ETV Bharat / state

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ : ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

author img

By

Published : Jul 14, 2021, 3:53 PM IST

ಈಗಾಗಲೇ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ತೆರಿಗೆ ವಂಚಕರ ಹಾಗೂ ಬಾಕಿ ಇರುವವರ ಬಗ್ಗೆ ಸರ್ವೇ ಮಾಡಲಾಗಿದೆ. ಬಾಕಿ ಉಳಿಸಿದವರಿಗೆ ಪಾಲಿಕೆಯಿಂದ ನೋಟಿಸ್ ಕೊಡಲಾಗಿದೆ. ನೋಟಿಸ್ ಪಡೆದವರು ದಂಡ ಸಮೇತ ತೆರಿಗೆ ಕಟ್ಟುವಂತೆ ಪಾಲಿಕೆಯಿಂದ ಸೂಚನೆ ನೀಡಲಾಗಿದೆ..

Gourav gupta
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕಷ್ಟು ಆಸ್ತಿಗಳು, ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ. ಇದರಿಂದಾಗಿ ಪಾಲಿಕೆ ಬೊಕ್ಕಸಕ್ಕೆ ಪ್ರತಿ ವರ್ಷ ನಷ್ಟವಾಗ್ತಿದೆ. ಬಿಬಿಎಂಪಿ ಹಾಕಿಕೊಳ್ಳುವ ನಿರೀಕ್ಷಿತ ಆದಾಯದ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಈ ವರ್ಷವೂ ಪಾಲಿಕೆಗೆ ನಿರೀಕ್ಷೆಯಷ್ಟು ಆಸ್ತಿ ತೆರಿಗೆ ಪಾವತಿಯಾಗುತ್ತಿಲ್ಲ.

ಬಿಬಿಎಂಪಿಯ ಪ್ರಮುಖ ಆದಾಯ ಮೂಲವಾಗಿರುವ ಆಸ್ತಿ ತೆರಿಗೆ ವಿಚಾರವನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಮಾತನಾಡಿದ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಪಾಲಿಕೆ ಕಂದಾಯ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಆಸ್ತಿ ತೆರಿಗೆ ಕಟ್ಟದೆ ಬಾಕಿ ಉಳಿಸಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಪ್ರಾಪರ್ಟಿ ಸೀಲ್ ಮಾಡುವುದು ಅಥವಾ ಇತರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ

ಈಗಾಗಲೇ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ತೆರಿಗೆ ವಂಚಕರ ಹಾಗೂ ಬಾಕಿ ಇರುವವರ ಬಗ್ಗೆ ಸರ್ವೇ ಮಾಡಲಾಗಿದೆ. ಬಾಕಿ ಉಳಿಸಿದವರಿಗೆ ಪಾಲಿಕೆಯಿಂದ ನೋಟಿಸ್ ಕೊಡಲಾಗಿದೆ. ನೋಟಿಸ್ ಪಡೆದವರು ದಂಡ ಸಮೇತ ತೆರಿಗೆ ಕಟ್ಟುವಂತೆ ಪಾಲಿಕೆಯಿಂದ ಸೂಚನೆ ನೀಡಲಾಗಿದೆ.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 2,800 ಕೋಟಿ ಆಸ್ತಿ ತೆರಿಗೆ ಕ್ರೂಢೀಕರಿಸಲು ಪಾಲಿಕೆ ಗುರಿ ಹೊಂದಿದ್ದು, ಆಸ್ತಿ ತೆರಿಗೆ ಜತೆಗೆ ಇತರೆ ಸೆಸ್​​ಗಳು ಕೂಡ ಸಂಗ್ರಹಿಸಲಿದೆ. ಕೊರೊನಾ ಲಾಕ್​​ಡೌನ್ ಕಾರಣದಿಂದ ಈ ಬಾರಿ ಆಸ್ತಿ ತೆರಿಗೆ ಕ್ರೂಢೀಕರಣದಲ್ಲಿ ಪಾಲಿಕೆಗೆ ಹಿನ್ನಡೆಯಾಗಿದೆ ಎಂದು ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.

ಇದನ್ನೂ ಓದಿ : ಬೆಂಗಳೂರು ಹೊರವಲಯದಲ್ಲಿ ತಗ್ಗದ ಕೊರೊನಾರ್ಭಟ : Red Zone ಏರಿಯಾಗಳ ಪಟ್ಟಿ ನೀಡಿದ ಪಾಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.