ETV Bharat / state

ಕ್ಷೇತ್ರಗಳತ್ತ ಕಾಂಗ್ರೆಸ್‌ ಶಾಸಕರ ಪ್ರಯಾಣ.. ಕೆಲವೇ ಕ್ಷಣಗಳಲ್ಲಿ ಕೈ ಮುಖಂಡರ ಸಭೆ..

author img

By

Published : Jul 20, 2019, 12:03 PM IST

ಶನಿವಾರ, ಭಾನುವಾರ ಎರಡು ದಿನ ರಜೆಯಾದ ಕಾರಣ ಕಾಂಗ್ರೆಸ್​​ ಶಾಸಕರು ತಮ್ಮ ಕುಟುಂಬಸ್ಥರ ಜೊತೆ ಇರಲು ಅನುಮತಿ ಪಡೆದು ಕ್ಷೇತ್ರಗಳತ್ತ ತೆರಳುತ್ತಿದ್ದಾರೆ. ಈಗಾಗಲೇ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಜಮಖಂಡಿ ಎಂಎಲ್‌ಎ ಆನಂದ್ ನ್ಯಾಮಗೌಡ ಸೇರಿ ಹಲವರು ತವರಿಗೆ ವಾಪಸಾಗಿದ್ದಾರೆ. ಇನ್ನು ಕೆಲವೇ ಸಮಯದಲ್ಲಿ ಸಿದ್ಧರಾಮಯ್ಯ, ಡಾ. ಜಿ ಪರಮೇಶ್ವರ್, ಡಿ ಕೆ ಶಿವಕುಮಾರ್, ಆರ್‌ ವಿ ದೇಶಪಾಂಡೆ, ಈಶ್ವರ್ ಖಂಡ್ರೆ ಸೇರಿದಂತೆ ನಾಯಕರು ಸರಣಿ ಸಭೆಗಳನ್ನು ನಡೆಸಲಿದ್ದಾರೆ.

ಕಾಂಗ್ರೆಸ್​ ಮುಖಂಡರು

ಬೆಂಗಳೂರು: ಕಾಂಗ್ರೆಸ್ ಶಾಸಕರು ನಗರದ ತಾಜ್ ವಿವಾಂತ ಹೋಟೆಲ್​​ನಲ್ಲಿ ಮೊಕ್ಕಾಂ ಹೂಡಿದ್ದು, ಹತ್ತಕ್ಕೂ ಹೆಚ್ಚು ಮಂದಿ ಹೋಟೆಲ್​​ನಿಂದ ತಮ್ಮ ಕ್ಷೇತ್ರಗಳತ್ತ ಮುಖ ಮಾಡುತ್ತಿದ್ದಾರೆ.

ಶನಿವಾರ, ಭಾನುವಾರ ಎರಡು ದಿನ ರಜೆಯಾದ ಕಾರಣ ತಮ್ಮ ಕುಟುಂಬಸ್ಥರ ಜೊತೆ ಇರಲು ಅನುಮತಿ ಪಡೆದು ಕ್ಷೇತ್ರಗಳತ್ತ ತೆರಳುತ್ತಿದ್ದಾರೆ. ಈಗಾಗಲೇ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ಸೇರಿದಂತೆ ಹಲವರು ತವರಿನತ್ತ ತೆರಳಿದ್ದಾರೆ.

ಸೋಮವಾರ ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗಿಯಾಗಬೇಕು, ಇಲ್ಲ ಅಗತ್ಯ ಕ್ರಮ ಕೈಗೊಳ್ಳುವ ಎಷ್ಚರಿಕೆಯೊಂದಿಗೆ ಹೋಟೆಲ್​ನಿಂದ ತೆರಳಲು ಅನುಮತಿ ನೀಡಲಾಗಿದೆ.

ಬೆಳಗ್ಗೆ ಕೆ ಜೆ ಜಾರ್ಜ್, ದಿನೇಶ್ ಗುಂಡೂರಾವ್ ಜತೆ ಶಾಸಕರು ಉಪಹಾರ ಸೇವಿಸಿದ್ದು, ಬಳಿಕ ಜಾರ್ಜ್ ಸೇರಿದಂತೆ ಹಲವು ಶಾಸಕರು ಹೊರಬಂದರು. ಇನ್ನು ಕೆಲವೇ ಸಮಯದಲ್ಲಿ ಸಿದ್ಧರಾಮಯ್ಯ, ಡಾ. ಜಿ ಪರಮೇಶ್ವರ್, ಡಿ ಕೆ ಶಿವಕುಮಾರ್, ಆರ್‌ ವಿ ದೇಶಪಾಂಡೆ, ಈಶ್ವರ್ ಖಂಡ್ರೆ ಸೇರಿದಂತೆ ನಾಯಕರು ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಸೋಮವಾರ ನಡೆಯಲಿರುವ ಅಧಿವೇಶನದ ಕುರಿತು ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಸರ್ಕಾರದ ಮುಂದಿನ ನಡೆಗಳ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲಾಗುವುದು.

Intro:ಕ್ಷೇತ್ರಗಳತ್ತ ಕೈ ಶಾಸಕರ ಪ್ರಯಾಣ - ಕೆಲವೇ ಹೊತ್ತಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಸರಣಿ ಸಭೆ


ಬೆಂಗಳೂರು- ಕಾಂಗ್ರೆಸ್ ಶಾಸಕರು ನಗರದ ತಾಜ್ ವಿವಾಂತ ಹೋಟೇಲ್ ನಲ್ಲಿ ಮೊಕ್ಕಾಂ ಹೂಡಿದ್ದು, ಹತ್ತಕ್ಕೂ ಹೆಚ್ಚು ಮಂದಿ ಹೋಟೇಲ್ ನಿಂದ ತಮ್ಮ ಕ್ಷೇತ್ರಗಳತ್ತ ಮುಖ ಮಾಡುತ್ತಿದ್ದಾರೆ.
ಶನಿವಾರ, ಭಾನುವಾರ ಎರಡು ದಿನ ರಜೆಯಾದ ಕಾರಣ ತಮ್ಮ ಕುಟುಂಬಸ್ಥರ ಜೊತೆ ಇರಲು ಅನುಮತಿ ಪಡೆದು ಕ್ಷೇತ್ರಗಳತ್ತ ತೆರಳುತ್ತಿದ್ದಾರೆ. ಈಗಾಗಲೇ ಕುಷ್ಟಗಿ ಶಾಸಕ
ಅಮರೇಗೌಡ ಬೈಯಾಪುರ, ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ ಸೇರಿದಂತೆ ಹಲವರು ತೆರಳಿದ್ದಾರೆ.
ಸೋಮವಾರ ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗಿಯಾಗಬೇಕು, ಇಲ್ಲ ಅಗತ್ಯ ಕ್ರಮ ಕೈಗೊಳ್ಳುವ ಎಷ್ಚರಿಕೆಯೊಂದಿಗೆ ಹೋಟೇಲ್ ನಿಂದ ತೆರಳಲು ಅನುಮತಿ ನೀಡಿದ್ದಾರೆ.
ಬೆಳಗ್ಗೆಯೇ ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್ ಜೊತೆಯಲ್ಲಿ ಶಾಸಕರು ಉಪಹಾರ ಸೇವಿಸಿದರು.
ಬಳಿಕ ಜಾರ್ಜ್ ಸೇರಿದಂತೆ ಹಲವು ಶಾಸಕರು ಹೊರಬಂದರು.
ಇನ್ನು ಹನ್ನೊಂದು ಗಂಟೆಯ ವೇಳೆಗೆ ಸಿದ್ಧರಾಮಯ್ಯ, ಜಿ ಪರಮೇಶ್ವರ್, ಡಿಕೆ ಶಿವಕುಮಾರ್, ದೇಶಪಾಂಡೆ, ಈಶ್ವರ್ ಖಂಡ್ರೆ ಸೇರಿದಂತೆ ನಾಯಕರು ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಸೋಮವಾರ ನಡೆಯಲಿರುವ ಅಧಿವೇಶನದ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಸರ್ಕಾರದ ಮುಂದಿನ ನಡೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇನ್ನು ಹೋಟೇಲ್ ನಲ್ಲಿರುವ ಶಾಸಕ ಬೈರತಿ ಸುರೇಶ್ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಕಾರ್ಯಕರ್ತರು, ಹೂಗುಚ್ಚ, ದೊಡ್ಡ ಹೂವಿನ ಹಾರ ಹಾಕಿ ಹುಟ್ಟುಹಬ್ಬ ಆಚರಿಸಿದರು.
ನಾಯಕರೇನೋ ಸರಣಿ ಸಭೆಗಳನ್ನು ಇಟ್ಟುಕೊಂಡಿದ್ದಾರೆ ,ಆದ್ರೆ ಎಷ್ಟು ಮಂದಿ ಶಾಸಕರು ಉಳಿದುಕೊಂಡಿರುತ್ತಾರೆ ಎಂಬುದೇ ಕುತೂಹಲ.


ಸೌಮ್ಯಶ್ರೀ


Kn_Bng_01_taj_update_visual_7202707Body:Kn_Bng_01_taj_update_visual_7202707Conclusion:Kn_Bng_01_taj_update_visual_7202707
ETV Bharat Logo

Copyright © 2024 Ushodaya Enterprises Pvt. Ltd., All Rights Reserved.