ದೊಡ್ಡಬಳ್ಳಾಪುರ: ಜೂನ್ನಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲ್ಲಿದ್ದು, ಜೆಡಿಎಸ್ ಪಕ್ಷದ ಅಭ್ಯರ್ಥಿ ಎ.ಪಿ.ರಂಗನಾಥ್ ಬಿಜೆಪಿ ಅಭ್ಯರ್ಥಿಗೆ ನೇರ ಸವಾಲ್ ಹಾಕುವ ಮೂಲಕ ಚುನಾವಣೆ ರಂಗೇರಿಸಿದ್ದಾರೆ.
ಜೆಡಿಎಸ್ ಬಿಟ್ಟು ಬಿಜೆಪಿ ಸೇರಿರುವ ಪುಟ್ಟಣ್ಣ ವಿರುದ್ಧ ಅವರು ವಾಗ್ದಾಳಿ ನಡೆಸಿದರು. ಜೂನ್ನಲ್ಲಿ ನಡೆಯುವ ಚುನಾವಣೆಯ ರಿಸಲ್ಟ್ ಬಂದಾಗ ಪುಟ್ಟಣ್ಣ ಅವರಿಗೆ ವರ್ಚಸ್ಸು, ಜೆಡಿಎಸ್ ಪಕ್ಷ, ಕುಮಾರಸ್ವಾಮಿ ಅಂದ್ರೆ ಏನೆಂದು ಅರ್ಥವಾಗುತ್ತದೆ. 2002ರಲ್ಲಿ ಯಾವ ಸ್ಥಿತಿಯಲ್ಲಿ ಇದ್ದರೋ ಆ ಸ್ಥಿತಿಗೆ ಹೋಗಲಿದ್ದಾರೆ. ಕುಮಾರಸ್ವಾಮಿಯವರಿಂದ ಎಲ್ಲಾ ಪಡೆದು ಜೆಡಿಎಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ ಎಂದು ದೂರಿದರು.
18 ವರ್ಷಗಳಲ್ಲಿ ಪಕ್ಷಕ್ಕೆ ಪುಟ್ಟಣ್ಣ ಕೊಡುಗೆ ಏನು, ಉಂಡ ಮನೆಗೆ ಕನ್ನ ಹಾಕಿದ್ದಾರೆ. ಕುಮಾರಸ್ವಾಮಿ ಪಕ್ಷ ಕಟ್ಟುವಾಗ ಅವರ ಜೊತೆಯಲ್ಲಿ ಇದ್ದವರು. ಕುಮಾರಸ್ವಾಮಿಯವರ ಬಳಿ ಕಾರ್ಯಕರ್ತರನ್ನ ಬಿಡದಂತೆ ನೋಡಿಕೊಂಡು ತಮ್ಮ ಕೆಲಸ ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷ ಇಲ್ಲದಿದ್ದರೆ ಪುಟ್ಟಣ್ಣ ಶೂನ್ಯ. ನೈತಿಕತೆ ಇದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.