶ್ಚಿಮ ವಿಭಾಗದಲ್ಲಿ 20.50-55.50 ಮಿ.ಮೀ ನಷ್ಟು ಮಳೆಯಾಗಿದೆ.

ವರುಣಾರ್ಭಟಕ್ಕೆ ವಿಧಾನಸೌಧದ ಸುತ್ತಮುತ್ತ 4, ಮಲ್ಲೇಶ್ವರಂನಲ್ಲಿ 8 ಮರಗಳು ಧರೆಗುರುಳಿವೆ. ಅಲ್ಲದೆ ಹೆಗಡೆನಗರ, ರಾಜಾಜಿನಗರ, ಮಾಗಡಿರಸ್ತೆ, ಚಾಮರಾಜಪೇಟೆ, ಜಯಮಹಲ್, ಸಂಜಯನಗರ, ವಿದ್ಯಾರಣ್ಯಪುರದಲ್ಲೂ ಮರಗಳು ಬಿದ್ದಿವೆ. ಹಲವೆಡೆ ಬುಡಸಮೇತ ಮರಗಳು ಬಿದ್ದಿದ್ದು, ವಾಹನಗಳು ಜಖಂ ಗೊಂಡಿವೆ. ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿರುವ ಘಟನೆ ಸಹ ಜರುಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.