ಜನರು ಸಿ ಟಿ ರವಿಯನ್ನು ಲೂಟಿ ರವಿ ಎಂದು ಕರೆಯುತ್ತಾರೆ.. ಸಿದ್ದರಾಮಯ್ಯ ವ್ಯಂಗ್ಯ

author img

By

Published : Sep 11, 2022, 7:41 PM IST

siddaramaiah-spoke-against-ct-ravi

ಚಿಕ್ಕಮಗಳೂರಿನ ಜನರು ಸಿ ಟಿ ರವಿ ಅವರನ್ನು ಲೂಟಿ ರವಿ ಎಂದು ಕರೆಯುತ್ತಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.

ಬಾಗಲಕೋಟೆ : ಚಿಕ್ಕಮಗಳೂರಿನ ಜನರು ಸಿಟಿ ರವಿ ಅವರನ್ನು, ಸಿ ಟಿ ರವಿ ಅಲ್ಲ ಲೂಟಿ ರವಿ ಎಂದು ಕರೆಯುತ್ತಾರೆ ಎಂದು ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿ ಟಿ ರವಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ಜಮಖಂಡಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿ ಜನರು ಹೀಗೆ ಕರೆಯುತ್ತಾರೆ. ನಾನು ಕರೆಯುತ್ತಿರುವುದಲ್ಲ ಎಂದು ಹೇಳಿದರು.

ಇನ್ನು ಅರ್ಕಾವತಿ, ಸೋಲಾರ್ ಹಗರಣದ ತನಿಖೆ ಬಹಿರಂಗ ಪಡಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮನ್ನು ಹೆದರಿಸುತ್ತೀರಾ.? ಬ್ಲಾಕ್ ಮೇಲ್ ಮಾಡ್ತಿರಾ?, ಇದಕ್ಕೆಲ್ಲ ನಾವು ಹೆದರುವ ಗಿರಾಕಿಗಳಲ್ಲ. 2006 ರಿಂದ ಈವರೆಗಿನ 16 ವರ್ಷದಲ್ಲಿ ಬಿಜೆಪಿ 11 ವರ್ಷ ಆಡಳಿತ ನಡೆಸಿದೆ. ನಾವು ಐದು ವರ್ಷ ಇದ್ದೆವು. ಸಿದ್ದರಾಮಯ್ಯ ಸರ್ಕಾರದ ಹಗರಣ ಎಂದು ಹೇಳುತ್ತಾರೆ. 2006 ರಿಂದ ಎಲ್ಲವನ್ನು ತನಿಖೆ ಮಾಡಿ ಎಂದು ಸಿದ್ದರಾಮಯ್ಯನವರು ಸರ್ಕಾರಕ್ಕೆ ಸವಾಲ್ ಹಾಕಿದರು. ಜೊತೆಗೆ ಇದರ ತನಿಖೆಗೆ ಪ್ರತ್ಯೇಕ ಆಯೋಗ ಮಾಡಲಿ. 2006 ರಿಂದ 2023 ರ ವರೆಗೂ ಯಾರ ಕಾಲದಲ್ಲಿ ಏನಾಗಿದೆಯೋ ಎಲ್ಲವನ್ನೂ ತನಿಖೆ ಮಾಡಲಿ ಎಂದು ಹೇಳಿದರು.

ಜನರು ಸಿಟಿ ರವಿ ಅಲ್ಲ ಲೂಟಿ ರವಿ ಎಂದು ಕರೆಯುತ್ತಾರೆ..ಸಿ ಟಿ ರವಿ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ

ಹಾಡಿನ ಮೂಲಕ ಸಚಿವ ಸುಧಾಕರ್ ವ್ಯಂಗ್ಯ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ಬಿಜೆಪಿ ಅವರಿಗೂ ಅನ್ವಯಿಸುತ್ತದೆ. ಯಡಿಯೂರಪ್ಪ ಕಾಂಗ್ರೆಸ್ ಬರಲ್ಲ ಎನ್ನುತ್ತಾರೆ. 150 ಸೀಟ್ ಗೆಲ್ಲುತ್ತೇವೆ ಎಂದು ಹೇಳುತ್ತಾರೆ. ಇದು ಅವರಿಗೂ ಅನ್ವಯಿಸುವುದಿಲ್ವ ಎಂದು ಪ್ರಶ್ನಿಸಿದರು. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಬಿಜೆಪಿಯವರಿಗೆ ಭಯ ಶುರುವಾಗಿದೆ. ಹೀಗಾಗಿ ಬಿಜೆಪಿಯವರೆಲ್ಲಾ ನನ್ನನ್ನೇ ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಾರೆ ಎಂದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ವೀರಾವೇಶದ ಭಾಷಣ ಮಾಡಿದಾಗ, ಜನ ಎದ್ದು ಹೋದರು. ಅಲ್ಲೇ ಇವರ ಸಾಮರ್ಥ್ಯ ತೋರಿಸೋಕೆ ಆಗಿಲ್ಲ. ಅದಕ್ಕಾಗಿಯೇ ಖಾಲಿ ಕುರ್ಚಿಗಳ ಮುಂದೆ ವೀರಾವೇಷದ ಭಾಷಣ ಮಾಡಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡುವಾಗ ಎಲ್ಲಾ ಕುರ್ಚಿಗಳು ಖಾಲಿಯಾಗಿದ್ದವು.

ಬೊಮ್ಮಾಯಿ ಖಾಲಿ ಕುರ್ಚಿ ಮುಂದೆ ಜಂಬ ಕೊಚ್ಚಿಕೊಂಡು ವೀರಾವೇಶದಿಂದ ಮಾತನಾಡಿದ್ದಾರೆ. ಹಾನಗಲ್ ನಲ್ಲೂ ಹೀಗೆ ವೀರಾವೇಶದಿಂದ ಮಾತನಾಡಿದ್ದಾರೆ. ಸಿಎಂಗೆ ಪಕ್ಕದ ಹಾನಗಲ್ ನ ಬೈ ಎಲೆಕ್ಷನ್ ಗೆಲ್ಲೋಕೆ ಆಗಲಿಲ್ಲ. ರಾಜ್ಯದಲ್ಲಿ ಇವರಿಗೆ ಗೆಲ್ಲಿಸೋಕೆ ಆಗುತ್ತಾ ಎಂದು ಟೀಕಿಸಿದರು. ದಾವಣಗೆರೆಯ ಕಾರ್ಯಕ್ರಮ ಬಳಿಕ ಬಿಜೆಪಿಯವರಿಗೆ ಹತಾಶೆಯಾಗಿದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಇದನ್ನೂ ಓದಿ : ರೋಹಿಣಿ ಸಿಂಧೂರಿಗೆ ಸಂಕಷ್ಟ: ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ ಶಾಸಕ ಸಾರಾ ಮಹೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.