ETV Bharat / state

ರೌಡಿಶೀಟರ್ ಎದುರು ಕೈಮುಗಿದು ನಿಂತ ಮೋದಿಯಿಂದ ಪ್ರಧಾನಿ ಹುದ್ದೆಗೆ ಕಳಂಕ ಎಂದ ಕಾಂಗ್ರೆಸ್

author img

By

Published : Mar 13, 2023, 7:07 AM IST

Updated : Mar 13, 2023, 10:23 AM IST

ನೆರೆ ಬಂದಾಗ ಬರಲಿಲ್ಲ, ಬರ ಬಂದಾಗ ಬರಲಿಲ್ಲ, ಕರ್ನಾಟಕಕ್ಕೆ ಆಕ್ಸಿಜನ್ ಕೊಡಲಿಲ್ಲ, ವ್ಯಾಕ್ಸಿನ್ ನೀಡಲಿಲ್ಲ, ಜಿಎಸ್​ಟಿ ಪಾಲು ಸಿಗಲಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಿ ಕಚೇರಿಯ ಬಾಗಿಲು ಕಾದರೂ ಭೇಟಿಯಾಗಿರಲಿಲ್ಲ. ತಿಂಗಳುಗಟ್ಟಲೆ ಸಂಪುಟ ರಚನೆಗೆ ಅವಕಾಶ ಕೊಡದೆ ಇಳಿವಯಸ್ಸಿನ ಬಿಎಸ್​ವೈರನ್ನು ಗೋಳು ಹೊಯ್ದುಕೊಂಡ ನರೇಂದ್ರ ಮೋದಿ, ಕಣ್ಣೀರು ಹಾಕಿಸಿ ಅಧಿಕಾರ ಕಿತ್ತುಕೊಂಡಿದ್ದೇಕೆ ಎಂಬ ನಿಗೂಢ ಪ್ರಶ್ನೆಗೆ ಉತ್ತರಿಸುವರೇ? ಎಂದು ಕಾಂಗ್ರೆಸ್ ಟ್ವೀಟ್​ ಮೂಲಕ ಪ್ರಶ್ನಿಸಿದೆ.

ಬಿಜೆಪಿಯು ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು: ಕಾಂಗ್ರೆಸ್ ವಾಗ್ದಾಳಿ
ಬಿಜೆಪಿಯು ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು: ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: 'ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ. ಫೈಟರ್ ರವಿ ಎಂಬ ರೌಡಿಶೀಟರ್ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು' ಎಂದು ಕಾಂಗ್ರೆಸ್​ ಟ್ವೀಟ್​ ಮೂಲಕ ಟೀಕಿಸಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ಸಂದರ್ಭದಲ್ಲಿ ಮೋದಿ ಮೋಸ ಎಂಬ ಟ್ಯಾಗ್​ಲೈನ್ ಬಳಸಿ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.

  • ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ.

    ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ @narendramodi ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ.

    ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು. pic.twitter.com/BOcpzumtHm

    — Karnataka Congress (@INCKarnataka) March 12, 2023 " class="align-text-top noRightClick twitterSection" data=" ">

'ಡಿಯರ್ ನರೇಂದ್ರ ಮೋದಿ, ನಿಮ್ಮನ್ನು ಸ್ವಾಗತಿಸಲು ಧಿಡೀರ್ ಹಾಜರಾಗಿದ್ದ ಉರಿಗೌಡ, ದೊಡ್ಡನಂಜೇಗೌಡ ಎಂಬ ಫಿಕ್ಷನ್ ಕ್ಯಾರೆಕ್ಟರ್‌ಗಳು ರಾತ್ರೋರಾತ್ರಿ ಎಲ್ಲಿ ಹೋದರು ಎಂದು ಒಮ್ಮೆ ಸಿಟಿ ರವಿ ಅವರನ್ನು ವಿಚಾರಿಸಿ! ಬಿಜೆಪಿ ರಾಜ್ಯ ನಾಯಕರ ನಕಲಿತನ, ಸುಳ್ಳು, ಆತ್ಮವಂಚನೆ, ಡೋಂಗಿತನ ಎಲ್ಲವಕ್ಕೂ ಮೋದಿಯವರೇ ಪ್ರೇರಣೆಯೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

'ನರೇಂದ್ರ ಮೋದಿ ಅವರೇ, ನಿಮ್ಮ ಡಬಲ್​ ಇಂಜಿನ್ ಸರ್ಕಾರದ ಲಂಚಾವತಾರವು ರೈತರನ್ನು ಎತ್ತು, ಗಾಡಿಗಳನ್ನೇ ಲಂಚ ನೀಡುವ ಹಂತಕ್ಕೆ ತಂದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯ ರೈತ ಎತ್ತುಗಳನ್ನೇ ಲಂಚವಾಗಿ ನೀಡಲು ತಂದಿದ್ದಾರೆ. ಬಿಜೆಪಿಯ ಕಡುಭ್ರಷ್ಟ ಸರ್ಕಾರದ ಪರವಾಗಿ ಯಾವ ಮುಖವಿಟ್ಟುಕೊಂಡು ಮತ ಕೇಳುವಿರಿ? ಮಂಡ್ಯದಲ್ಲಿ ಕಬ್ಬು ಬೆಳೆಗಾರರು ಹಲವು ದಿನಗಳಿಂದ ಪ್ರತಿಭಟಿಸುತ್ತಿದ್ದರೂ ಕ್ಯಾರೇ ಅನ್ನಲಿಲ್ಲ ಬಿಜೆಪಿ ಸರ್ಕಾರ. ಈಗ ಅದೇ ಮಂಡ್ಯದಲ್ಲಿ ಮೋದಿ ಕರೆಸಿ ಬರಿಗೈ ಬೀಸಿದರೆ ಜನ ಕೇಳುವರೇ? ರಾಜ್ಯ ನಾಯಕರ ನಂತರ ಮೋದಿಗೂ ಖಾಲಿ ಕುರ್ಚಿಗಳ ದರ್ಶನವಾಗಿದೆ, ಹಣ ಕೊಟ್ಟರೂ ಬಾರದ ಜನ ಬಿಜೆಪಿ ಸೋಲಿಗೆ ಮುನ್ನುಡಿ ಬರೆದಿದ್ದಾರೆ' ಎಂದು ಕಾಂಗ್ರೆಸ್​​ ವಾಗ್ದಾಳಿ ನಡೆಸಿದೆ.

  • Dear @narendramodi,

    ನಿಮ್ಮನ್ನು ಸ್ವಾಗತಿಸಲು ಧಿಡೀರ್ ಹಾಜರಾಗಿದ್ದ ಉರಿಗೌಡ, ದೊಡ್ಡನಂಜೇಗೌಡ ಎಂಬ ಫಿಕ್ಷನ್ ಕ್ಯಾರೆಕ್ಟರ್‌ಗಳು ರಾತ್ರೋರಾತ್ರಿ ಎಲ್ಲಿ ಹೋದರು ಎಂದು ಒಮ್ಮೆ @CTRavi_BJP ಅವರನ್ನು ವಿಚಾರಿಸಿ!@BJP4Karnataka ನಾಯಕರ ನಕಲಿತನ, ಸುಳ್ಳು, ಆತ್ಮವಂಚನೆ, ಡೋಂಗಿತನ ಎಲ್ಲವಕ್ಕೂ ಮೋದಿಯವರೇ ಪ್ರೇರಣೆಯೇ?#ModiMosa

    — Karnataka Congress (@INCKarnataka) March 12, 2023 " class="align-text-top noRightClick twitterSection" data=" ">

'ಖಾಲಿ ಕುರ್ಚಿಗಳಿಂದ ನರೇಂದ್ರ ಮೋದಿ ಅವರಿಗೆ ಮುಜುಗರ ಆಗಬಾರದೆಂದು ಬಲವಂತವಾಗಿ ಜನರನ್ನು ಕರೆತರುತ್ತಿರುವಿರಾ ಬಸವರಾಜ ಬೊಮ್ಮಾಯಿ ಅವರೇ? ಜನರ ಹಣದಲ್ಲಿ ಪಕ್ಷದ ಮೆರವಣಿಗೆ ಮಾಡಲು ನಾಚಿಕೆ ಎನಿಸುವುದಿಲ್ಲವೇ? ರಾಜ್ಯ ಬಿಜೆಪಿಯವರು ಜನ ಸೇರಿಸಲು ಇಷ್ಟೊಂದು ಪರದಾಡುತ್ತಿರುವುದು ಕರ್ನಾಟಕದಲ್ಲಿ ಮೋದಿ ಮುಖ ಹಳಸಿದೆ ಎಂಬುದನ್ನು ಸೂಚಿಸುತ್ತದೆ!' ಎಂದು ಕಾಂಗ್ರೆಸ್​ ಟೀಕಿಸಿದೆ.

'ಮೋದಿಯವರೆಂದರೆ ಕಳ್ಳರಿಗೆ, ಸುಳ್ಳರಿಗೆ, ವಂಚಕರಿಗೆ, ಭ್ರಷ್ಟರಿಗೆ, ರೌಡಿಗಳಿಗೆ ಭಲೇ ಅಚ್ಚುಮೆಚ್ಚು! ಬಿಜೆಪಿ ರೌಡಿ ಮೋರ್ಚಾ ವತಿಯಿಂದ ಮೋದಿಗೆ ಭಾರಿ ಸ್ವಾಗತವಿದೆ. ನರೇಂದ್ರ ಮೋದಿ ಅವರೇ, ಬಿಜೆಪಿ ರೌಡಿ ಮೋರ್ಚಾ ಯಾವಾಗ ಉದ್ಘಾಟಿಸುವಿರಿ? ಯಾವಾಗ ಮಚ್ಚು, ಲಾಂಗುಗಳನ್ನು ಪಕ್ಷದ ಚಿಹ್ನೆಯಾಗಿ ಪಡೆಯುವಿರಿ? ಮಹಿಳೆಯರು ಮತ್ತು ಮಕ್ಕಳ ಅಪರಾಧ ಪ್ರಕರಣಗಳ ಇತ್ಯರ್ಥಕ್ಕಾಗಿ ತ್ವರಿತಗತಿ ನ್ಯಾಯಾಲಯ ಸ್ಥಾಪಿಸುತ್ತೇವೆ ಎಂದಿತ್ತು ರಾಜ್ಯ ಬಿಜೆಪಿ. ಆದರೆ ಮಾಡಿದ್ದೇನು? ಭ್ರಷ್ಟರಿಗೆ ತ್ವರಿತಗತಿಯಲ್ಲಿ ಜಾಮೀನು ಸಿಗುವ ವ್ಯವಸ್ಥೆ! ಬಿಜೆಪಿ ಶಾಸಕರು, ಸರ್ಕಾರದ ಸಚಿವರೇ ಮಹಿಳಾ ಪೀಡಕರಾಗಿರುವಾಗ ಮಕ್ಕಳು ಮಹಿಳೆಯರಿಗೆ ನ್ಯಾಯ ಸಿಗುವುದೇ' ಎಂದು ಕಾಂಗ್ರೆಸ್​ ಕೇಳಿದೆ.

  • ಮಂಡ್ಯದಲ್ಲಿ ಕಬ್ಬು ಬೆಳೆಗಾರರು ಹಲವು ದಿನಗಳಿಂದ ಪ್ರತಿಭಟಿಸುತ್ತಿದ್ದರೂ ಕ್ಯಾರೇ ಅನ್ನಲಿಲ್ಲ @BJP4Karnataka ಸರ್ಕಾರ.

    ಈಗ ಅದೇ ಮಂಡ್ಯದಲ್ಲಿ ಮೋದಿ ಕರೆಸಿ ಬರಿಗೈ ಬೀಸಿದರೆ ಜನ ಕೇಳುವರೇ?

    ರಾಜ್ಯ ನಾಯಕರ ನಂತರ ಮೋದಿಗೂ ಖಾಲಿ ಕುರ್ಚಿಗಳ ದರ್ಶನವಾಗಿದೆ, ಹಣ ಕೊಟ್ಟರೂ ಬಾರದ ಜನ ಬಿಜೆಪಿ ಸೋಲಿಗೆ ಮುನ್ನುಡಿ ಬರೆದಿದ್ದಾರೆ.#ModiMosa pic.twitter.com/hssOgjmKlB

    — Karnataka Congress (@INCKarnataka) March 12, 2023 " class="align-text-top noRightClick twitterSection" data=" ">

'ಭ್ರಷ್ಟಾಚಾರಕ್ಕೆ ಬಿಜೆಪಿಯೇ ಭರವಸೆ, ಭ್ರಷ್ಟರಿಗೆ ಮೋದಿಯೇ ಭರವಸೆ! 40% ಕಮಿಷನ್ ಲೂಟಿಯ ಬಗ್ಗೆ ಹಲವು ಪತ್ರಗಳನ್ನು ಬರೆದರೂ ಇತ್ತ ಸುಳಿಯದ ನರೇಂದ್ರ ಮೋದಿ ಪಿಎಸ್ಐ ಹಗರಣದಿಂದ ನೊಂದ ಯುವಕರ ಬಗ್ಗೆ ಮಾತಾಡುವರೇ? ಹಿಂದೊಮ್ಮೆ ಬೆಂಗಳೂರಿಗೆ ಬಂದಾಗ ಎರಡೇ ದಿನಕ್ಕೆ ಕಿತ್ತುಬಂದ ರಸ್ತೆಯಲ್ಲಿ 'ವಿಕಾಸ್' ಕಂಡಿತ್ತು! ಮತ್ತೊಮ್ಮೆ ನೀವು ಹೀಗೆ ಹೋಗಿ ಹಾಗೆ ಬರುವುದರಲ್ಲಿ 'ಮಾಡಾಳ್' ಭ್ರಷ್ಟಾಚಾರ ಹೊರಬಂದಿದೆ. ಭ್ರಷ್ಟಾಚಾರದ ಪರ್ವತವನ್ನೇ ಹೊತ್ತಿರುವ ರಾಜ್ಯ ಬಿಜೆಪಿ ಪರವಾಗಿ ಮತ ಕೇಳಲು ನಾಚಿಕೆ ಎನಿಸುವುದಿಲ್ಲವೇ?' ಎಂದು ಕಿಡಿಕಾರಿದೆ.

'ಡಬಲ್ ಇಂಜಿನ್ ವೇಗ ಸಿಕ್ಕಿದ್ದು ಅಭಿವೃದ್ಧಿಗಲ್ಲ, ಭ್ರಷ್ಟಾಚಾರಕ್ಕೆ ಮಾತ್ರ! ಕರ್ನಾಟಕದಲ್ಲಿ ಡಬಲ್ ವೇಗದಲ್ಲಿ ಸಾಗುತ್ತಿರುವ 40% ಲೂಟಿಯ ಬಗ್ಗೆ "ನಾ ಖಾವುಂಗಾ ನಾ ಖಾನೆದುಂಗಾ" ಡೈಲಾಗ್ ಖ್ಯಾತಿಯ ಮೋದಿ ಅವರು ತೆಗೆದುಕೊಂಡ ಕ್ರಮಗಳೇನು? ರಾಜ್ಯದಲ್ಲಿನ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಒಂದೂ ಪದ ಮಾತಾಡದಿರುವುದೇಕೆ? ಪೆಟ್ರೋಲ್, ಡೀಸೆಲ್ ಬೆಲೆ ಕೈ ಸುಡುತ್ತಿವೆ, ಅಡುಗೆ ಅನಿಲದ ಬೆಲೆ ಮೈ ಸುಡುತ್ತಿವೆ! ನರೇಂದ್ರ ಮೋದಿ ಅವರೇ, ನಿಮ್ಮ ಅಚ್ಚೇ ದಿನಗಳು ಜನರ ಬದುಕನ್ನು ಭಾರವಾಗಿಸುತ್ತಿವೆ, ಬಿಜೆಪಿ ಈಗಾಗಲೇ ಜನರ ಭವಿಷ್ಯದ ಭರವಸೆ ಕಿತ್ತುಕೊಂಡಿರುವಾಗ "ಬಿಜೆಪಿಯೇ ಭರವಸೆ" ಎನ್ನುವುದು ಜೋಕ್ ಅಲ್ಲದೆ ಇನ್ನೇನು?' ಎಂದು ಕಾಂಗ್ರೆಸ್​ ಟೀಕಿಸಿದೆ.

  • ಮೋದಿಯವರೆಂದರೆ
    ಕಳ್ಳರಿಗೆ, ಸುಳ್ಳರಿಗೆ, ವಂಚಕರಿಗೆ, ಭ್ರಷ್ಟರಿಗೆ, ರೌಡಿಗಳಿಗೆ ಭಲೇ ಅಚ್ಚುಮೆಚ್ಚು!#BJPRowdyMorcha ವತಿಯಿಂದ ಮೋದಿಗೆ ಭಾರಿ ಸ್ವಾಗತವಿದೆ!@narendramodi ಅವರೇ, @BJP4Karnataka ಪಕ್ಷದ ರೌಡಿ ಮೋರ್ಚಾ ಯಾವಾಗ ಉದ್ಘಾಟಿಸುವಿರಿ? ಯಾವಾಗ
    ಮಚ್ಚು, ಲಾಂಗುಗಳನ್ನು ಪಕ್ಷದ ಚಿಹ್ನೆಯಾಗಿ ಪಡೆಯುವಿರಿ?#ModiMosa pic.twitter.com/lpEusvuAQT

    — Karnataka Congress (@INCKarnataka) March 12, 2023 " class="align-text-top noRightClick twitterSection" data=" ">

ಇದನ್ನೂ ಓದಿ: ವಿಶ್ವದ ಯಾವ ಶಕ್ತಿಯಿಂದಲೂ ಭಾರತದ ಪ್ರಜಾಪ್ರಭುತ್ವ ಪರಂಪರೆಗೆ ಹಾನಿಯಾಗಲ್ಲ: ಪ್ರಧಾನಿ ಮೋದಿ

Last Updated :Mar 13, 2023, 10:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.