ETV Bharat / state

ಉಪಚುನಾವಣೆಗೆ ಬಿಜೆಪಿ ರಣತಂತ್ರ: ದ್ರಾವಿಡ್​ ನಿವಾಸಕ್ಕೆ ಜೆ.ಪಿ.ನಡ್ಡಾ ಭೇಟಿ

author img

By

Published : Sep 22, 2019, 4:31 PM IST

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್​ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಕೇಂದ್ರ ಸಚಿವ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅರುಣ್ ಕುಮಾರ್ ಭೇಟಿ ನೀಡಿದ್ದರು.

ರಾಹುಲ್ ದ್ರಾವಿಡ್​ ನಿವಾಸ

ಬೆಂಗಳೂರು : ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್​ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನೀಡಿದ್ದರು. 370ನೇ ವಿಧಿ ರದ್ದತಿ ನಿರ್ಧಾರದ ಸಂಬಂಧ ಇಂದು ನಗರದ ಅರಮನೆ ಮೈದಾನದಲ್ಲಿ‌ ರಾಷ್ಟ್ರೀಯ ಏಕತಾ ಅಭಿಯಾನವನ್ನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜೆ.ಪಿ.ನಡ್ಡಾ ಭಾಗಿಯಾಗಿದ್ದರು.

ಕಾರ್ಯಕ್ರಮದ ಬಳಿಕ ಆರ್ಟಿಕಲ್ 370 ಕುರಿತ ಪುಸ್ತಕವನ್ನ ನೀಡಲು ಡಾಲರ್ಸ್ ಕಾಲೋನಿಯ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್​ ನಿವಾಸಕ್ಕೆ ಭೇಟಿ ನೀಡಿದರು. ಕೇಂದ್ರ ಸಚಿವ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅರುಣ್ ಕುಮಾರ್ ಸೇರಿದಂತೆ ಹಲವರು ನಡ್ಡಾಗೆ ಸಾಥ್​ ನೀಡಿದರು.

7 ದಶಕಗಳ ಬಳಿಕ ಐತಿಹಾಸಿಕ ನಿರ್ಣಯ : ಸದಾನಂದ ಗೌಡ

7 ದಶಕಗಳ ಬಳಿಕ ಐತಿಹಾಸಿಕ ನಿರ್ಣಯ : ಸದಾನಂದ ಗೌಡ

ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, 70 ವರ್ಷಗಳ ನಂತರ ಐತಿಹಾಸಿಕ ನಿರ್ಣಯವನ್ನ ಮೋದಿ ಸರ್ಕಾರ ತೆಗೆದುಕೊಂಡಿದೆ. ದೇಶದ ಐಕ್ಯತೆಗೆ ಧಕ್ಕೆಯಾಗಿದ್ದ ನಿಯಮಾವಳಿಗಳನ್ನು ತೆಗೆದುಹಾಕಲಾಗಿದೆ. ರಾಹುಲ್ ದ್ರಾವಿಡ್ ಪಾಕಿಸ್ತಾನ ಸೇರಿದಂತೆ ದೇಶ-ವಿದೇಶಗಳಲ್ಲಿ ಕ್ರಿಕೆಟ್ ಆಡಿದವರು. ಹಾಗೆ ಕಾಶ್ಮೀರದಲ್ಲೂ ಕ್ರಿಕೆಟ್ ಆಡಿದ್ದಾರೆ. ಮೊನ್ನೆ ಸುಧಾಮೂರ್ತಿ, ಬನ್ನಂಜೆ ಗೋವಿಂದ ಆಚಾರ್ಯ ಸೇರಿದಂತೆ ಹಲವರನ್ನ ಭೇಟಿ ಮಾಡಿದ್ದೇವೆ. ದೇಶದ ಏಕತೆಗೆ ಒತ್ತು ಕೊಡಲು, ಒಂದು ದೇಶ ಒಂದು ಸಂವಿಧಾನ ಇರಬೇಕು ಅನ್ನೋದು ನಮ್ಮ ಉದ್ದೇಶ ಎಂದು ತಿಳಿಸಿದರು.

ನೆರೆಪರಿಹಾರ ವಿಚಾರವಾಗಿ ಪ್ರತಿಕ್ರಿಯಿಸಿದ ಸದಾನಂದ ಗೌಡರು, ರಾಜ್ಯಕ್ಕೆ ನೀಡಲಾದ ಹಣ ಡಿಸೆಂಬರ್‌ನಲ್ಲಿ ಬರಬೇಕಿತ್ತು. ಈಗಾಗಲೇ 380 ಕೋಟಿ ರೂ. ಹಣ ರಿಲೀಸ್ ಆಗಿದೆ. ಕರ್ನಾಟಕ ಮಾತ್ರವಲ್ಲ ಕೇರಳ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು. ಅಲ್ಲಿ ಕೂಡ ಪರಿಹಾರ ನೀಡಬೇಕಿದೆ. ಮಳೆ ನಿಲ್ಲದೇ ಪರಿಹಾರ ನೀಡಲು ಸಾಧ್ಯವಿಲ್ಲ. ಜೀವಹಾನಿ ಆಗದಂತೆ ಎಚ್ಚರಿಕೆವಹಿಸಿ ಕ್ರಮಕೈಗೊಳ್ಳಲಾಗ್ತಿದೆ. ಹಾನಿಯ ಕುರಿತು ವರದಿ ಬಂದ ನಂತರ ಎಲ್ಲರಿಗೂ ಒಂದು ತಿಂಗಳೊಳಗೆ ಎಲ್ಲಾ ರೀತಿಯ ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದರು.

15 ಕ್ಷೇತ್ರಗಳಿಗೆ ಉಪಚುನಾವಣೆ ವಿಚಾರ :

6 ತಿಂಗಳೊಳಗೆ ಚುನಾವಣೆ ನಡೆಯಬೇಕು. ಯಾವತ್ತು ಸರ್ಕಾರ ರಚನೆ ಮಾಡಿದೆವೋ, ಅಂದಿನಿಂದಲೇ ಬೈ ಎಲೆಕ್ಷನ್‌ಗೆ ರೆಡಿಯಾಗಿದ್ದೀವಿ.‌ ಲೋಕಸಭಾ ಚುನಾವಣೆಯಲ್ಲಿ 25+1 ಹಾಗೆ, 15 ಸ್ಥಾನವನ್ನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:ಮಾಜಿ ಕ್ರಿಕೆಟಿಗ ರಾಹುಲ್ ನಿವಾಸಕ್ಕೆ ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಭೇಟಿ
ಬಿಜೆಪಿಯ ಹಲವು ಮುಖಂಡರು ಭೇಟಿ

370 ವಿಧಿ ರದ್ದತಿ ನಿರ್ಧಾರದ ಸಂಬಂಧ ಇಂದು ನಗರದ ಅರಮನೆ ಮೈದಾನದಲ್ಲಿ‌ ರಾಷ್ಟ್ರೀಯ ಏಕತಾ ಅಭಿಯಾನವನ್ನ ನಡೆಸಲಾಗಿತ್ತು. ಈ ಸಭೆಗೆ ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಭೇಟಿಯಾಗಿದ್ದರು..

ಈ ಸಭೆಯಾದ ನಂತ್ರ ಆರ್ಟಿಕಲ್ 370 ಕುರಿತ ಪುಸ್ತಕ ವನ್ನ ನೀಡಲು ಡಾಲರ್ಸ್ ಕಾಲೋನಿಯ ಮಾಜಿ ಕ್ರಿಕೆಟಿಗ ರಾಹುಲ್ ನಿವಾಸಕ್ಕೆ ಭೇಟಿಯಾಗಿದ್ದಾರೆ. ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಇವರಿಗೆ ಕೇಂದ್ರ ಸಚಿವ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಅರುಣ್ ಕುಮಾರ್ ಸೇರಿದಂತೆ ಹಲವರು ಸಾಥ್ ನೀಡಿದ್ರು

ಇನ್ನು ಸದಾನಂದ ಗೌಡ ಮಾತಾಡಿ 70 ವರ್ಷದ ನಂತರ ಐತಿಹಾಸಿಕ ನಿರ್ಣಯವನ್ನ ಮೋದಿ ಸರ್ಕಾರ ತೆಗೆದುಕೊಂಡಿದೆ.
ದೇಶದ ಐಕ್ಯತೆ ಧಕ್ಕೆಯಾಗಿದ್ದ ನಿಯಮಾವಳಿಗಳನ್ನು ತೆಗೆದುಹಾಕಲಾಗಿದೆ.
ರಾಹುಲ್ ದ್ರಾವಿಡ್ ಪಾಕಿಸ್ತಾನ ಸೇರಿದಂತೆ ದೇಶ ವಿದೇಶಗಳಲ್ಲಿ ಕ್ರಿಕೆಟ್ ಆಡಿದವರು ಹಾಗೆ ಕಾಶ್ಮೀರದಲ್ಲೂ ಕ್ರಿಕೆಟ್ ಆಡಿದ್ದಾರೆ. ಹೀಗಾಗಿ ಮೊನ್ನೆ ಸುಧಾಮೂರ್ತಿ, ಬನ್ನಂಜೆ ಗೋವಿಂದ ಆಚಾರ್ಯ ಸೇರಿದಂತೆ ಹಲವರನ್ನ ಭೇಟಿ ಮಾಡಲಾಗಿದೆ .ದೇಶದ ಏಕತೆಗೆ ಒತ್ತು ಕೋಡೋಕೆ, ಒಂದು ದೇಶ ಒಂದು ಸಂವಿಧಾನ ಇರಬೇಕು ಅನ್ನೋದು ನಮ್ಮ ಉದ್ದೇಶ ಎಂದ್ರು.

ಹಾಗೆ ಪ್ರವಾಹ ಪರಿಹಾರ ವಿಚಾರದ ಕುರಿತು ಮಾತಾಡಿ
ರಾಜ್ಯಕ್ಕೆ ಅಲಾಟ್ ಆದ ಹಣ ಡಿಸೆಂಬರ್‌ನಲ್ಲಿ ಬರ್ಬೇಕಿತ್ತು, ಆದ್ರೆ ಈಗಾಗಲೇ 380 ಕೋಟಿ ಹಣ ರಿಲೀಸ್ ಆಗಿದೆ.ಕರ್ನಾಟಕ ಮಾತ್ರವಲ್ಲ ಕೇರಳ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಭೀಕರ ಪ್ರವಾಹ ಆಗಿದೆ.ಅಲ್ಲಿಗೂ ಕೂಡ ಪರಿಹಾರ ನೀಡಬೇಕಿದೆ.ಮಳೆ ನಿಲ್ಲದೇ ಪರಿಹಾರ ಕಾರ್ಯ ಮಾಡೋಕೆ ಆಗಲ್ಲ
ಜೀವಹಾನಿ ಆಗದಂತೆ ಎಚ್ಚರಿಕೆವಹಿಸಿ ಕ್ರಮಕೈಗೊಳ್ಳಲಾಗ್ತಿದೆ.
ಹಾನಿಗೆ ಒಳಗಾದ ವರದಿ ಬಂದ ನಂತರ ಮನೆ ಕಟ್ಟೋಕೆ, ತೊಂದರೆ ಅಗಿರೋ ರೈತರಿಗೆ ಸೇರಿದಂತೆ ಎಲ್ಲರಿಗೂ ಒಂದು ತಿಂಗಳೊಳಗೆ ಎಲ್ಲಾ ರೀತಿಯ ಪರಿಹಾರ ಸಿಗಲಿದೆ ಎಂದ್ರು

ಹಾಗೆ ೧೫ಕ್ಷೇತ್ರಗಳಿಗೆ ಉಪ ಚುನಾವಣೆ ವಿಚಾರ ಮಾತಾಡಿ
ಆರು ತಿಂಗಳೊಳಗೆ ಚುನಾವಣೆ ಆಗ್ಬೇಕು, ನ್ಯಾಚುರಲಿ ಅನೌನ್ಸ್ ಆಗಿದೆ ಯಾವತ್ತೂ ಸರ್ಕಾರ ರಚನೆ ಮಾಡಿದ್ವೋ, ಅಂದಿನಿಂದಲೇ ಬೈ ಎಲೆಕ್ಷನ್‌ಗೆ ರೆಡಿಯಾಗಿದ್ದೀವಿ‌ ನಮಗೆ ವಿಶ್ವಾಸ ಇದೆ, ಲೋಕಸಭಾ ಚುನಾವಣೆಯಲ್ಲಿ ೨೫+೧ ಕೊಟ್ಟಂತೆ, ೧೫ ಕ್ಕೆ ೧೫ ಸ್ಥಾನವನ್ನ ಗೆಲ್ಲುತ್ತೇವೆ. ಹಾಗೆ ಅನರ್ಹರ ವಿಚಾರ ಕೋರ್ಟ್ ನಲ್ಲಿರೋದ್ರಿಂದ ಈ ಬಗ್ಗೆ ನಾನು ಮಾತನಾಡಲ್ಲ ಎಂದು ಡಿವಿಎಸ್ ಹೇಳಿದರು.




Body:KN_BNG_07_DRAVId_7204498Conclusion:KN_BNG_07_DRAVId_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.