ETV Bharat / state

ಹಿಜಾಬ್ ವಿವಾದ: ಹೈಕೋರ್ಟ್​ ಆದೇಶ ಚಾಲ್ತಿಯಲ್ಲಿರುತ್ತದೆ; ರಘುಪತಿ ಭಟ್

author img

By

Published : Oct 14, 2022, 2:39 PM IST

ಶಾಲೆಯ ಒಳಗೆ ಹಿಜಾಬ್​ ಹಾಕಬಾರದು ಎಂಬ ಸರ್ಕಾರದ ಆದೇಶ ಮುಂದುವರೆಯುತ್ತದೆ. ನಿನ್ನೆ ಬಂದಂತಹ ಸುಪ್ರೀಂ ತೀರ್ಪಿನಲ್ಲಿ ಎರಡು ಅಭಿಪ್ರಾಯಗಳು ಬಂದಿವೆ. ಈ ಎರಡು ಅಭಿಪ್ರಾಯಗಳಲ್ಲಿ ಒಬ್ಬರು ಹೈಕೋರ್ಟ್​ ಆದೇಶ ಎತ್ತಿ ಹಿಡಿದಿದ್ದಾರೆ ಎಂದು ಉಡುಪಿ ಶಾಸಕ ರಘುಪತಿ ಭಟ್​ ಅಭಿಪ್ರಾಯ ವ್ಯಕ್ತಪಡಿಸಿದರು.

raghupati bhat
ರಘುಪತಿ ಭಟ್

ಬಾಗಲಕೋಟೆ: ಹಿಜಾಬ್ ವಿಷಯದಲ್ಲಿ ಸ್ಪಷ್ಟ ನಿರ್ಧಾರವಾಗಿಲ್ಲ. ಇದು ತ್ರಿಸದಸ್ಯ ಇಲ್ಲವೇ ಪಂಚ ಸದಸ್ಯ ಪೀಠಕ್ಕೆ ಹೋಗುವ ಸಂದರ್ಭವಿದೆ. ಅಲ್ಲಿಯವರೆಗೆ ಹೈಕೋರ್ಟ್​ ಆದೇಶ ಚಾಲ್ತಿಯಲ್ಲಿರುತ್ತದೆ. ಶಾಲೆಯ ಒಳಗೆ ಹಿಜಾಬ್​ ಹಾಕಬಾರದು ಎಂಬ ಸರ್ಕಾರದ ಆದೇಶ ಮುಂದುವರೆಯುತ್ತದೆ. ಶಾಲೆಯ ಒಳಗೆ ಹಿಜಾಬ್ ತೆಗೆದಿಟ್ಟು ಶಾಲೆ ಪ್ರವೇಶಿಸುವ ನಮ್ಮ ನಿಲುವಿಗೆ ಯಾವುದೇ ಧಕ್ಕೆ ಬಂದಿಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್​ ಹೇಳಿದರು.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬಂದಂತಹ ತೀರ್ಪಿನಲ್ಲಿ ಎರಡು ಅಭಿಪ್ರಾಯಗಳು ಬಂದಿವೆ. ಈ ಎರಡು ಅಭಿಪ್ರಾಯಗಳಲ್ಲಿ ಒಬ್ಬರು ಹೈಕೋರ್ಟ್​ ಆದೇಶ ಎತ್ತಿ ಹಿಡಿದಿದ್ದು, ಇನ್ನೊಬ್ಬರು ಕೆಲವು ಕಾರಣಗಳನ್ನು ಕೊಟ್ಟು ಅವರ ಆದೇಶದಲ್ಲಿ ಕೆಲವು ಹಳ್ಳಿಯ ಭಾಗದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮುಂದುವರೆಸಲು ಹಿಜಾಬ್ ಬೇಕು ಎಂದು ವಾದ ಮಂಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಘುಪತಿ ಭಟ್

ಇದನ್ನೂ ಓದಿ: ಹಿಜಾಬ್​ ವಿವಾದ: ಸುಪ್ರೀಂ ಕೋರ್ಟ್​ ಪೀಠದಿಂದ ಭಿನ್ನ ತೀರ್ಪು, ಯಥಾಸ್ಥಿತಿ ಮುಂದುವರಿಕೆ

ಸ್ಪಷ್ಟವಾದ ಆದೇಶ ತ್ರಿಸದಸ್ಯ ಇಲ್ಲವೇ ಪಂಚ ಸದಸ್ಯರ ಪೀಠದ ಸುಪ್ರೀಂ ಸದಸ್ಯರು ಮಾಡಿದ ನಂತರ ತಿಳಿಯುತ್ತದೆ. ಅಲ್ಲಿಯೂ ಕೂಡ ನಾವು ಸರಿಯಾದ ದಾಖಲೆಯನ್ನು ಒದಗಿಸುತ್ತೇವೆ. ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್​ನಲ್ಲಿ ನಮ್ಮ ಸರ್ಕಾರಿ ವಕೀಲರು ಸರಿಯಾದ ದಾಖಲೆಯನ್ನು ಒದಗಿಸಿದ್ದಾರೆ ಎಂದರು.

ಇದನ್ನೂ ಓದಿ: ಕರ್ನಾಟಕ ಸರ್ಕಾರ ಆದೇಶ ಹಿಂಪಡೆದರೆ ಹಿಜಾಬ್​ ವಿವಾದವು ತಾನಾಗಿಯೇ ಅಂತ್ಯವಾಗಲಿದೆ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮನವಿ

ಪಂಚ ಸಮಿತಿಗೆ ಒದಗಿಸಲು ನಮ್ಮಲ್ಲಿ ಎಲ್ಲ ದಾಖಲೆಗಳಿವೆ. ಯಾವುದೇ ದಾಖಲೆ ಇಲ್ಲದೇ ನಾವು ಮಾತನಾಡುವುದಿಲ್ಲ. 15-20 ವರ್ಷದಿಂದ ಹಿಜಾಬ್ ತೆಗೆದಿಟ್ಟು ಶಾಲೆಗೆ ಬರುತ್ತಿದ್ದ ಮಕ್ಕಳು ಸಿಎಫ್‌ಐ ಅವರ ಪ್ರಚೋದನೆಯಿಂದ ಡಿಸೆಂಬರ್​ 27 ರಿಂದ ಹಿಜಾಬ್ ಬೇಕು ಎಂದು ಹೇಳಿದ್ದಾರೆ. 45 ದಿನ ಹಿಜಾಬ್ ತೆಗೆದಿಟ್ಟು ಶಾಲೆಗೆ ಬಂದಿರುವ ದಾಖಲೆಗಳು ನಮ್ಮ ಬಳಿ ಇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.