ಬಿಎಂಎಸ್ ಶಿಕ್ಷಣ ಟ್ರಸ್ಟ್​ ಬಗ್ಗೆ ಉತ್ತರ ನೀಡದ ಅಶ್ವತ್ಥನಾರಾಯಣ ವಿರುದ್ಧ ಜೆಡಿಎಸ್ ಕೆಂಡ..​ ಸಿಎಂ ಭರವಸೆ ನಂತರ ಧರಣಿ ವಾಪಸ್​

author img

By

Published : Sep 22, 2022, 11:04 PM IST

jds-mlas-protest-against-higher-education-minister-ashwath-narayan-in-assembly

ಬಿಎಂಎಸ್ ಶಿಕ್ಷಣ ಟ್ರಸ್ಟ್​ನಲ್ಲಿನ ಅಕ್ರಮಗಳ ಬಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸಮರ್ಪಕ ಉತ್ತರ ನೀಡಿಲ್ಲ. ತನಿಖೆ ನಡೆಸುವ ಬೇಡಿಕೆಗೆ ಸ್ಪಂದಿಸಿಲ್ಲಎಂದು ಆಕ್ಷೇಪಿಸಿ ಸದನದಲ್ಲಿ ಜೆಡಿಎಸ್​​ ಸದಸ್ಯರು ಧರಣಿ ನಡೆಸುತ್ತಿದ್ದರು.

ಬೆಂಗಳೂರು: ಪ್ರತಿಷ್ಠಿತ ಬಿಎಂಎಸ್ ಸಾರ್ವಜನಿಕ ಶಿಕ್ಷಣ ಟ್ರಸ್ಟ್​​ನಲ್ಲಿನ ಅಕ್ರಮಗಳ ತನಿಖೆಗೆ ಒತ್ತಾಯಿಸಿ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರು ಇಂದು ಧರಣಿ ನಡೆಸಿದರು. ಈ ಧರಣಿಯನ್ನು ಆಹೋರಾತ್ರಿ ನಡೆಸಲು ಮುಂದಾಗಿದ್ದರು. ಆದರೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂಕ್ತ ಉತ್ತರ ನೀಡುವ ಭರವಸೆಯ ಜೊತೆಗೆ ತನಿಖೆಗೂ ನಿರ್ಧಾರ ಹೇಳಿದ ಹಿನ್ನೆಲೆ ಜೆಡಿಎಸ್ ನಾಯಕರು ಧರಣಿ ಕೈಬಿಟ್ಟಿದ್ದಾರೆ.

ಬಿಎಂಎಸ್ ಶಿಕ್ಷಣ ಟ್ರಸ್ಟ್​ನಲ್ಲಿನ ಅಕ್ರಮಗಳ ಬಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸಮರ್ಪಕ ಉತ್ತರ ನೀಡಿಲ್ಲ. ತನಿಖೆ ನಡೆಸುವ ಬೇಡಿಕೆಗೆ ಸ್ಪಂದಿಸಿಲ್ಲವೆಂದು ಆಕ್ಷೇಪಿಸಿ ಸದನದಲ್ಲಿ ಜೆಡಿಎಸ್​​ ಸದಸ್ಯರು ಧರಣಿಗೆ ಮುಂದಾದರು. ಈ ವೇಳೆ, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ನಾಳೆಗೆ ಮುಂದೂಡಿದ್ದರಿಂದ ಆಹೋರಾತ್ರಿ ಧರಣಿ ನಡೆಸತೊಡಗಿದರು.

ಬಸವರಾಜ ಬೊಮ್ಮಾಯಿ ಭರವಸೆ: ಮೊದಲು ಸಚಿವರಾದ ಮಾಧುಸ್ವಾಮಿ, ಆನಂದ್ ಸಿಂಗ್ ಹಾಗೂ ಶ್ರೀರಾಮುಲು ಹಾಗೂ ಸ್ಪೀಕರ್ ಕಾಗೇರಿ ಅವರು ಜೆಡಿಎಸ್ ನಾಯಕರ ಮನವೊಲಿಸಲು ಪ್ರಯತ್ನಿಸಿದರು. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರನ್ನು ಧರಣಿ ಕೈಬಿಡುವಂತೆ ಕೋರಿಕೊಂಡರು. ಆದರೆ, ಇವರ ಮಾತಿಗೆ ಬೆಂಬಲ ಸಿಗದಿದ್ದಾಗ ಮನವರಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾದರು. ನಾಳೆ ಬೆಳಗ್ಗೆ ಸದನದಲ್ಲಿ ಉತ್ತರ ಕೊಡಲಾಗುತ್ತದೆ ಹಾಗೂ ಈ ಉತ್ತರದಲ್ಲಿ ತನಿಖೆ ಸೂಕ್ತ ನಿರ್ಧಾರ ಮಾಡುವ ಭರವಸೆ ನೀಡಿದರು. ಹೀಗಾಗಿ ಜೆಡಿಎಸ್ ನಾಯಕರು ಧರಣಿ ಕೈಬಿಟ್ಟರು.

ನಾಳೆ ಮತ್ತೊಮ್ಮೆ ಪರಿಶೀಲನೆ: ನಾಳೆ ಬೆಳಗ್ಗೆ ಮತ್ತೆ ಧರಣಿ ಮುಂದುವರಿಸಲು ನಿರ್ಧಾರ ಮಾಡಿದ್ದು, ಬಿಎಂಎಸ್​ನ ಮೂಲ ಉದ್ದೇಶ ಗಾಳಿಗೆ ತೂರಿ ಸಾರ್ವಜನಿಕ ಟ್ರಸ್ಟ್​ ಅನ್ನು, ಖಾಸಗಿ ಟ್ರಸ್ಟ್ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಸಚಿವರ ಉದ್ದಟತನದ ಉತ್ತರ ನೀಡಿದ್ದಾರೆ. ಹೀಗಾಗಿ ನಾಳೆಯೂ ಧರಣಿ ಮುಂದುವರಿಸುತ್ತೇವೆ ಎಂದು ಜೆಡಿಎಸ್​ ನಾಯಕ ಹೆಚ್​ಡಿ ಕುಮಾರಸ್ವಾಮಿ ತಿಳಿಸಿದರು.

ಧರಣಿ ಕೈಬಿಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕಾನೂನು ಸಚಿವರು, ಸಿಎಂ, ಸಭಾಧ್ಯಕ್ಷರ ಮನವಿ ಮೇರೆಗೆ ಅಹೋರಾತ್ರಿ ಧರಣಿ ವಾಪಸ್​ ಪಡೆದಿದ್ದೇವೆ. ಚರ್ಚೆ ಮಾಡಲು ಏನಿದೆ?. ದಾಖಲೆ ಇಟ್ಟಾಗ ಸುಮ್ಮನೆ ಆಗಿದ್ದು, ಸರ್ಕಾರಕ್ಕೆ ಬೆಂಬಲ ನೀಡಲು ಮೌನಕ್ಕೆ ಶರಣಾಗಿದ್ದಾರೆ. ಎಂದು ಕಾಂಗ್ರೆಸ್ ನಡೆ ಬಗ್ಗೆಯೂ ಕೆಂಡಕಾರಿದರು.

ಬಿಜೆಪಿ ಜೊತೆ ಯಾರು ಹೊಂದಾಣಿಕೆ ಮಾಡಿಕೊಂಡಿದ್ದಾರೆ?. ಸಂಪೂರ್ಣ ತನಿಖೆ ಆಗಬೇಕು. ನ್ಯಾಯಾಂಗ ತನಿಖೆ ಆಗಬೇಕು. ಹಿಂದಿನ ನ್ಯಾಯಾಂಗ ತನಿಖೆ ಬಗ್ಗೆ ಮಾತನಾಡಲ್ಲ. ಹಣಕಾಸಿನ ವ್ಯವಹಾರದ ಬಗ್ಗೆ ಸಿಬಿಐ ತನಿಖೆ ಕೇಳಬಹುದು. ಈ ದೇಶದ ವ್ಯವಸ್ಥೆ ಏನಾಗಿದೆ?. ತಾರ್ಕಿಕ ಅಂತ್ಯ ಕಾಣಲ್ಲ ಎಂದು ಹೇಳಿದ್ದೇನೆ. ಮಂತ್ರಿಗಳು ಕೆಣಕಿದ್ರಿಂದ ಒಂದು ಪ್ರಕರಣ ಜನತೆಯ ಮುಂದೆ ಇಟ್ಟಿದ್ದೇನೆ. ಒಂದು ಚಾನ್ಸ್ ತೆಗೆದುಕೊಳ್ಳೋಣ ಎಂದು ಕುಮಾರಸ್ವಾಮಿ ಪ್ರಸ್ತಾಪಿಸಿದ್ದೇನೆ ಎಂದರು.

ಇದನ್ನೂ ಓದಿ: ವಕ್ಫ್ ಆಸ್ತಿ ಕಬಳಿಕೆ: ಪರಿಷತ್​ನಲ್ಲಿ ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆ, ಕಾಂಗ್ರೆಸ್ - ಬಿಜೆಪಿ ಸದಸ್ಯರ ವಾಗ್ವಾದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.