ETV Bharat / state

ತಾರಾ ಹೊಟೇಲ್‌ನಲ್ಲಿ ಹಲ್ಲೆ ಪ್ರಕರಣ: ಶ್ರೀಕಿ, ವಿಷ್ಣು ಭಟ್ ವಿರುದ್ಧ ಪ್ರಕರಣ ದಾಖಲು

author img

By

Published : Nov 7, 2021, 4:39 PM IST

Updated : Nov 7, 2021, 5:10 PM IST

ತಾರಾ​ ಹೋಟೆಲ್​ನಲ್ಲಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ತಂಗಿದ್ದ. ಇಲ್ಲಿ ಸ್ನೇಹಿತ ವಿಷ್ಣು ಭಟ್ ಕುಡಿದು ಹೋಟೆಲ್​ ಸಿಬ್ಬಂದಿ ಜತೆ ಜಗಳವಾಡಿಕೊಂಡಿದ್ದಾನೆ. ಅಲ್ಲದೇ, ಹಲ್ಲೆಗೂ ಯತ್ನಿಸಿದ್ದಾನೆ. ಆರೋಪಿ ಶ್ರೀಕಿಯೂ ಕೂಡ ಹಲ್ಲೆ ನಡೆಸಲು ಮುಂದಾಗಿದ್ದ. ಈ ಬಗ್ಗೆ ಹೋಟೆಲ್​ ಸಿಬ್ಬಂದಿ ಜೀವನ್​ ಭಿಮಾನಗರ ಪೊಲೀಸರಿಗೆ ದೂರು ನೀಡಿದ್ದರು.

sriki
ಶ್ರೀಕಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಬಿಟ್​ ಕಾಯಿನ್​ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಆಲಿಯಾಸ್​ ಶ್ರೀಕೃಷ್ಣ ಹಾಗೂ ವಿಷ್ಣು ಭಟ್ ಅವರನ್ನು ಹಲ್ಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದು, ಇದೀಗ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಭೀಮಾ ಜ್ಯುವೆಲರ್ಸ್​​ ಮಾಲೀಕನ ಮಗ ವಿಷ್ಣು ಭಟ್ ಎಂದು ತಿಳಿದು ಬಂದಿದೆ. ಮೆಡಿಕಲ್​ ಚೆಕಪ್​ನಲ್ಲಿ ಇಬ್ಬರೂ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಶ್ರೀಕಿ ಮತ್ತು ವಿಷ್ಣು ಭಟ್ ವಿರುದ್ದ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ‌.ಶರಣಪ್ಪ ತಿಳಿಸಿದರು.

ತಾರಾ​ ಹೋಟೆಲ್​ನಲ್ಲಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ತಂಗಿದ್ದ. ಇಲ್ಲಿ ಸ್ನೇಹಿತ ವಿಷ್ಣು ಭಟ್ ಕುಡಿದು ಹೋಟೆಲ್​ ಸಿಬ್ಬಂದಿ ಜತೆ ಜಗಳವಾಡಿಕೊಂಡಿದ್ದಾನೆ. ಅಲ್ಲದೇ, ಹಲ್ಲೆಗೂ ಯತ್ನಿಸಿದ್ದಾನೆ. ಆರೋಪಿ ಶ್ರೀಕಿಯೂ ಕೂಡ ಹಲ್ಲೆ ನಡೆಸಲು ಮುಂದಾಗಿದ್ದ. ಈ ಬಗ್ಗೆ ಹೋಟೆಲ್​ ಸಿಬ್ಬಂದಿ ಜೀವನ್​ ಭಿಮಾನಗರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಆರೋಪಿಗಳಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಸಿಸಿಬಿ ಪೊಲೀಸರು ಶ್ರೀಕಿಯನ್ನು ಡ್ರಗ್ಸ್​ ಕೇಸ್​ನಲ್ಲಿಯೂ ಬಂಧಿಸಿದ್ದರು. ವಿಚಾರಣೆ ವೇಳೆ ಆತ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದ. ವಿದೇಶಿ ಆ್ಯಪ್ ಸೇರಿದಂತೆ ಸರ್ಕಾರಿ ಆ್ಯಪ್ ಅನ್ನು ಕೂಡ ಹ್ಯಾಕ್​ ಮಾಡಿದ ಬಗ್ಗೆ ತಿಳಿಸಿದ್ದಾನೆ. ಈ ಪ್ರಕರಣ ಸಂಬಂಧ ಸಿಸಿಬಿ, ಶ್ರೀಕಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ಈತ ಅಂತಾರಾಷ್ಟ್ರೀಯ ವೆಬ್​​ಸೈಟ್​, ಪೋಕರ್​ ಗೇಮ್​ ಹಾಗೂ ಕ್ರಿಪ್ಟೋ ಕರೆನ್ಸಿಗಳಾದ ಬಿಟ್​ ಕಾಯಿನ್, ವೈಎಫ್​ಐ, ಇಥೆರಿಯಂ ಖಾತೆಗಳನ್ನು ಹ್ಯಾಕ್ ಮಾಡಿದ್ದ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಒಟ್ಟು ಶ್ರೀಕಿ ಬಳಿ ಇದ್ದ ಸುಮಾರು 9 ಕೋಟಿ ರೂಪಾಯಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ ಮಾಡಲಾಗಿತ್ತು.

ಇದನ್ನೂ ಓದಿ: 'ಬಿಟ್ ಕಾಯಿನ್' ಕಿಂಗ್‌ಪಿನ್ ಶ್ರೀಕಿ ಪೊಲೀಸ್ ವಶ, ಪ್ರಕರಣಕ್ಕೆ ತಿರುವು

Last Updated : Nov 7, 2021, 5:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.