ETV Bharat / state

ಶಿವಮೊಗ್ಗದಲ್ಲಿ ನಾಳೆ ಸಂಜೆವರೆಗೆ ನಿಷೇಧಾಜ್ಞೆ: ಐಜಿ ತ್ಯಾಗರಾಜನ್

author img

By

Published : Aug 18, 2022, 4:14 PM IST

Updated : Aug 18, 2022, 10:49 PM IST

ಶಿವಮೊಗ್ಗ ನಗರದಲ್ಲಿ ಸೆಕ್ಷನ್‌ 144 ಜಾರಿಯಲ್ಲಿದೆ. ಅಂಗಡಿಗಳನ್ನು ಸಂಜೆ 6-30ರ ವರೆಗೆ ತೆರೆಯಲು ಅವಕಾಶ ನೀಡಲಾಗಿದೆ.

ಐಜಿ ತ್ಯಾಗರಾಜನ್
ಐಜಿ ತ್ಯಾಗರಾಜನ್

ಶಿವಮೊಗ್ಗ: ವೀರ್‌ ಸಾವರ್ಕರ್ ಭಾವಚಿತ್ರ ವಿವಾದದಿಂದ ಶಿವಮೊಗ್ಗದಲ್ಲಿ ಭುಗಿಲೆದ್ದ ಗಲಾಟೆ ಹತೋಟಿಗೆ ತರಲು ನಗರದಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗಿತ್ತು. ಈ ಕುರಿತು ಪೂರ್ವ ವಲಯ ಐಜಿ ತ್ಯಾಗರಾಜನ್​ ಮಾತನಾಡಿ, ನಾಳೆ ಸಂಜೆವರೆಗೆ ನಿಷೇಧಾಜ್ಞೆ ವಿಸ್ತರಿಸಲಾಗಿದೆ ಎಂದರು.

ಪೂರ್ವ ವಲಯ ಐಜಿ ತ್ಯಾಗರಾಜನ್ ಅವರು ಮಾತನಾಡಿದರು

ನಗರದಲ್ಲಿ ಇವತ್ತು ರಾತ್ರಿ ಸಹ ಪೊಲೀಸ್ ಬಂದೋಬಸ್ತ್ ಇರಲಿದೆ. ರೂಟ್ ಮಾರ್ಚ್ ಮಾಡುತ್ತಿದ್ದೇವೆ. ಬೇರೆ ಜಿಲ್ಲೆಗಳಿಂದ ನಿಯೋಜಿಸಿರುವ ಪೊಲೀಸರು ಇಲ್ಲೇ ಇದ್ದಾರೆ. ಅವರನ್ನು ಕಳುಹಿಸಬೇಕೋ ಬೇಡವೋ ಎಂಬುದನ್ನು ನಾಳೆ ತೀರ್ಮಾನಿಸುತ್ತೇವೆ.

ಅಂಗಡಿಗಳನ್ನು ಸಂಜೆ 6-30ರ ವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ನಂತರ ನಮ್ಮ ಸಿಬ್ಬಂದಿಯೇ ಬಂದ್​ ಮಾಡಿಸುತ್ತಾರೆ. ಇನ್ನು, ಚೂರಿ ಇರಿದ ಪ್ರಕರಣದ ತನಿಖೆ ನಡೆಯುತ್ತಿದೆ. ಘಟನೆಯ ವಿಡಿಯೋಗಳನ್ನು ಪರಿಶೀಲಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.

Last Updated :Aug 18, 2022, 10:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.