ಬೆಂಗಳೂರಿಗರೇ ಹುಷಾರ್​: ಫುಟ್​ಪಾತ್ ಬ್ಲಾಕ್ ಮಾಡಿದ್ರೆ ಸಿಆರ್​ಪಿಸಿ ಅಡಿ ಕೇಸ್

author img

By

Published : Aug 4, 2022, 6:00 PM IST

Updated : Aug 4, 2022, 6:58 PM IST

ಬೆಂಗಳೂರು
ಬೆಂಗಳೂರು ()

ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿ ವಾಹನ‌ ಪಾರ್ಕ್ ಮಾಡುತ್ತಿದ್ದವರಿಗೆ ಬೆಂಗಳೂರು ಸಂಚಾರ ಪೊಲೀಸರು ಸಿಆರ್​ಪಿಸಿ 107 ಭದ್ರತಾ ಕಾಯ್ದೆಯಡಿ ಕೇಸ್​ ದಾಖಲು ಮಾಡಿದ್ದಾರೆ.

ಬೆಂಗಳೂರು: ಇಷ್ಟು ದಿನ ರಸ್ತೆ‌ ಮೇಲೆ ಸಂಚಾರ ನಿಯಮ‌‌ ಉಲ್ಲಂಘನೆ ಮಾಡಿದ್ರೆ, ನೋ ಪಾರ್ಕಿಂಗ್​ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ಮಾತ್ರ ಟ್ರಾಫಿಕ್ ಪೊಲೀಸರು ಕೇಸ್ ಹಾಕುತ್ತಿದ್ದರು. ಆದರೆ, ಇನ್ಮುಂದೆ ಫುಟ್​ಪಾತ್​ ಅತಿಕ್ರಮಣ ಮಾಡಿದರೂ ಕೇಸ್ ಬೀಳೋದು ಖಚಿತವಾಗಿದೆ.

ಬೆಂಗಳೂರು ಸಂಚಾರ ಪೊಲೀಸರು ಸಿಆರ್​ಪಿಸಿ 107 ಭದ್ರತಾ ಕಾಯ್ದೆಯಡಿ ಕೇಸ್ ದಾಖಲು ಮಾಡ್ತಿದ್ದಾರೆ. ಎಷ್ಟೇ ಹೇಳಿದ್ರೂ ಅಂಗಡಿ ಮುಂಗಟ್ಟುಗಳ ಮುಂದೆ ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿ ವಾಹನ‌ ಪಾರ್ಕ್ ಮಾಡೋದು ಜಾಸ್ತಿಯಾಗಿತ್ತು.

ಈ ಹಿನ್ನೆಲೆ ರಾಜಾಜಿನಗರ ಸಂಚಾರ ಪೊಲೀಸರು ಇಬ್ಬರು ಅಂಗಡಿ ಮಾಲೀಕರ ಮೇಲೆ ಕೇಸ್ ದಾಖಲಿಸಿ ಉತ್ತರ ವಿಭಾಗ ಕಾನೂನು ಸುವ್ಯವಸ್ಥೆ ಡಿಸಿಪಿ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗಳಿಗೆ ಪಾದಚಾರಿ ಮಾರ್ಗ ಬ್ಲಾಕ್ ಮಾಡದಂತೆ ಎಚ್ಚರಿಕೆ‌ ನೀಡಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಓದಿ: ಆಮ್‌ ಆದ್ಮಿ ಪಕ್ಷ ಸೇರಿದ ಹಾಸ್ಯನಟ ಟೆನ್ನಿಸ್‌ ಕೃಷ್ಣ

Last Updated :Aug 4, 2022, 6:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.