ETV Bharat / state

ಇನ್ನೋವೇಷನ್​ ವಿಭಾಗದಲ್ಲಿ ರಾಜ್ಯ ಫಸ್ಟ್​: ಎಫ್​ಕೆಸಿಸಿಐ ಹರ್ಷ

author img

By

Published : Oct 17, 2019, 10:39 PM IST

ಇಂದು ಪ್ರಕಟವಾದ ನೀತಿ ಆಯೋಗದ ಇನ್ನೋವೇಷನ್​ ವರ್ಗದಲ್ಲಿ ಕರ್ನಾಟಕ ಮೊದಲನೇ ಸ್ಥಾನ ಪಡೆದುಕೊಂಡಿದೆ.

ಎಫ್ ಕೆ ಸಿ ಸಿ ಐ ಅಧ್ಯಕ್ಷ ಸಿ.ಆರ್ ಜನಾರ್ಧನ್

ಬೆಂಗಳೂರು: ಇಂದು ಪ್ರಕಟವಾದ ನೀತಿ ಆಯೋಗದ ಇನ್ನೋವೇಷನ್​ ವರ್ಗದಲ್ಲಿ ಕರ್ನಾಟಕ ಮೊದಲನೇ ಸ್ಥಾನ ಪಡೆದಿರುವುದರ ಹಿಂದೆ ಮೈಸೂರು ರಾಜರ ಕೊಡುಗೆಯನ್ನು ಸ್ಮರಿಸಬೇಕು ಎಂದು ಎಫ್ ಕೆ ಸಿ ಸಿ ಐ ಅಧ್ಯಕ್ಷ ಸಿ.ಆರ್ ಜನಾರ್ದನ್​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈಟಿವಿ ಭಾರತ್​ನೊಂದಿಗೆ ಮಾತನಾಡಿದ ಎಫ್ ಕೆ ಸಿ ಸಿ ಐ ಅಧ್ಯಕ್ಷ ಸಿ.ಆರ್ ಜನಾರ್ದನ್​

ಶತಮಾನಗಳಿಂದಲೂ ಕರ್ನಾಟಕವು ಸಾಕಷ್ಟು ಪ್ರಗತಿಪರ ವಿಷಯಗಳಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಬಂದಿದೆ. ಇದಕ್ಕೆ ಮೂಲ ಕಾರಣವೆಂದರೆ ಶಿಕ್ಷಣ, ಮೈಸೂರು ರಾಜರು ಶಿಕ್ಷಣಕ್ಕೆ ಒತ್ತು ನೀಡಿರುವುದರಿಂದ ಕರ್ನಾಟಕ ಇಂತಹ ಸಾಧನೆಗಳನ್ನು ಪ್ರತಿಬಾರಿ ಮಾಡುತ್ತ ಬರುತ್ತಿದೆ.

ರಾಜಕೀಯವಾಗಲಿ, ಕೈಗಾರಿಕೆಯಾಗಲಿ ಅಥವಾ ಬೇರೆ ಯಾವುದೇ ಕ್ಷೇತ್ರದಲ್ಲಿ ಕರ್ನಾಟಕ ಪ್ರಗತಿಯನ್ನು ಕಾಣುತ್ತದೆ. ನಮ್ಮ ರಾಜ್ಯ ಸುಭಿಕ್ಷ ವಾಗಿರುವ ಕಾರಣ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದು ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ ಹೀಗಾಗಿ ನೀತಿ ಆಯೋಗ ಪ್ರಕಟಿಸಿದ ಅಗ್ರಸ್ಥಾನ ನಮ್ಮ ಜವಾಬ್ದಾರಿಗಳನ್ನು ಮತ್ತಷ್ಟು ಹೆಚ್ಚಿಸಿದೆ. ಇಷ್ಟೇ ಅಲ್ಲದೆ ಮುಂದಿನ ಬಾರಿ ಸ್ವಚ್ಛತೆಯಲ್ಲಿ ನಮ್ಮ ಕರ್ನಾಟಕ ಅಗ್ರಸ್ಥಾನ ಪಡೆಯಬೇಕು, ಕರ್ನಾಟಕವನ್ನು ಸದಾ ಮೊದಲನೆಯ ಸ್ಥಾನದಲ್ಲೇ ಇಡಬೇಕು. ಇದಕ್ಕೆ ಪೂರಕವಾಗಿ ಎಫ್ ಕೆ ಸಿ ಸಿ ಐ ಕಾರ್ಯನಿರ್ವಹಿಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Intro:Body:ನೀತಿ ಆಯೋಗ ಇನ್ನೋವೇಶನ್ ವರ್ಗದಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದಿರುವುದರಿಂದ ಮೈಸೂರು ರಾಜರ ಕೊಡುಗೆ ಇದೆ : ಎಫ್ ಕೆ ಸಿ ಸಿ ಐ ಅಧ್ಯಕ್ಷ ಸಿಆರ್ ಜನಾರ್ಧನ್.


ಬೆಂಗಳೂರು: ಇಂದು ಪ್ರಕಟವಾದ ನೀತಿಆಯೋಗದ ಇನೋವೇಷನ್ ವರ್ಗದಲ್ಲಿ ಕರ್ನಾಟಕ ಮೊದಲನೇ ಸ್ಥಾನ ಪಡೆದಿರುವುದರ ಹಿಂದೆ ಮೈಸೂರು ರಾಜರ ಕೊಡುಗೆಯನ್ನು ಸ್ಮರಿಸಬೇಕು ಎಂದು ಎಫ್ ಕೆ ಸಿ ಸಿ ಐ ಅಧ್ಯಕ್ಷ ಸಿಆರ್ ಜನಾರ್ಧನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ಶತಮಾನಗಳಿಂದಲೂ ಕರ್ನಾಟಕವು ಸಾಕಷ್ಟು ಪ್ರಗತಿಪರ ವಿಷಯಗಳಲ್ಲಿ ಅಗ್ರಸ್ಥಾನ ಕಾಯ್ದಿರಿಸಿ ಕೊಂಡು ಬಂದಿದೆ. ಇದಕ್ಕೆ ಮೂಲ ಕಾರಣವೆಂದರೆ ಶಿಕ್ಷಣ, ಮೈಸೂರು ರಾಜರು ಶಿಕ್ಷಣಕ್ಕೆ ಒತ್ತು ನೀಡಿರುವುದರಿಂದ ಕರ್ನಾಟಕ ಇಂತಹ ಸಾಧನೆಗಳನ್ನು ಪ್ರತಿಬಾರಿ ಮಾಡುತ್ತ ಬರುತ್ತಿದೆ.


ರಾಜಕೀಯವಾಗಲಿ ಕೈಗಾರಿಕೆಯಾಗಲಿ ಅಥವಾ ಬೇರೆ ಯಾವುದೇ ಕ್ಷೇತ್ರದಲ್ಲಿ ಕರ್ನಾಟಕ ಪ್ರಗತಿಯನ್ನು ಕಾಣುತ್ತದೆ. ನಮ್ಮ ರಾಜ್ಯ ಸುಭಿಕ್ಷ ವಾಗಿರುವ ಕಾರಣ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ ಹೀಗಾಗಿ ನೀತಿ ಆಯೋಗ ಪ್ರಕಟಿಸಿದ ಅಗ್ರಸ್ಥಾನ ನಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಿದೆ. ಇಷ್ಟೇ ಅಲ್ಲದೆ ಮುಂದಿನ ಬಾರಿ ಸ್ವಚ್ಛತೆಯಲ್ಲಿ ನಮ್ಮ ಕರ್ನಾಟಕ ಅಗ್ರಸ್ಥಾನ ಪಡೆಯಬೇಕು, ಕರ್ನಾಟಕವನ್ನು ಸದಾ ಮೊದಲನೆಯ ಸ್ಥಾನ ಇರಬೇಕು ಇದಕ್ಕೆ ಪೂರಕವಾಗಿ ಎಫ್ ಕೆ ಸಿ ಸಿ ಐ ಕಾರ್ಯನಿರ್ವಹಿಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.