ETV Bharat / state

ಪರೀಕ್ಷೆಯಲ್ಲಿ ಸಾಮೂಹಿಕ ನಕಲು: ವಿಷಯ ಒಂದಕ್ಕೆ 10 ಸಾವಿರ ವಸೂಲಿ ಆರೋಪ

author img

By

Published : Nov 19, 2019, 6:46 PM IST

ಢವಳೇಶ್ವರದ ಸರ್.‌ಎಂ. ವಿಶ್ವೇಶ್ವರಯ್ಯ ಬಿಬಿಎ ಕಾಲೇಜಿನಲ್ಲಿ ಈ ಸಾಮೂಹಿಕ ನಕಲು ನಡೆದಿದೆ. ಸಿಬ್ಬಂದಿಯೇ ನಕಲು ಮಾಡಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪರೀಕ್ಷೆಯಲ್ಲಿ ಸಾಮೂಹಿಕ ನಕಲು

ಬಾಗಲಕೋಟೆ: ಪದವಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಢವಳೇಶ್ವರ ಪುನರ್ ವಸತಿ ಕೇಂದ್ರದಲ್ಲಿ ನಡೆದಿದೆ ಎನ್ನಲಾಗಿದೆ.

ಢವಳೇಶ್ವರದ ಸರ್.‌ಎಂ. ವಿಶ್ವೇಶ್ವರಯ್ಯ ಬಿಬಿಎ ಕಾಲೇಜಿನಲ್ಲಿ ಈ ಸಾಮೂಹಿಕ ನಕಲು ನಡೆದಿದೆ.‌ ಕಾಲೇಜಿನ ಸಿಬ್ಬಂದಿಯಿಂದಲೇ ನಕಲು ಮಾಡಲು ಕುಮ್ಮಕ್ಕು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ನಕಲು ಮಾಡಲು ವಿಷಯ ಒಂದಕ್ಕೆ 10 ಸಾವಿರ ಹಣವನ್ನು ಸಿಬ್ಬಂದಿ ವಸೂಲಿ‌ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಪರೀಕ್ಷೆಯಲ್ಲಿ ಸಾಮೂಹಿಕ ನಕಲು

ಬೆಳಗಾವಿಯ ರಾಣಿ ಚೆನ್ನಮ್ಮ ಯೂನಿವರ್ಸಿಟಿ ಅಧೀನದಲ್ಲಿರುವ ಕಾಲೇಜು ಇದಾಗಿದೆ. ಪ್ರತಿ ವರ್ಷ ನಡೆಯುವ ಪರೀಕ್ಷೆಯಲ್ಲಿ ಹಣ ಪಡೆದು ಸಾಮೂಹಿಕ ನಕಲು ಮಾಡುವ ಮೂಲಕ ಪಾಸ್​​ ಮಾಡಿಸಲಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಿದೆ.

Intro:AnchorBody:ಬಾಗಲಕೋಟೆ-- ಪದವಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಢವಳೇಶ್ವರ ಪುನರ್ ವಸತಿ ಕೇಂದ್ರದಲ್ಲಿ ನಡೆದಿದೆ. ಢವಳೇಶ್ವರದ ಸರ್.‌ಎಂ. ವಿಶ್ವೇಶ್ವರಯ್ಯ ಬಿಬಿಎ ಕಾಲೇಜಿನಲ್ಲಿ ಈ ಸಾಮೂಹಿಕ ನಕಲು ನಡೆದಿದೆ.‌ ಕಾಲೇಜಿನ ಸಿಬ್ಬಂದಿಯಿಂದಲೇ ನಕಲಿ ಪೂರೈಕೆಗೆ ಕುಮ್ಮಕ್ಕು ಇದೆ ಅಂತಾ ಆರೋಪಿಸಲಾಗಿದೆ. ಅಲ್ಲದೆ ನಕಲು ಪೂರೈಕೆಗೆ ವಿಷಯ ಒಂದಕ್ಕೆ ೧೦ ಸಾವಿರ ಹಣವನ್ನು ಸಿಬ್ಬಂದಿಗಳು ವಸೂಲಿ‌ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಬೆಳಗಾವಿಯ ರಾಣಿ ಚೆನ್ನಮ್ಮ ಯೂನಿವರ್ಸಿಟಿ ಅಧೀನದಲ್ಲಿರುವ ಕಾಲೇಜು ಇದಾಗಿದೆ.ಪ್ರತಿ ವರ್ಷ ನಡೆಯುವ ಪರೀಕ್ಷೆಯಲ್ಲಿ ಹಣ ಪಡೆದು ಸಾಮೂಹಿಕ ನಕಲು ಮಾಡುವ ಮೂಲಕ ಪಾಸ ಮಾಡಿಸಲಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಿದೆ..Conclusion:ಈ ಟಿ ವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.