ETV Bharat / state

'ಬಿಜೆಪಿಗೆ ಕುಸ್ತಿ ಮಾಡಲು ಜನ‌ ಇಲ್ಲ, ಅದಕ್ಕಾಗಿ ರೌಡಿಶೀಟರ್​ಗಳನ್ನು ಸೇರಿಸುತ್ತಿದ್ದಾರೆ'

author img

By

Published : Dec 1, 2022, 1:04 PM IST

ಜನರ ಭಾವನೆಗಳ ಮೇಲೆ ರಾಜಕೀಯ ಮಾಡುವುದು ಬಿಜೆಪಿ ಸಿದ್ದಾಂತ. ಜನರಿಗೆ ಒಳ್ಳೆದು ಮಾಡಬೇಕು ಎಂಬುದು ಕಾಂಗ್ರೆಸ್ ಸಿದ್ದಾಂತ- ಡಿ ಕೆ ಶಿವಕುಮಾರ್

ಬಿಜೆಪಿಗೆ ಕುಸ್ತಿ ಮಾಡಲು ಜನ‌ ಇಲ್ಲ, ಅದಕ್ಕಾಗಿ ರೌಡಿಶೀಟರ್​ಗಳನ್ನು ಸೇರ್ಪಡೆಗೊಳಿಸುತ್ತಿದೆ: ಡಿಕೆ ಶಿವಕುಮಾರ್​ ಕಿಡಿ
dk-shivakumar-reaction-on-rowdy-sheeter-fighter-ravi-joins-bjp

ಬೆಂಗಳೂರು: ಕುಸ್ತಿ ಮಾಡಲು ಜನ ಬೇಕಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ರೌಡಿಶೀಟರ್​ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಟೀಕಿಸಿದರು. ನಗರದಲ್ಲಿ ಮಾತನಾಡಿದ ಅವರು, ಅವರಿಗೆ ಒಳ್ಳೆಯ ಮುಖ ಬೇಕಲ್ವಾ? ಹಾಗಾಗಿ ರೌಡಿಶೀಟರ್​ಗಳಿಗೆ ಮನ್ನಣೆ ನೀಡುತ್ತಿದ್ದಾರೆ ಎಂದು ಮೂದಲಿಸಿದ ಅವರು, ಬಿಜೆಪಿಗೆ ಯಾವ ಸಿದ್ದಾಂತವಿದೆ ಎಂದು ಪ್ರಶ್ನಿಸಿದರು.

ಭಾವನೆಗೂ ಬದುಕಿಗೂ ವ್ಯತ್ಯಾಸವಿದೆ. ಬಿಜೆಪಿಯವರು ಭಾವನೆಗಳ ಮೇಲೆ ರಾಜಕೀಯ ಮಾಡುತ್ತಾರೆ. ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಲ್ಲ. ಜನರ ಭಾವನೆಗಳ ಮೇಲೆ ರಾಜಕೀಯ ಮಾಡುವುದು ಬಿಜೆಪಿ ಸಿದ್ದಾಂತ. ಜನರಿಗೆ ಒಳ್ಳೆದು ಮಾಡಬೇಕು ಎಂಬುದು ಕಾಂಗ್ರೆಸ್ ಸಿದ್ದಾಂತ ಎಂದರು.

ಇದನ್ನೂ ಓದಿ: ಯಾವುದೇ ರೌಡಿಗಳನ್ನು ನಾವು ಪಕ್ಷಕ್ಕೆ ಸೇರಿಸಿಕೊಂಡಿಲ್ಲ: ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.