ETV Bharat / state

5 ವರ್ಷ ಹಳೆಯ ಮೇಲ್ಸೇತುವೆ ಉಬ್ಬುವಿಕೆ: ಐಐಎಸ್‌ಸಿಯಿಂದ ವರದಿ ಪಾಲಿಕೆ ನಿರ್ಧಾರ

author img

By

Published : Apr 12, 2023, 7:44 PM IST

2018ರಲ್ಲಿ ವೆಸ್ಟ್​ ಆಫ್ ಕಾರ್ಡ್ ರಸ್ತೆಯಲ್ಲಿ ನಿರ್ಮಾಣವಾಗಿದ್ದ ಮೇಲ್ಸೇತುವೆಯಲ್ಲಿ ರಸ್ತೆ ಮಧ್ಯೆ ಉಬ್ಬು ಕಾಣಿಸಿಕೊಂಡಿದೆ. ಐಐಎಸ್‌ಸಿಯಿಂದ ವರದಿ ಪಡೆಯಲು ಬಿಬಿಎಂಪಿ ನಿರ್ಧರಿಸಿದೆ.

bbmp-has-sought-a-comprehensive-report-from-iisc
5 ವರ್ಷ ಹಳೆಯ ಮೇಲ್ಸೇತುವೆಯಲ್ಲಿ ಉಬ್ಬುವಿಕೆ: ಐಐಎಸ್‌ಸಿಯಿಂದ ಸಮಗ್ರ ವರದಿ ಪಡೆಯಲು ಮುಂದಾದ ಪಾಲಿಕೆ

ಬೆಂಗಳೂರು: 5 ವರ್ಷದ ಹಿಂದೆ ವೆಸ್ಟ್​​ ಆಫ್ ಕಾರ್ಡ್ ರಸ್ತೆಯಲ್ಲಿ ಉದ್ಘಾಟನೆಯಾಗಿದ್ದ ಮೇಲ್ಸೇತುವೆಯಲ್ಲಿ ಉಬ್ಬುವಿಕೆ ಕಾಣಿಸಿಕೊಂಡಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆ ಎದ್ದಿದೆ. ಆರೋಪ ಕೇಳಿಬರುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಐಐಎಸ್‌ಸಿಯಿಂದ ಸಮಗ್ರ ವರದಿಗೆ ಪಡೆಯಲು ಮುಂದಾಗಿದ್ದಾರೆ. ಈ ಹಿಂದೆ ಇದೇ ವಿಷಯವಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ವರದಿ ಪಡೆದಿದ್ದರೂ, ಮತ್ತೊಮ್ಮೆ ಐಐಎಸ್‌ಸಿ (ಭಾರತೀಯ ವಿಜ್ಞಾನ ಸಂಸ್ಥೆ)ಯಿಂದ ವರದಿ ಪಡೆಯಲು ನಿರ್ಧರಿಸಲಾಗಿದೆ.

ಸಾವಿರಾರು ಜನರು ದಿನನಿತ್ಯ ಓಡಾಡುವ ನಗರದ ವೆಸ್‌ಟ್‌ ಆಫ್ ಕಾರ್ಡ್ ರಸ್ತೆಯ ಮಂಜುನಾಥ ನಗರ ಮೇಲ್ಸೇತುವೆಯ ಕಾಮಗಾರಿ ಮುಗಿದು ಸಾರ್ವಜನಿಕರಿಗೆ ಮುಕ್ತವಾಗಿ ಕೇವಲ 5 ವರ್ಷಗಳಷ್ಟೇ ಆಗಿದೆ. ಈಗಾಗಲೇ ಮೇಲ್ಸೇತುವೆಯ ಆರ್.ಇ ಪ್ಯಾನಲ್‌ಗಳಲ್ಲಿ ಉಬ್ಬುಗಳು ಕಂಡುಬಂದಿದ್ದು, ತಾಂತ್ರಿಕ ವರದಿ ಅನ್ವಯ ರಸ್ತೆ ಮಧ್ಯೆ ಉಬ್ಬು ತಡೆಯುವ ಸಲುವಾಗಿ 52 ಆರ್‌.ಇ ಪ್ಯಾನೆಲ್‌ಗಳಿಂದ ನೈಲಿಂಗ್ ಅಳವಡಿಸಲಾಗಿದೆ. ಇದರಿಂದಾಗಿ ಮೇಲ್ಸೇತುವೆಯಲ್ಲಿ ಬಿರುಕುಗಳು ಕಂಡುಬಂದಿವೆ.

ವರದಿ ಕೇಳಿದ ಬಿಬಿಎಂಪಿ: ಈ ಹಿಂದೆ ಮೇಲ್ಸೇತುವೆ ಕುರಿತು ಬೆಂಗಳೂರು ವಿಶ್ವವಿದ್ಯಾನಿಲಯದ ತಜ್ಞರು ವರದಿ ನೀಡಿದ್ದರು. ಅದಾದ ಬಳಿಕವೂ ಕೆಲವು ಆರೋಪಗಳು ಬಂದ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ (ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ) ಮೇಲ್ಸೇತುವೆ ಸುರಕ್ಷತಾ ಆಡಿಟ್ ಮಾಡಿ ವರದಿ ನೀಡುವಂತೆ ಐಐಎಸ್‌ಸಿಯವರಿಂದ ಮತ್ತೊಂದು ಅಭಿಪ್ರಾಯವನ್ನು ಪಡೆಯಲು ಪತ್ರ ಬರೆದಿದೆ. ಅವರು ನೀಡುವ ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ತಿಳಿಸಿದೆ.

ಈ ವರದಿಯಲ್ಲಿ, ಮೇಲ್ಸೇತುವೆಯ ಆರ್.ಇ ಪ್ಯಾನಲ್‌ಗಳು ಸ್ವಲ್ಪ ಉಬ್ಬಿದಂತೆ ಕಂಡು ಬಂದಿರುವ ಬಗ್ಗೆ ಹೇಳಿದ್ದರು. ಹೀಗಾಗಿ ಪ್ಯಾನಲ್‌ಗಳು ಇನ್ನಷ್ಟು ಆಗುವ ಬಗ್ಗೆ ಪರಿಶೀಲಿಸಿ ಎಡಭಾಗದ ಆರ್.ಇ ರಸ್ತೆ ಮಧ್ಯೆ ಉಬ್ಬು ಪ್ಯಾನಲ್‌ಗಳ ಪಕ್ಕದಲ್ಲಿ 10 ಮೀಟರ್‌ಗಳ ಅಂತರದಲ್ಲಿ 12 ಅಡಿಯ ಕಬ್ಬಿಣದ ಸರಳುಗಳನ್ನು ಅಳವಡಿಸಲಾಗಿತ್ತು. ಹೀಗಿದ್ದರೂ ಮತ್ತೆ ಸಮಸ್ಯೆಯಾಗಿದ್ದು, ಜನರ ಪ್ರಾಣಕ್ಕೆ ಸಂಚಕಾರ ತರಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ಪ್ರಚಾರಕ್ಕೆ ಮಕ್ಕಳನ್ನು ಬಳಸದಂತೆ ನಿರ್ಬಂಧ: ಕರ್ನಾಟಕ ವಿಧಾನಸಭಾ ಚುನಾವಣೆ 2023 ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬಿಬಿಎಂಪಿ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರ ಕಾರ್ಯದಲ್ಲಿ ಯಾವುದೇ ರೀತಿಯಲ್ಲೂ ಮಕ್ಕಳನ್ನು ಬಳಸಿಕೊಳ್ಳಬಾರದು ಎಂದು ಬೆಂಗಳೂರು ನಗರ ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಎ.ದಯಾನಂದ ತಿಳಿಸಿದ್ದಾರೆ. ಪಕ್ಷಗಳ ಮೆರವಣಿಗೆ, ಸಾರ್ವಜನಿಕ ಭಾಷಣ, ಮನೆ ಮನೆಗೆ ಭೇಟಿ ನೀಡುವುದು, ಪಕ್ಷದ ಚಿಹ್ನೆ ಇರುವ ಬುಕ್ ಮತ್ತು ಬಟ್ಟೆಗಳನ್ನು ಹಂಚುವುದು, ಕರಪತ್ರಗಳನ್ನು ಹಂಚುವುದು ಇನ್ನು ಮುಂತಾದ ಚಟುವಟಿಕೆಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಂಡಲ್ಲಿ ಕಾಯ್ದೆ ಅನ್ವಯ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ವಿಧಾನಸಭಾ ಚುನಾವಣೆ: ನಾಳೆಯಿಂದ ನಾಮಪತ್ರ ಸಲ್ಲಿಕೆ ಶುರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.