ETV Bharat / state

ಪುನೀತ್ ಸಾಧನೆ ಪಠ್ಯದಲ್ಲಿ ಸೇರಿಸುವಂತೆ ಅಭಿಮಾನಿಗಳಿಂದ ಸಿಎಂಗೆ ಮನವಿ

author img

By

Published : Oct 29, 2022, 1:24 PM IST

ಪುನೀತ್ ರಾಜ್​ಕುಮಾರ್​ ಮೊದಲ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಅಭಿಮಾನಿಗಳು ಡಾ.ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್, ಪುನೀತ್ ರಾಜಕುಮಾರ್ ಸಮಾಧಿಗೆ ಅರ್ಪಿಸಲು ಅಭಿಮಾನಿಗಳು ರುದ್ರಾಕ್ಷಿ ಹಾರ ತಂದಿದ್ದಾರೆ.

A fan made garland of Rudrakshi
ರುದ್ರಾಕ್ಷಿಯಿಂದ ಅಭಿಮಾನಿಗಳು ತಯಾರಿಸಿದ ಹಾರ

ಬೆಂಗಳೂರು: ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಸಾಧನೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಿ ಎಂದು ಮೈಸೂರಿನ ಮುಡುಕುತೊರೆ ಗ್ರಾಮದಿಂದ ಬಂದಿರುವ ಅಭಿಮಾನಿಗಳು ಆರ್.ಟಿ.ನಗರದ ಸಿಎಂ ನಿವಾಸಕ್ಕೆ ಆಗಮಿಸಿ ಮನವಿ ಮಾಡಿದ್ದಾರೆ. ಈಗಾಗಲೇ ಸಿದ್ಧರಾಮಯ್ಯ ಅವರನ್ನು ಭೇಟಿ‌ ಮಾಡಿ, ಅವರಿಂದಲೂ ಪತ್ರ ತಂದಿದ್ದಾರೆ.

ಪುನೀತ್ ರಾಜ್​ಕುಮಾರ್​ ಮೊದಲ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಅಭಿಮಾನಿಗಳು ಡಾ.ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್, ಪುನೀತ್ ರಾಜಕುಮಾರ್ ಸಮಾಧಿಗೆ ಅರ್ಪಿಸಲು ಅಭಿಮಾನಿಗಳು ರುದ್ರಾಕ್ಷಿ ಹಾರ ತಂದಿದ್ದಾರೆ.

ರುದ್ರಾಕ್ಷಿಯಿಂದ ಅಭಿಮಾನಿಗಳು ತಯಾರಿಸಿದ ಹಾರ

ಹಾವೇರಿ ಜಿಲ್ಲೆಯ, ಶಿಗ್ಗಾಂವಿ ತಾಲೂಕಿನ ನಾರಾಯಣಪುರ ಗ್ರಾಮಸ್ಥರು ಒಟ್ಟು ಮೂರು ರುದ್ರಾಕ್ಷಿ ಹಾರ ತಂದಿದ್ದಾರೆ. ರವಿ ಬಸವಣ್ಣಪ್ಪ ಬಂಕಾಪುರ ಅವರ ನೇತೃತ್ವದಲ್ಲಿ ಹಾರ ತಂದಿದ್ದು, ಆರ್.ಟಿ.ನಗರದಲ್ಲಿ ಸಿಎಂ ಭೇಟಿ ಮಾಡಿ ಬಳಿಕ ಸಮಾಧಿಗೆ ತೆರಳಿ ಹಾರ ಅರ್ಪಿಸಲಿದ್ದಾರೆ.

ಇದನ್ನೂ ಓದಿ: ಪುನೀತ್‌ ರಾಜ್​ಕುಮಾರ್​ ಮೊದಲ ವರ್ಷದ ಪುಣ್ಯಸ್ಮರಣೆ: ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬಸ್ಥರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.