ETV Bharat / state

ಜನ ಒತ್ತಾಯ ಮಾಡಿದ ಕಾರಣಕ್ಕೆ ನಾನು ಆ ಹೇಳಿಕೆ ನೀಡಿದ್ದೆ, ಅಂತಿಮ‌ ತೀರ್ಮಾನ ಪಕ್ಷದ್ದು: ಬಿಎಸ್ ವೈ

author img

By

Published : Jul 23, 2022, 5:31 PM IST

ಶಿಕಾರಿಪುರದ ಜನ ನನ್ನನ್ನು ಚುನಾವಣೆ ನಿಲ್ಲುವಂತೆ ಒತ್ತಾಯಿಸಿದ್ದಕ್ಕೆ, ನಾನು ನಿಲ್ಲಲ್ಲ ನನ್ನ ಮಗ ವಿಜಯೇಂದ್ರ ನಿಲ್ಲುತ್ತಾನೆ ಎಂದು ಜನರನ್ನು ಸಮಾಧಾನಪಡಿಸಲು ಹೇಳಿದ್ದೆ. ಈ ಬಗ್ಗೆ ನಮ್ಮ ಪಕ್ಷದ ತೀರ್ಮಾನ ಅಂತಿಮ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

former-cm-yadiyurappa-statement-about-vijayendra-in-banglore
ಜನ ಒತ್ತಾಯ ಮಾಡಿದ ಕಾರಣಕ್ಕೆ ನಾನು ಆ ಹೇಳಿಕೆ ನೀಡಿದ್ದೆ, ಅಂತಿಮ‌ ತೀರ್ಮಾನ ಪಕ್ಷದ್ದು: ಬಿಎಸ್ ವೈ

ಬೆಂಗಳೂರು : ನಿನ್ನೆ ಶಿಕಾರಿಪುರ ಜನ ಒತ್ತಾಯ ಮಾಡಿದ ಕಾರಣ ನಾನು ಹಾಗೆ ಹೇಳಿದ್ದೇನೆ. ಆದರೆ, ಅಂತಿಮ ತಿರ್ಮಾನವನ್ನು ಮೋದಿ, ಅಮಿತ್ ಶಾ, ನಡ್ಡಾ ಅವರು ತೆಗೆದುಕೊಳ್ಳುತ್ತಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರು ಕಾವೇರಿ ನಿವಾಸದ ಬಳಿ ಮಾತನಾಡಿದ ಅವರು, ನಿನ್ನೆ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿದೆ.

ನಾನು ವಿಧಾನಸಭೆ ಚುನಾವಣೆಗೆ ನಿಲ್ಲಲ್ಲ. ನಿನ್ನೆ ನನಗೆ ಶಿಕಾರಿಪುರದ ಜನ ಚುನಾವಣೆ ನಿಲ್ಲಲು ಒತ್ತಾಯ ಮಾಡಿದ್ರು. ಆದರೆ ನಾನು ನಿಲ್ಲೋದಿಲ್ಲಪ್ಪಾ ವಿಜಯೇಂದ್ರ ನಿಲ್ತಾರೆ ಎಂದು ಹೇಳಿದ್ದೆ. ಆದರೆ, ಈ ಬಗ್ಗೆ ಪಕ್ಷದ ತೀರ್ಮಾನವೇ ಅಂತಿಮ. ನನ್ನ ಸಲಹೆ ಅಷ್ಟೇ ಎಂದು ಹೇಳಿದರು.

ಜನ ಒತ್ತಾಯ ಮಾಡಿದ ಕಾರಣಕ್ಕೆ ನಾನು ಆ ಹೇಳಿಕೆ ನೀಡಿದ್ದೆ, ಅಂತಿಮ‌ ತೀರ್ಮಾನ ಪಕ್ಷದ್ದು: ಬಿಎಸ್ ವೈ

ವಿಜಯೇಂದ್ರ ಎಲ್ಲೇ ನಿಂತರೂ ಗೆಲ್ಲುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ. ಹಳೆ ಮೈಸೂರು, ಶಿಕಾರಿಪುರ ಎಲ್ಲೇ ನಿಂತರೂ ಅವರು ಗೆಲ್ಲುತ್ತಾರೆ. ಆದರೆ, ಈ ಬಗ್ಗೆ ಅಂತಿಮವಾಗಿ ತೀರ್ಮಾನ ಮಾಡೋದು ಪ್ರಧಾನಿ ಮೋದಿ ಎಂದು ತಿಳಿಸಿದರು. ನನಗೆ ಪಕ್ಷದಲ್ಲಿ ಸಾಕ್ಕಷ್ಟು ಅವಕಾಶ ಸಿಕ್ಕಿದೆ. ರಾಷ್ಟ್ರ ಮಟ್ಟದಲ್ಲಿ ನನ್ನನ್ನು ಬೆಳೆಸಿದ್ದಾರೆ.

ಪುರಸಭೆ ಸದಸ್ಯನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಬಿಜೆಪಿ. ನಾಲ್ಕು ಬಾರಿ ಸಿಎಂ ಮಾಡಿದ್ದಾರೆ. ಮೋದಿ ಮೊತ್ತೊಮ್ಮೆ ಪ್ರಧಾನಿ ಆಗಬೇಕು. ಅದನ್ನು ನಾನು ನೋಡಬೇಕು. ರಾಜ್ಯಾದ್ಯಂತ ಪ್ರವಾಸ ಮಾಡಿ 140 ಸ್ಥಾನ ಗೆಲ್ಲೋದೇ ನಮ್ಮ ಗುರಿ‌‌. ನಾನು ನಾಳೆ ನಾಡಿದ್ದರಿಂದಲೇ ಕೆಲಸ ಶುರು ಮಾಡ್ತೇನೆ ಎಂದರು.

ಕುಟುಂಬ ರಾಜಕೀಯದ ಆಗೋದಿಲ್ವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೋದಿ ಹೇಳಿದ್ದಾರೆ. ಹಾಗಾಗಿ ನಾನು ಚುನಾವಣೆ ನಿಲ್ಲಲ್ಲ. ನನ್ನ ಮಗ ನಿಲ್ತಾರೆ. ಈ ಕಾರಣಕ್ಕೆ ನಾನು ಚುನಾವಣೆಯಿಂದ ಹಿಂದೆ ಸರಿದಿದ್ದೇನೆ ಎಂದು ಹೇಳಿದರು. ಪಿಎಸ್ ಐ ಹಗರಣದಲ್ಲಿ ವಿಜಯೇಂದ್ರ ಭಾಗಿ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯರದ್ದು ಮೂರ್ಖತನದ ಪರಮಾವಧಿಯ ಹೇಳಿಕೆ. ಹೇಳಿಕೆ ವಾಪಸ್ ಪಡೆಯಬೇಕು. ತಾನು ಕಳ್ಳ, ಪರರು ಕಳ್ಳ ಎಂದು ತಿರುಗೇಟು ನೀಡಿದರು.

ಓದಿ :ನನಗೆ ಶಕ್ತಿ, ತಾಕತ್ತಿದೆ ಎಂದೆನಿಸಿದರೆ ಪಕ್ಷ ಜವಾಬ್ದಾರಿ ಕೊಡುತ್ತೆ: ಬಿ.ವೈ.ವಿಜಯೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.