ETV Bharat / state

ಸಿರಿಧಾನ್ಯ, ಸಾವಯವ ಮೇಳ-2024ಕ್ಕೆ ತೆರೆ: ಸಿರಿಧಾನ್ಯ ಬಿಸ್ಕೆಟ್, ಮಾಲ್ಟ್ ವೆಂಡಿಂಗ್ ಯಂತ್ರ ಬಿಡುಗಡೆ

author img

By ETV Bharat Karnataka Team

Published : Jan 7, 2024, 6:44 PM IST

Updated : Jan 7, 2024, 8:02 PM IST

ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರು ಸಿರಿಧಾನ್ಯ ಬಿಸ್ಕೆಟ್, ಮಾಲ್ಟ್ ವೆಂಡಿಂಗ್ ಯಂತ್ರವನ್ನು ಬಿಡುಗಡೆ ಮಾಡಿದರು.

ಸಿರಿಧಾನ್ಯ, ಸಾವಯವ ಮೇಳ
ಸಿರಿಧಾನ್ಯ, ಸಾವಯವ ಮೇಳ

ಬೆಂಗಳೂರು : ರಾಜ್ಯ ಕೃಷಿ ಇಲಾಖೆ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜನೆ ಮಾಡಿದ್ದ ಮೂರು ದಿನಗಳ “ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳ-2024 ಕ್ಕೆ ವಿದ್ಯುತಕ್ತವಾಗಿ ತೆರೆ ಎಳೆಯಲಾಯಿತು. ರಾಜ್ಯದ ಸಾವಯವ ಹಾಗೂ ಸಿರಿಧಾನ್ಯಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸುವ ಮುಖ್ಯ ಉದ್ದೇಶಗಳೊಂದಿಗೆ ಮೇಳವನ್ನು ಆಯೋಜನೆ ಮಾಡಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಜವಾರಿ ಸಿರಿಧಾನ್ಯದ ಬಿಸ್ಕೆಟ್, ಹಾಸನ ಮತ್ತು ಕೊಡಗು ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಆವನಿ ಸಿರಿಧಾನ್ಯದ ಬಿಸ್ಕೆಟ್​ಗಳನ್ನು ಹಾಗು ಬೆಂಗಳೂರು ಕೃಷಿ ವಿವಿ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಹೊರತಂದಿರುವ ಸಿರಿಧಾನ್ಯದ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ಲಾಸ್ಟ್ ಗ್ರೇನ್ಸ್ ರಿವೈವ್ ಮಿಲ್ಲೆಟ್ಸ್ ಕೃತಿಯನ್ನು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಬಿಡುಗಡೆ ಮಾಡಿದರು.

ಸಿರಿಧಾನ್ಯ, ಸಾವಯವ ಮೇಳ
ಸಿರಿಧಾನ್ಯ, ಸಾವಯವ ಮೇಳ

ರೆಟ್ರೋಶಿಪ್ ಸಂಸ್ಥೆಯ ಸಂಸ್ಕರಣಾ ಘಟಕದ ಮಾಲ್ಟ್ ವೆಂಡಿಂಗ್ ಮಷಿನ್ ಬಿಡುಗಡೆ ಮಾಡಲಾಯಿತು. ಇದು ಏಳು ವಿವಿಧ ಮಾದರಿಯ ಪಾನೀಯಗಳು ಲಭ್ಯವಾಗಲಿವೆ. ಇದೇ ವೇಳೆ ಅತ್ಯುತ್ತಮ ಪ್ರದರ್ಶನ ಮಳಿಗೆಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಈ ಮೇಳದಲ್ಲಿ 310 ಮಳಿಗೆ ತೆರೆದಿದ್ದು, 100 ಮಳಿಗೆ ಉಚಿತವಾಗಿ ಸಾವಯವ ಕೃಷಿಕರಿಗೆ, ಉದ್ಯಮಿಗಳಿಗೆ ನೀಡಲಾಗಿದೆ. 190 ಮಳಿಗೆ ಮಾರಾಟದಾರರಿಗೆ ಹಾಗು 20 ಮಳಿಗೆ ಆಹಾರ ಸಂಸ್ಕರಣ ವರ್ತಕರಿಗೆ ನೀಡಲಾಗಿದೆ.
ಅಂತಾರಾಷ್ಟ್ರೀಯ ಮೇಳದಲ್ಲಿ ಕೀನ್ಯ, ಕುವೈತ್ ಯುಎಇ, ಯೂರೋಪಿಯನ್ ದೇಶಗಳು ಸೇರಿದಂತೆ ಹಲವು ದೇಶ ಭಾಗಿಯಾಗಿದ್ದು, 51 ವಿಷಯ ತಜ್ಞರು 225 ಪ್ರತಿನಿಧಿಗಳು ಭಾಗಿಯಾಗಿದ್ದರು. ಉತ್ತರ ಪ್ರದೇಶ, ಅಸ್ಸೋಂ, ಜಾರ್ಖಂಡ್ ಮೇಘಾಲಯ, ಮಣಿಪುರ, ಕೇರಳ, ತಮಿಳುನಾಡು ಸೇರಿ 16 ರಾಜ್ಯ ಭಾಗಿಯಾಗಿದ್ದವು ಎಂದು ಮಾಹಿತಿ ನೀಡಿದರು.

ನಮ್ಮ ರಾಜ್ಯದಲ್ಲಿ 60 ಸಾವಿರ ರೈತರು ಸಾವಯವ ಕೃಷಿ ಮಾಡುತ್ತಿದ್ದು, ಅವರನ್ನು ಸಂಸ್ಕರಣೆಗಳತ್ತ ಮುಖ ಮಾಡುವಂತೆ ಮಾಡಬೇಕಿದೆ. ಸಿರಿಧಾನ್ಯಕ್ಕಿಂತ ಅದರ ಆಹಾರ ಹತ್ತುಪಟ್ಟು ಹೆಚ್ಚಿದೆ. ಹಾಗಾಗಿ ಸಂಸ್ಕರಣೆಯತ್ತ ತಿರುಗಿಸಬೇಕಿದ್ದು, ಕೃಷಿ ಇಲಾಖೆ ಕಾರ್ಯೋನ್ಮುಖವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯಕ್ಕೆ ಕೇಂದ್ರ ಕೃಷಿ ಇಲಾಖೆಯಿಂದ ಅಗತ್ಯ ಸಹಕಾರ ನೀಡಬೇಕು ಎಂದು ಶಾಲಿನಿ ಮನವಿ ಮಾಡಿದರು.

ಇದನ್ನೂ ಓದಿ : ಸಿರಿಧಾನ್ಯ, ಸಾವಯವ ಮೇಳ: ಬಾಳೆ ನಾರಿನಿಂದ ತಯಾರಾಯ್ತು ವ್ಯಾನಿಟಿ ಬ್ಯಾಗ್, ಟೇಬಲ್ ಮ್ಯಾಟ್, ಪರ್ಸ್

Last Updated :Jan 7, 2024, 8:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.