ETV Bharat / state

ಮಾಜಿ ಪತ್ರಕರ್ತನ ಬಂಧನ... ಬಿಜೆಪಿಯಿಂದ ಪೊಲೀಸ್​​ ಮಹಾನಿರ್ದೇಶಕರಿಗೆ ದೂರು

author img

By

Published : Apr 27, 2019, 8:22 PM IST

ಗೃಹ ಸಚಿವರ ಲೆಟರ್ ಹೆಡ್ ನಕಲು ಪ್ರಕರಣ ಸಿಐಡಿ ಪೊಲೀಸರಿಂದ ಮತ್ತೋರ್ವ ಮಾಜಿ‌ ಪತ್ರಕರ್ತನ ಬಂಧನ.

ಗೃಹ ಸಚಿವರ ಲೆಟರ್ ಹೆಡ್ ನಕಲು ಪ್ರಕರಣ ಸಿಐಡಿ ಪೊಲೀಸರಿಂದ ಮತ್ತೋರ್ವ ಮಾಜಿ‌ ಪತ್ರಕರ್ತನ ಬಂಧನ

ಬೆಂಗಳೂರು: ಗೃಹ ಸಚಿವ ಎಂ.ಬಿ.ಪಾಟೀಲ್ ಲೆಟರ್ ಹೆಡ್ ನಕಲು ಮಾಡಿದ ಪ್ರಕರಣದಡಿ ಸಿಐಡಿ ಪೊಲೀಸರು ಮತ್ತೋರ್ವ ಮಾಜಿ‌ ಪತ್ರಕರ್ತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿಂದೆ ಸಿಐಡಿ ಪೊಲೀಸ್ ಬಂಧಿಸಿದ್ದ ಪೋಸ್ಟ್ ಕಾರ್ಡ್ ಪತ್ರಿಕೆಯ ಮಹೇಶ್ ವಿಕ್ರಮ್ ಹೆಗ್ಡೆ ಹೇಳಿಕೆ‌ಯ ಆಧಾರದ ಮೇಲೆ ನಿನ್ನೆ ರಾತ್ರಿ ಮಡಿಕೇರಿಯಲ್ಲಿ ಬಂಧಿಸಿದ್ದಾರೆ.

ಗೃಹ ಸಚಿವ ಎಂ.ಬಿ.ಪಾಟೀಲ್ ಲೆಟರ್ ಹೆಡ್ ನಕಲು ಮಾಡಿದ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಸಿಐಡಿ ವಿಚಾರಣೆ ವೇಳೆ ಲೆಟರ್ ನಕಲು ಮಾಡಲು ಹೇಮಂತ್ ಕುಮಾರ್​​ ತಿಳಿಸಿದ್ದಾಗಿ ಮಹೇಶ್ ಹೆಗ್ಡೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಎಂ.ಬಿ.ಪಾಟೀಲ್ ಹೆಸರಿನಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ಅರೋಪದಡಿ ಹೇಮಂತ್ ಕುಮಾರ್​ನನ್ನ ನಿನ್ನೆ ರಾತ್ರಿ ಮಡಿಕೇರಿಯಲ್ಲಿ ಬಂಧಿಸಲಾಗಿದೆ.

ಗೃಹ ಸಚಿವರ ಲೆಟರ್ ಹೆಡ್ ನಕಲು ಪ್ರಕರಣ ಸಿಐಡಿ ಪೊಲೀಸರಿಂದ ಮತ್ತೋರ್ವ ಮಾಜಿ‌ ಪತ್ರಕರ್ತನ ಬಂಧನ

ಇತ್ತೀಚಿಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಹೇಮಂತ್ ಬಂಧನದ ಹಿನ್ನೆಲೆ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ, ಸುರೇಶ್ ಕುಮಾರ ನೇತೃತ್ವದ ನಿಯೋಗ ಡಿಜಿ ನೀಲಮಣಿ ಎನ್. ರಾಜು ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಿಂಬಾವಳಿ, ರಾಜ್ಯ ಸರ್ಕಾರ ಸೇಡಿನ ರಾಜಕೀಯಕ್ಕೆ ಮುಂದಾಗಿದೆ. ರಾಜ್ಯ ಪೊಲೀಸ್ ಇಲಾಖೆ ಗೃಹ ಸಚಿವರ ಒತ್ತಡದ ಅಡಿಯಲ್ಲಿ ಕೆಲಸ ಮಾಡುತ್ತಿದೆ. ನಿನ್ನೆ ಪತ್ರಕರ್ತ ಹೇಮಂತ್​ರನ್ನ ಬಿಜೆಪಿ ಕಚೇರಿಗೆ ನುಗ್ಗಿ ಕರೆದುಕೊಂಡು ಹೋಗಿದ್ದಾರೆ. ಯಾವ ಕಾರಣಕ್ಕಾಗಿ ಬಂಧಿಸಿದ್ದಾರೆ ಎಂಬುದು ಗೊತ್ತಿಲ್ಲ. ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸಮಾಡಿದ್ದನ್ನ ಗಮನದಲ್ಲಿಟ್ಟುಕೊಂಡು ಅವರಿಗೆ ತೊಂದರೆ ಕೊಡುವ ಕೆಲಸ ರಾಜ್ಯ ಗೃಹ ಇಲಾಖೆಯ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಅರೋಪಿಸಿದರು.

ಶಾಸಕ ಸುರೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ‌ಗೃಹ ಸಚಿವರೇ ಇಲ್ಲ.‌ ಇರುವುದು ಕಾಂಗ್ರೆಸ್ ಗೃಹ ಸಚಿವರು. ಎಂ.ಬಿ.ಪಾಟೀಲರು ಹಿಂದಿನ ಸರ್ಕಾರದಲ್ಲಿ ಇದ್ದಾಗ ಏನು ಮಾಡಿದ್ರು. ಧರ್ಮ‌ ಒಡೆಯುವ ಕೆಲಸ ಹೇಗೆ ಮಾಡಿದ್ರು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಅವರು ಸೇಡಿನ ರಾಜಕೀಯ ಮಾಡಲು ಹೊರಟಿರುವುದು ನಾಚಿಕೆಗೇಡಿನ‌ ಸಂಗತಿ. ನಾವು ಇದನ್ನು ಇಲ್ಲಿಗೆ ಬಿಡುವುದಿಲ್ಲ. ಕೇಂದ್ರದವರೆಗೂ ತೆಗೆದುಕೊಂಡು ಹೋಗುತ್ತೇವೆ ಎಂದರು.

Intro:Body:

ಮಾಜಿ ಪತ್ರಕರ್ತ ಹೇಮಂತ್ ಬಂಧನ‌ ಖಂಡಿಸಿ ಬಿಜೆಪಿ ನಿಯೋಗದಿಂದ ಡಿಜಿಗೆ ದೂರು



ಬೆಂಗಳೂರು: 

ಗೃಹ ಸಚಿವ ಎಂ. ಬಿ ಪಾಟೀಲ್ ಲೆಟರ್ ಹೆಡ್ ನಕಲಿ ಮಾಡಿದ ಪ್ರಕರಣದಡಿ ಸಿಐಡಿ ಪೊಲೀಸರು ಮತ್ತೊರ್ವ ಮಾಜಿ‌ ಪತ್ರಕರ್ತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಹಿಂದೆ ಪೋಸ್ಟ್ ಕಾರ್ಡ್ ಪತ್ರಿಕೆ ಮಹೇಶ್ ವಿಕ್ರಮ್ ಹೆಗ್ಡೆ ಬಂಧಿಸಿದ್ ಸಿಐಡಿ ಪೊಲೀಸರಿಗೆ ಹೇಳಿಕೆ‌ ನೀಡಿದ ಆಧಾರದ ಮೇಲೆ ನಿನ್ನೆ ರಾತ್ರಿ ಮಡಿಕೇರಿಯಲ್ಲಿ ಬಂಧಿಸಿದ್ದಾರೆ.

ಲೆಟರ್ ಹೆಡ್ ನಕಲು ಮಾಡಲು ಹೇಮಂತ್ ಕುಮಾರ್ ತಿಳಿಸಿದ್ದಾಗಿ ಹೇಳಿದ್ದ ಮಹೇಶ್ ವಿಕ್ರಮ್ ಹೆಗ್ಡೆ‌ ಹೇಳಿಕೆ ನೀಡಿದ್ದ.‌‌ಲೆಟರ್ ಹೆಡ್ ನಕಲು ಮಾಡಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ಎಂ.ಬಿ ಪಾಟೀಲ್ ಹೆಸರಲ್ಲಿ‌‌ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ಆರೋಪದಡಿ ಹೇಮಂತ್ ಕುಮಾರ್ ನನ್ನು ಬಂಧಿಸಿದ್ದಾರೆ. ಇತ್ತೀಚಿಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಹೇಮಂತ್ ಬಂಧನ ಹಿನ್ನೆಲೆಯಲ್ಲಿ

ಬಿಜೆಪಿ ನಾಯಕರಿಂದ ರಾಜ್ಯ ಪೋಲೀಸ್ ಮಹಾ ನಿರ್ದೇಶಕರಿಗೆ ಇಂದು ದೂರು‌‌ ನೀಡಿದ್ದಾರೆ.



ಶಾಸಕರಾದ ಅರವಿಂದ್ ಲಿಂಬಾವಳಿ‌,‌ಸುರೇಶ್‌ ಕುಮಾರ್ ನೇತೃತ್ವದ ನಿಯೋಗವು ಡಿಜಿ ನೀಲಮಣಿ ಎನ್.ರಾಜು ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಲಿಂಬಾವಳಿ ರಾಜ್ಯ ಸರ್ಕಾರ ಸೇಡಿನ ರಾಜಕೀಯಕ್ಕೆ ಮುಂದಾಗಿದೆ. ರಾಜ್ಯ ಪೊಲೀಸ್ ಇಲಾಖೆ ಗೃಹ ಸಚಿವರ ಒತ್ತಡದ ಅಡಿಯಲ್ಲಿ ಕೆಲಸ ಮಾಡುತ್ತಿದೆ‌. ನಿನ್ನೆ ಪತ್ರಕರ್ತ ಹೇಮಂತ್ ಅವರನ್ನು ಬಿಜೆಪಿ ಕಚೇರಿಗೆ ನುಗ್ಗಿ ಕರೆದುಕೊಂಡು ಹೋಗಿದ್ದಾರೆ.‌ ಯಾವ ಕಾರಣಕ್ಕೆ ಬಂಧಿಸಿದ್ದಾರೋ ಇಲ್ಲವೋ ಗೊತ್ತಿಲ್ಲ.‌ ಮೊದಲು ವಿಕ್ರಂ ಹೆಗಡೆ ನಂತರ ಶೃತಿ ಬೆಳ್ಳಕ್ಕಿ ಈಗ ಹೇಮಂತ್ ಬಂಧನವಾಗಿದೆ ಖಂಡನೀಯ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಐಜಿ ಹೇಮಂತ ನಿಂಬಾಳ್ಕರ್ ಪೊಲೀಸ್ ಇಲಾಖೆಗೆ ಕಳಂಕ ತರುವಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಅವರು ರಾಜಕೀಯ ಮಾಡುವುದಾದರೆ ಮೊದಲು ಸಮವಸ್ತ್ರ ಕಳಚಿ ಬರಲಿ. ಖಾಕಿ ತೊರೆದು ಖಾದಿ ಹಾಕಿ ಬರಲಿ, ನಾವು ರಾಜಕೀಯ ಮಾಡೋಣ. ಪೊಲೀಸರ ವರ್ತನೆ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ದೂರು ನೀಡಿದ್ದೇವೆ ಎಂದರು.

ಶಾಸಕ ಸುರೇಶ್ ಕುಮಾರ್ ಮಾತನಾಡಿ ರಾಜ್ಯದಲ್ಲಿ ‌ಗೃಹ ಸಚಿವರೇ ಇಲ್ಲ.‌ ಇರುವುದು ಕಾಂಗ್ರೆಸ್ ಗೃಹ ಸಚಿವರು. ಎಂ.ಬಿ.ಪಾಟೀಲರು ಹಿಂದಿನ ಸರ್ಕಾರದಲ್ಲಿ ಇದ್ದಾಗ ಏನು ಮಾಡಿದ್ರು.. ಧರ್ಮ‌ ಒಡೆಯುವ ಕೆಲಸ ಹೇಗೆ ಮಾಡಿದ್ರು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಅವರು ಸೇಡಿನ ರಾಜಕೀಯ ಮಾಡಲು ಹೊರಟಿರುವುದು ನಾಚಿಕೆಗೇಡಿನ‌ ಸಂಗತಿ. ನಾವು ಇದನ್ನು ಇಲ್ಲಿಗೆ ಬಿಡುವುದಿಲ್ಲ.‌ಕೇಂದ್ರದ ವರೆಗೂ ತೆಗೆದುಕೊಂಡು ಹೋಗುತ್ತೇವೆ ಎಂದರುConclusion:

 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.