ETV Bharat / state

ಸಾಲಗಾರರ ಹಿಂಸೆ ತಾಳಲಾರದೇ ಜಿಮ್ ಮಾಲೀಕ ಆತ್ಮಹತ್ಯೆ

author img

By

Published : Aug 31, 2022, 9:28 AM IST

ಕೋವಿಡ್ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಮನೋಹರ್​ ಎಂಬುವವರು ಸಾಲಗಾರರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

gym-owner-committed-suicide-in-bangalore
ಸಾಲಗಾರರ ಹಿಂಸೆ ತಾಳಲಾರದೆ ಜಿಮ್ ಮಾಲೀಕ ಆತ್ಮಹತ್ಯೆ

ಬೆಂಗಳೂರು: ನಗರದ ಕಮ್ಮಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ ಜಿಮ್‌ ನಡೆಸುತ್ತಿದ್ದ ಮನೋಹರ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಗಾರರ ಹಿಂಸೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್‌ನೋಟ್ ಬರೆದು ಹಾಗೂ ವಿಡಿಯೊ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಿರುಕುಳದ ನೀಡಿದ ಆರೋಪದ ಮೇರೆಗೆ ಹರೀಶ್‌, ಮಂಜುನಾಥ್‌ ಪ್ರಸಾದ್‌, ರಾಜು, ಅಭಿ ಹಾಗೂ ನಾಗೇಶ್ವರ ರಾವ್‌ ವಿರುದ್ಧ ಗಂಗಮ್ಮನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋವಿಡ್ ಲಾಕ್‌ಡೌನ್‌ನಿಂದ ಮನೋಹರ್‌ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಬಡ್ಡಿ ಪಾವತಿ ಸಾಧ್ಯವಾಗಿರಲಿಲ್ಲ.

ಸಾಲಗಾರರು ಬಡ್ಡಿ ಹಾಗೂ ಅಸಲಿನ ಹಣ ಮರು ಪಾವತಿಸುವಂತೆ ಕಿರುಕುಳ ನೀಡುತ್ತಿದ್ದರು. ಜಿಮ್‌ ನಡೆಸುತ್ತಿದ್ದ ಕಟ್ಟಡ, ಮನೆಯ ಬಳಿಗೆ ಬಂದು ಗಲಾಟೆ ನಡೆಸುತ್ತಿದ್ದರು. ಸಾಲಗಾರರ ಹಿಂಸೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದು, ಕಿರುಕುಳ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನೋಹರ್ ಸಹೋದರ ದೂರು ನೀಡಿದ್ಧಾರೆ.

ಇದನ್ನೂ ಓದಿ : ಡಿಜಿಟಲ್ ರೇಪ್​ ಕೇಸ್​.. 65ರ ವೃದ್ಧನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.