ಪತ್ನಿಯ ಶೀಲ‌ದ ಮೇಲೆ ಅಪನಂಬಿಕೆ: ಕತ್ತು ಹಿಸುಕಿ ಕೊಂದ ಪಾಪಿ ಪತಿ

author img

By

Published : Jan 23, 2022, 1:32 AM IST

ಕತ್ತು ಹಿಸುಕಿ ಕೊಂದ ಪಾಪಿ ಪತಿ

ಮನೆಯ ಕೂಗಳತೆ ದೂರದಲ್ಲಿ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದ ಭಾರತಿಯ ನಡತೆಯ ಮೇಲೆ ಈತನಿಗೆ ಅನುಮಾನವಿತ್ತಂತೆ. ಈ ಕಾರಣಕ್ಕೆ ಗಲಾಟೆ ವೇಳೆ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ.

ಆನೇಕಲ್: ಪತ್ನಿಯ ಶೀಲ ಶಂಕಿಸಿ ಪತಿಯೇ ಕತ್ತು ಹಿಸುಕಿ ಕೊಲೆಗೈದ ಘಟನೆ ಬನ್ನೇರುಘಟ್ಟ ಸಮೀಪದ ಕರಿಯಪ್ಪನಹಳ್ಳಿಯಲ್ಲಿ ನಡೆದಿದೆ.

ಭಾರತಿ(30) ಕೊಲೆಯಾದವರು.‌ ಪತಿ ರಘು ಕೊಲೆ ಮಾಡಿದ ಆರೋಪಿ. ಮಂಡ್ಯ ಮೂಲದ ಆಟೋ ರಘು ನಾಗಮಂಗಲ ಮೂಲದ‌ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಭಾರತಿಯನ್ನು ಪ್ರೀತಿಸಿ‌ ಮದುವೆಯಾಗಿದ್ದ. ಹಾಗೆ ಕರಿಯಪ್ಪನಹಳ್ಳಿಯಲ್ಲಿ ಮನೆ ಕಟ್ಟಿಕೊಂಡು ಇವರು ವಾಸವಿದ್ದರು.

ಮನೆಯ ಕೂಗಳತೆ ದೂರದಲ್ಲಿ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದ ಭಾರತಿಯ ನಡತೆಯ ಮೇಲೆ ಈತನಿಗೆ ಅನುಮಾನವಿತ್ತಂತೆ. ಪ್ರತಿ ರಾತ್ರಿ ಕುಡಿದು ಇದೇ ಕಾರಣಕ್ಕೆ‌ ಜಗಳ ತೆಗೆಯುತ್ತಿದ್ದ. ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಭಾರತಿ ಕುತ್ತಿಗೆಗೆ ಕೈ ಹಾಕಿದ ರಘು, ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.