ETV Bharat / state

ಕೋಮುವಾದಿಗಳ ಪ್ರೇರಣೆಯಿಂದ ಮಹಿಳೆ ಹಣ ಎಸೆದಿದ್ದಾರೆ: ಮಾಜಿ ಸಚಿವ ಯುಟಿ ಖಾದರ್​

author img

By

Published : Jul 16, 2022, 4:10 PM IST

ಕೆರೂರು ಪಟ್ಟಣದಲ್ಲಿ ಉಂಟಾಗಿರುವ ಘಟನೆಯನ್ನು ಆಡಳಿತಾರೂಢ ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಯುಟಿ ಖಾದರ್​ ಒತ್ತಾಯಿಸಿದರು.

Khader reaction about Siddaramotsava
Khader reaction about Siddaramotsava

ಬಾಗಲಕೋಟೆ: ನಗರದಲ್ಲಿ ನಿನ್ನೆ ನಡೆದ ಘಟನೆಯಿಂದ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಯಾವುದೇ ಕುಂದು ಉಂಟಾಗೋದಿಲ್ಲ. ಸದನದ ಒಳಗೆ ಮತ್ತು ಹೊರಗೆ ಈ ರೀತಿಯಲ್ಲಿ ಯಾರಿಗಾದರೂ ತೊಂದರೆಯಾದಲ್ಲಿ ಅಥವಾ ಶೋಷಣೆಯಾದಲ್ಲಿ ಕಾಂಗ್ರೆಸ್ ಪಕ್ಷದಿಂದ ಮೊದಲು ಧ್ವನಿ ಎತ್ತುವವರೇ ಸಿದ್ದರಾಮಯ್ಯನವರು ಎಂದು ಮಾಜಿ ಸಚಿವ ಯುಟಿ ಖಾದರ್​​ ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಆಗಿದ್ದ ದುರ್ನಾತದ ಬಗ್ಗೆ ದಾಖಲೆ ನೀಡಬಲ್ಲೆ: ಆರಗ ಜ್ಞಾನೇಂದ್ರ

ನಗರಕ್ಕೆ ಭೇಟಿ ‌ನೀಡಿದ ವೇಳೆ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ನ್ಯಾಯ ಕೊಡಿಸಿ ಅಂತ ಕೇಳಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯೂ ಅಲ್ಲ. ನಮ್ಮಿಂದ ಹೋರಾಟ ಮಾತ್ರ ಸಾಧ್ಯ. ಸಿದ್ದರಾಮಯ್ಯನವರು ನೊಂದವರ ಬಗ್ಗೆ ಅನುಕಂಪ ತೋರಿಸಿ ವೈಯಕ್ತಿಕ ಸಹಾಯ ಮಾಡಲು ಮುಂದಾಗಿದ್ದರು. ಆ ಮಹಿಳೆ ಮೊದಲು ಬೇಡ ಎಂದು ನಿರಾಕರಿಸಿ ನಂತರ ಮನಬದಲಿಸಿ ಹಣ ಸ್ವೀಕರಿಸಿದ್ದಾರೆ. ಆ ಮಹಿಳೆ ಕೋಮುವಾದಿಗಳ ಪ್ರೇರಣೆಯಿಂದಾಗಿ ಮತ್ತು ಬೇರೆಯವರ ಕುಮ್ಮಕ್ಕಿನಿಂದ ಈ ರೀತಿ ಮಾಡಿದ್ದಾರೆ. ಹೀಗೆ ಮಾಡೋದ್ರಿಂದ ಕೋಮುವಾದಿಗಳಿಗೆ ಮತ್ತಷ್ಟು ಪ್ರೇರಣೆ ನೀಡಿದಂತಾಗುತ್ತೆ ಎಂದು ಪರೋಕ್ಷವಗಾಗಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಮಾಜಿ ಸಚಿವ ಯುಟಿ ಖಾದರ್​

ಈ ಘಟನೆಯಿಂದ ಕೆಲವರು ಈಗ ಸಂತೋಷವಾಗಿರಬಹುದು. ಆದರೆ, ಮುಂದೊಂದು ದಿನ ಅವರು ಸಹ ಪಶ್ಚಾತ್ತಾಪಡಲಿದ್ದಾರೆ. ಕೆರೂರು ಪಟ್ಟಣದಲ್ಲಿ ಉಂಟಾಗಿರುವ ಘಟನೆಯನ್ನು ಸರ್ಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಯುಟಿ ಖಾದರ್​ ಒತ್ತಾಯಿಸಿದರು.

ಇದನ್ನೂ ಓದಿ: ಬೈರತಿ ಹೆಗಲಿಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ: ಕಾಫಿನಾಡಿಗೆ ಭೇಟಿ ನೀಡಿದ ಸಚಿವರು

ಸಿದ್ದರಾಮಯ್ಯನವರ ಅಮೃತಮೊಹತ್ಸವ ವಿಚಾರವಾಗಿ ಮಾತನಾಡಿ, ಪಕ್ಷದಲ್ಲಿರುವ ಎಲ್ಲ ಕಾರ್ಯಕರ್ತರು ಸೇರಿಕೊಂಡೇ ಈ ಕಾರ್ಯಕ್ರಮ ಮಾಡುತ್ತಿದ್ದಾರೆ. ಪಕ್ಷದ ಅಧ್ಯಕ್ಷರು ಕೂಡಾ ಕಾರ್ಯಕಾರಿಣಿ ಸಮಿತಿಯಲ್ಲಿ ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಕೊಟ್ಟ ಕಾರ್ಯಕ್ರಮಗಳನ್ನು ಮತ್ತು ಇವತ್ತಿನ ಬಿಜೆಪಿ ಸರ್ಕಾರ ಕೊಟ್ಟ ಕಾರ್ಯಕ್ರಮಗಳ ಬಗ್ಗೆ ಅವಲೋಕನ ಮಾಡುವ ವೇದಿಕೆಯನ್ನಾಗಿ ಹಾಗೂ ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಸಂಕೇತವಾಗಿ ಈ ಕಾರ್ಯಕ್ರಮವನ್ನಾಗಿ ಮಾಡಿಕೊಳ್ಳಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.