ETV Bharat / state

ಕಾನೂನು ಬಾಹಿರವಾಗಿ ಪ್ಲಾಸ್ಟಿಕ್ ತಯಾರಿಸುವ ಕಾರ್ಖಾನೆಗಳ ಪರವಾನಗಿ ರದ್ದು: ಬಿಬಿಎಂಪಿ

author img

By

Published : Aug 26, 2022, 6:16 PM IST

ಒಂದು ಕಾರ್ಖಾನೆಯಲ್ಲಿ ಅಥವಾ ಅಂಗಡಿಯಲ್ಲಿ ಕೇವಲ ಪ್ಲಾಸ್ಟಿಕ್ ಸಂಬಂಧಿತ ವಸ್ತುಗಳಿದ್ದರೆ ನಾವು ಗ್ರೇಡ್​ ಲೈಸೆನ್ಸ್ ಮೂಲಕ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು: ಕಾನೂನು ಬಾಹಿರವಾಗಿ ಪ್ಲಾಸ್ಟಿಕ್ ತಯಾರಿಸುವ ಕಾರ್ಖಾನೆಗಳ ಟ್ರೇಡ್ ಪರವಾನಗಿ ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾವು ಹಲವು ಮಳಿಗೆಗಳ ಮೇಲೆ ರೈಡ್​ ಮಾಡಿ, ಫೈನ್ ಹಾಕಿದ್ದೇವೆ. ಈಗ ಗ್ರೇಡ್​ ಲೈಸೆನ್ಸ್​ ಮಾಡಿ ಕ್ರಮ ಕೈಗೊಳ್ಳಬೇಕು ಎಂದುಕೊಂಡಿದ್ದೇವೆ. ನಂತರ ಒಂದು ಕಾರ್ಖಾನೆಯಲ್ಲಿ ಅಥವಾ ಅಂಗಡಿಯಲ್ಲಿ ಕೇವಲ ಪ್ಲಾಸ್ಟಿಕ್ ಸಂಬಂಧಿತ ವಸ್ತುಗಳಿದ್ದರೆ ಅಲ್ಲಿಗೆ ನಾವು ಗ್ರೇಡ್​ ಲೈಸೆನ್ಸ್ ಮೂಲಕ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಸದ್ಯದಲ್ಲೇ ಕ್ರಮ: ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪ್ಲಾಸ್ಟಿಕ್ ಜಪ್ತಿ ಮಾಡಿ ನಂತರ ಆ ಅಂಗಡಿಯನ್ನು ಕ್ಲೋಸ್​ ಮಾಡುತ್ತೇವೆ. ಈ ವಿಚಾರವನ್ನು ಅಧಿಕಾರಿಗಳಿಗೂ ತಿಳಿಸಲಾಗಿದೆ. ಇದರ ಆಧಾರದ ಮೇಲೆ ಪ್ರತಿ ಝೋನಲ್ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಇಲ್ಲದಿದ್ದರೆ ಅಂಗಡಿಗಳ ಮೇಲೆ ನಾವು ರೈಡ್​ ಮಾಡುವುದು, ಅವರು ಫೈನ್ ಕಟ್ಟಿ ನಾವು ಪುನಃ ಓಪನ್ ಮಾಡುವುದು ಆಗುತ್ತದೆ. ಹೀಗಾಗಿ, ನಾವು ಸದ್ಯದಲ್ಲೇ ಕ್ರಮಕೈಗೊಳ್ಳಲಿದ್ದೇವೆ ಎಂದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಾತನಾಡಿದರು

ಗಣೇಶ ವಿಗ್ರಹ ಪ್ರತಿಷ್ಟಾಪನೆ ವಿಚಾರ: ಈ ಬಾರಿಯ ಗಣೇಶ ಉತ್ಸವದಲ್ಲಿ ಸರಿಯಾದ ರೀತಿಯಲ್ಲಿ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಯಾಗಬೇಕು ಹಾಗೂ ನಿಮಜ್ಜನವಾಗಬೇಕು ಎಂಬುದು ಪ್ರಮುಖ ವಿಚಾರವಾಗಿದೆ. ಈಗಾಗಲೇ ನಾವು ಯಾವುದರ ಅರ್ಜಿಯನ್ನು ಪಡೆಯಬೇಕು, ಯಾವುದರದ್ದು ಮುಚ್ಚಳಿಕೆ ಪಡೆಯಬೇಕು ಎಂಬುದರ ಕುರಿತು ಅರ್ಜಿ ತಯಾರಿಸಿ ಹಂಚಿಬಿಟ್ಟಿದ್ದೇವೆ. ಈ ಹಿಂದೆ 63 ಸಬ್​ಡಿವಿಷನ್​ಗಳಲ್ಲಿ ಯಾವ ಯಾವ ಅಧಿಕಾರಿಗಳಿರುತ್ತಿದ್ದರು ಗೊತ್ತಾಗುತ್ತಿರಲಿಲ್ಲ. ಈಗ ಎಲ್ಲಾ ಸಬ್ ​ಡಿವಿಷನ್​ಗಳಲ್ಲಿ ಎಇಇ ನೋಡಲ್ ಅಧಿಕಾರಿಗಳಾಗಿ ಮೆಸ್ಕಾಂ, ಪೊಲೀಸ್​ ಹಾಗೂ ಅಗ್ನಿಶಾಮಕ ಅಧಿಕಾರಿಗಳ ನೇಮಕ ಕೂಡಾ ಮಾಡಿ ಅವರಿಗೆ ಫಾರ್ಮಾಟ್​ಗಳನ್ನು ಹಂಚಿಕೆ ಮಾಡಿದ್ದೇವೆ ಎಂದು ಅವರು ಹೇಳಿದರು.

ಗುಂಡಿ ಮುಚ್ಚಲು 25ರಿಂದ 30 ಕೋಟಿ ರೂ ಮೀಸಲು: ರಸ್ತೆ ಗುಂಡಿ ಮುಚ್ಚುವ ಸಂಬಂಧ ಬಿಬಿಎಂಪಿ ವಾರ್ಷಿಕವಾಗಿ 25ರಿಂದ 30 ಕೋಟಿ ರೂಪಾಯಿ ಮೀಸಲಿಟ್ಟಿದೆ. ಅದರಂತೆ ತ್ವರಿತವಾಗಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದ್ದು, ಮಳೆಗಾಲ ಇಲ್ಲದಿದ್ದರೆ ಈ ವಾರದೊಳಗೆ ಬಹುತೇಕ ಗುಂಡಿಗಳನ್ನು ಮುಚ್ಚಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.

ಇದನ್ನೂ ಓದಿ: ಗಣೇಶ ಪ್ರತಿಷ್ಠಾಪನೆ: ತ್ವರಿತ ಅನುಮತಿಗೆ ಬಿಬಿಎಂಪಿ ಆಯುಕ್ತರಿಂದ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.