ETV Bharat / state

ಸರ್ಕಾರಕ್ಕೆ ಹಾಗೂ ನೆಹರು ಓಲೇಕಾರ್​ಗೆ ಹೈಕೋರ್ಟ್ ನೋಟಿಸ್!

author img

By

Published : Jan 5, 2021, 5:40 PM IST

high-court-
ಹೈಕೋರ್ಟ್

ಸಾಮಾಜಿಕ ಕಾರ್ಯಕರ್ತ ಕೆ. ಸಿ. ರಾಜಣ್ಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಗಣಿಸಿದ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಎ.ಎಸ್.ಓಕಾ, ಆಯೋಗದ ಆಯ್ಕೆ ಪ್ರಕ್ರಿಯೆ ಹಾಗೂ ಅಪರಾಧ ಹಿನ್ನಲೆ ಇದ್ದರೂ ಆಯ್ಕೆಗೆ ಮುಂದಾಗಿರುವ ಬಗೆಗಿನ ವಿವರಣೆಯನ್ನ ರಾಜ್ಯ ಸರ್ಕಾರಕ್ಕೆ ಹಾಗೂ ಅಧ್ಯಕ್ಷ ನೆಹರು ಓಲೇಕರ್ ಗೆ ಕೇಳಿ ನೋಟಿಸ್ ನೀಡಿದೆ.

ಬೆಂಗಳೂರು: ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ಆಯೋಗದ ಅಧ್ಯಕ್ಷ ನೆಹರು ಓಲೇಕರ್ ಆಯ್ಕೆ ಕುರಿತು ಹೈಕೋರ್ಟ್ ವಿಭಾಗೀಯ ಪೀಠ ಸರ್ಕಾರಕ್ಕೆ ಹಾಗೂ ನೆಹರು ಓಲೇಕಾರ್​ಗೆ ನೋಟಿಸ್ ನೀಡಿದೆ.

ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​​ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ, ಆಯೋಗದ ಆಯ್ಕೆ ಪ್ರಕ್ರಿಯೆ ಬಗ್ಗೆ ಹಾಗೂ ಅಪರಾಧ ಹಿನ್ನೆಲೆಯಿದ್ದರೂ ಆಯ್ಕೆಗೆ ಮುಂದಾಗಿರುವ ಬಗೆಗಿನ ವಿವರಣೆಯನ್ನು ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಹಾಗೂ ನೆಹರು ಓಲೇಕರ್​ಗೆ ನೋಟಿಸ್ ನೀಡಿದೆ.

ಪ್ರಕರಣವನ್ನು ಫೆಬ್ರವರಿ 16ಕ್ಕೆ ಮುಂದೂಡಲಾಗಿದ್ದು, ಅಷ್ಟರೊಳಗೆ ಸರ್ಕಾರ ಹಾಗೂ ಅಧ್ಯಕ್ಷ ಓಲೇಕಾರ್ ನ್ಯಾಯಾಲಯಕ್ಕೆ ಉತ್ತರಿಸಬೇಕಿದೆ.

ಓದಿ: 'ಕುಮಾರಸ್ವಾಮಿ ವಿಚಾರದಲ್ಲಿ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡಿದ್ದೇನೆ'

ಅರ್ಜಿದಾರ ಕೆ.ಸಿ.ರಾಜಣ್ಣ ಪ್ರಕಾರ, ಸರ್ಕಾರ ಓಲೇಕಾರ್​ ಅವರ ಅಪರಾಧ ಹಿನ್ನೆಲೆಯನ್ನು ಆಯೋಗದ ಅಧ್ಯಕ್ಷ ಹುದ್ದೆಯ ಆಯ್ಕೆ ವಿಷಯದಲ್ಲಿ ಪರಿಗಣಿಸಿಲ್ಲ. ಬಾಹ್ಯ ಒತ್ತಡದಿಂದ ಈ ನಿರ್ಧಾರ ಮಾಡಿರುವಂತಾಗಿದೆ. ಇದು ಪಾರದರ್ಶಕತೆ ಇಲ್ಲದ ನಿರ್ಧಾರ ಎಂದು ಆರೋಪಿಸಿದ್ದಾರೆ. ಎಸ್​ಸಿ, ಎಸ್​ಟಿ ಆಯೋಗಕ್ಕೆ ಸಿವಿಲ್ ಕೋರ್ಟ್ ಅಧಿಕಾರ ಇರುತ್ತದೆ. ಹೀಗಾಗಿ ನೆಹರು ಓಲೇಕಾರ್ ಆಯ್ಕೆಯನ್ನು ಅರ್ಜಿದಾರ ನ್ಯಾಯಾಲಯದ ಮೂಲಕ ಪ್ರಶ್ನಿಸಿದ್ದು, ಓಲೇಕಾರ್​ ಆಯ್ಕೆಯನ್ನು ಅಸಿಂಧುಗೊಳಿಸಲು ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.