ETV Bharat / state

5 ಲಕ್ಷ ಲಂಚ ಪಡೆಯುವಾಗ ಎಸಿಬಿ ದಾಳಿ: ಡಿಸಿ ಕಚೇರಿಯ ಡೆಪ್ಯೂಟಿ ತಹಶೀಲ್ದಾರ್, ಸಹಾಯಕ ಸಿಬ್ಬಂದಿ ಲಾಕ್!

author img

By

Published : May 21, 2022, 7:08 PM IST

Updated : May 21, 2022, 7:22 PM IST

5 ಲಕ್ಷ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಧಿಕಾರಿಗಳ ಟ್ರ್ಯಾಪ್​ನಿಂದ ಜಿಲ್ಲಾಧಿಕಾರಿ ಕಚೇರಿಯ ಡೆಪ್ಯೂಟಿ ತಹಶೀಲ್ದಾರ್ ಮತ್ತು ಸಹಾಯಕ ಸಿಬ್ಬಂದಿ ಲಾಕ್ ಆಗಿದ್ದು ವಿಚಾರಣೆ ನಡೆಸಿದ್ದಾರೆ.

ACB Trap On DC Office
ACB Trap On DC Office

ಬೆಂಗಳೂರು: ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಂಚ ಪಡೆಯುವಾಗ ಡೆಪ್ಯೂಟಿ ತಹಶೀಲ್ದಾರ್ ಮಹೇಶ್ ಮತ್ತು ಡಿಸಿ ಸಹಾಯಕ ಚಂದ್ರಶೇಖರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. 5 ಲಕ್ಷ ಲಂಚ ಪಡೆಯುವಾಗ ಎಸಿಬಿ ಖೆಡ್ಡಾಗೆ ಬಿದ್ದಿದ್ದು, ಅಧಿಕಾರಿಗಳು ಸದ್ಯ ಚಂದ್ರಶೇಖರ್ ಎಂಬಾತನನ್ನು ವಿಚಾರಣೆ ನಡೆಸುತ್ತಿದ್ದಾರೆ.

ಮಹೇಶ್ ಅವರ ಬಳಿ ಹಣ ಇದ್ದಾಗ ಎಸಿಬಿ ಡಿವೈಎಸ್ಪಿ ರವಿಶಂಕರ್ ನೇತೃತ್ವದ ತಂಡ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಆಜಂ ಪಾಷಾ ಎಂಬಾತನಿಗೆ ಜಮೀನಿನ ವ್ಯಾಜ್ಯ ಎಸಿ ಕೋರ್ಟ್​ನಲ್ಲಿ ತೀರ್ಮಾನ ಅಗಿ ಡಿಸಿ ಕೋರ್ಟ್​ಗೆ ಹೋಗಿತ್ತು. ಈ ಫೈಲ್ ಇತ್ಯರ್ಥಗೊಳಿಸಲು 15 ಲಕ್ಷ ಕೇಳಿ 5 ಲಕ್ಷಕ್ಕೆ ಒಪ್ಪಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ದೂರುದಾರ ಎಸಿಬಿಗೆ ದೂರು ನೀಡಿದ್ದರು. 5 ಲಕ್ಷ ಹಣ ಪಡೆದುಕೊಳ್ಳುವಾಗ ಎಸಿಬಿ ಮಾಡಿದ ಟ್ರ್ಯಾಪ್​ನಲ್ಲಿ ಭ್ರಷ್ಟರು ಲಾಕ್ ಆಗಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.

ಡಿಸಿ ಮಂಜುನಾಥ್ ಮೇಲೂ ಆರೋಪ: ಡಿಸಿ ಮಂಜುನಾಥ್ ಮೇಲೂ ದೂರುದಾರ ಆರೋಪಿಸಿದ್ದು, ಈ ಹಿನ್ನೆಲೆ ಸದ್ಯ ಮಹೇಶ್ ಹಾಗೂ ಚಂದ್ರು ವಿಚಾರಣೆ‌ ನಡೆಸಿದ ಬಳಿಕ ಪ್ರಕರಣದಲ್ಲಿ ಡಿಸಿ ಅವರ ಪಾತ್ರ ಕಂಡು ಬಂದರೆ, ಅವರ ಮೇಲೂ ಕ್ರಮ ಕೊಳಗೊಳ್ಳುವುದಾಗಿ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ:ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕದಲ್ಲೂ ಅಕ್ರಮ ನಡೆದಿದೆಯೇ!?

Last Updated : May 21, 2022, 7:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.