ETV Bharat / state

ಕಾಂಗ್ರೆಸ್​ನವರು ಮೋದಿ ಟೀಕೆ ಮಾಡಿದ್ರೆ ದೊಡ್ಡವರಾಗ್ತೀವಿ ಅನ್ನೋ ಭ್ರಮೆಯಲ್ಲಿದ್ದಾರೆ: ಕೆ ಎಸ್ ಈಶ್ವರಪ್ಪ

author img

By

Published : Jan 28, 2023, 2:27 PM IST

ವೈಯಕ್ತಿಕ ಟೀಕೆ ರಾಜಕಾರಣದಲ್ಲಿ ಒಳ್ಳೆಯದಲ್ಲ - ಬಾದಾಮಿ ಮತದಾರರಿಗೆ ಸಿದ್ದರಾಮಯ್ಯರಿಂದ ದ್ರೋಹವಾಗಿದೆ - ಕಾಂಗ್ರೆಸ್​ ವಿರುದ್ಧ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ

ks eshwarappa
ಕೆ ಎಸ್ ಈಶ್ವರಪ್ಪ

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆ ಎಸ್ ಈಶ್ವರಪ್ಪ

ಬಾಗಲಕೋಟೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕೆ ಮಾಡಿದ್ರೆ ನಾವು ದೊಡ್ಡವರಾಗ್ತೀವಿ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್ ಪಕ್ಷದವರು ಇದ್ದಾರೆ. ಮುಂಬರುವ ದಿನಗಳಲ್ಲಿ ಪ್ರತಿಪಕ್ಷ ಸ್ಥಾನವನ್ನು ಕಾಂಗ್ರೆಸ್ಸಿಗರು ಕಳೆದುಕೊಳ್ತಾರೆ. ನಮಗೂ ಆ ರೀತಿ ಕೆಟ್ಟ ಪದಗಳನ್ನು ಬಳಸಲು ಬರುತ್ತದೆ. ಆದ್ರೆ, ನಾನು ಖಂಡಿತ ಅಂತಹ ಪದಗಳನ್ನು ಬಳಸಲು ಇಷ್ಟಪಡುವುದಿಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗರು ರಾಷ್ಟ್ರೀಯ ನಾಯಕರನ್ನು ಕರೆತಂದು ಪ್ರಚಾರ ತೆಗೆದುಕೊಳ್ಳುತ್ತಿದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ರಾಜ್ಯಕ್ಕೆ ಕರೆತರಲು ಕಾಂಗ್ರೆಸ್​ನಲ್ಲಿ ರಾಷ್ಟ್ರೀಯ ನಾಯಕರು ಯಾರಿದ್ದಾರೆ? ಎಂದು ಪ್ರಶ್ನೆ ಮಾಡಿದ ಅವರು, ರಾಹುಲ್, ಪ್ರಿಯಾಂಕಾ ಗಾಂಧಿ ಬಂದ್ರೆ ಗೆಲ್ಲುವ ಸೀಟ್​ ಕೂಡ ಗೆಲ್ಲಲಾಗಲ್ಲ. ಯುಪಿ, ಗುಜರಾತ್​ನಲ್ಲಿ ಭಾರಿ ಪ್ರಚಾರ ನಡೆಸಿ ಸೋಲನ್ನೊಪ್ಪಿಕೊಂಡಿದ್ದಾರೆ. ಹಾಗಾಗಿ, ಕಾಂಗ್ರೆಸ್​ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬರುವುದಿಲ್ಲ. ಅವರ ಮುಖ ನೋಡಿ ಜನ ಮತ ಕೊಡಲ್ಲ. ಸಿದ್ದರಾಮಯ್ಯನವರು ಪ್ರತಿಪಕ್ಷ ನಾಯಕ ಎಂಬ ಕಲ್ಪನೆ ಇಲ್ಲದೇ ಬಾಯಿಗೆ ಬಂದ ಹಾಗೆ ಪದಗಳನ್ನು ಬಳಸುತ್ತಿದ್ದಾರೆ. ಅವರು ಮಾಡಿರುವ ಭಾಷಣವನ್ನು ಒಮ್ಮೆ ತೆಗೆದು ಅವರೇ ನೋಡಲಿ ಎಂದು ಟಾಂಗ್ ನೀಡಿದರು.

ಈ ಹಿಂದೆ ಒಳ್ಳೆಯ ಕೆಲಸ ಮಾಡಿದ್ರೆ ಕಾಂಗ್ರೆಸ್​ನವರು ಯಾಕೆ ಸರ್ಕಾರ ಕಳೆದುಕೊಳ್ಳುತ್ತಿದ್ದರು. ನೀವು ಮಾಡಿದ ಸಾಧನೆ ಸರಿಯಿಲ್ಲ ಅಂತಾನೆ ನಿಮ್ಮನ್ನ ಜನ ಮನೆಗೆ ಕಳುಹಿಸಿದ್ದು. ಆದ್ರೆ, ಯಾರಿಗೂ ಏಕವಚನದಲ್ಲಿ ಮತ್ತು ವ್ಯಕ್ತಿಗತ ಟೀಕೆ ಮಾಡಬೇಡಿ. ಸೈದ್ಧಾಂತಿಕವಾಗಿ, ಅಭಿವೃದ್ಧಿ ಪರವಾಗಿ ಟೀಕೆ ಮಾಡಿ ನಾನು ಒಪ್ಪುತ್ತೇನೆ ಎಂದರು.

ಇದನ್ನೂ ಓದಿ: ಈಶ್ವರಪ್ಪ ಮಹಾ ಪೆದ್ದ, ನಾಲಿಗೆಗೂ ಬ್ರೈನ್​​​ಗೂ ಲಿಂಕ್​ ತಪ್ಪೋಗಿದೆ: ಸಿದ್ದರಾಮಯ್ಯ

ಸಚಿವ ಸುಧಾಕರ್​ ಮೇಲೆ ಸಿದ್ದರಾಮಯ್ಯ ನಿರಂತರ ವಾಗ್ದಾಳಿ ವಿಚಾರವಾಗಿ ಮಾತನಾಡಿ, ವೈಯಕ್ತಿಕ ಟೀಕೆ ರಾಜಕಾರಣದಲ್ಲಿ ಒಳ್ಳೆಯದಲ್ಲ. ಸಿದ್ದರಾಮಯ್ಯ, ಡಿಕೆಶಿ ಅವರು ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರ ಏನನ್ನು ಅಭಿವೃದ್ಧಿ ಮಾಡಿಲ್ಲ ಅದನ್ನು ಹೇಳಲಿ. ನಾವೇನು ಮಾಡಿದ್ದೀವಿ ಅಂತಾ ನಾವು ಹೇಳ್ತೀವಿ. ಯಾವ ಸರ್ಕಾರ ಒಳ್ಳೆಯದು ಅಂತಾ ಜನ ತೀರ್ಮಾನ ಮಾಡಲಿ ಎಂದ ಅವರು,ಅಭಿವೃದ್ಧಿ ಕಾರ್ಯಗಳು, ಸಂಘಟನೆ, ನೇತೃತ್ವ ಈ ಅಂಶಗಳನ್ನು ಜನ ಗಮನಿಸುತ್ತಾರೆ. ಈ ಮೂರು ಅಂಶಗಳಲ್ಲಿ ಯಾವ ಪಕ್ಷ ಒಳ್ಳೆಯದು ಎಂದು ಜನ ತೀರ್ಮಾನ ಮಾಡುತ್ತಾರೆ.ಈ ಮೂರು ಅಂಶಗಳಲ್ಲಿ ಬಿಜೆಪಿ ಮುಂದಿದೆ. ಹಾಗಾಗಿ, ಮುಂದಿನ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಬಾದಾಮಿ ಕ್ಷೇತ್ರ ದೂರವಾದ್ರೆ ಚಾಮುಂಡಿ ಕ್ಷೇತ್ರದಲ್ಲಿ ನಿಲ್ಲಬೇಕಿತ್ತು. ಬಾದಾಮಿ, ಚಾಮುಂಡಿ ಬಿಟ್ಟು ಕೋಲಾರಕ್ಕೆ ಹೋಗಿದ್ಯಾಕೆ?. ಬಾದಾಮಿಗೆ ಮೋಸ ಮಾಡಿದ್ದೇಕೆ? ಅಂತ ಸಿದ್ದರಾಮಯ್ಯ ಹೇಳಬೇಕು ಎಂದ ಅವರು, ಬಾದಾಮಿ ಮತದಾರರಿಗೆ ಸಿದ್ದರಾಮಯ್ಯರಿಂದ ದ್ರೋಹವಾಗಿದೆ. ನಾನು ಈ ಮೊದಲು ಬಾಗಲಕೋಟೆಯಲ್ಲೇ ಹೇಳಿದ್ದೆ, ಸಿದ್ದರಾಮಯ್ಯ ಯಾವ ಕಾರಣಕ್ಕೂ ಮತ್ತೆ ಬಾದಾಮಿಗೆ ಬರಲ್ಲ ಅಂತ. ಯಾವ ಮತದಾರರು ನಿಮ್ಮನ್ನು ತಿರಸ್ಕಾರ ಮಾಡಿದ್ದಾರೋ, ಅದೇ ಕ್ಷೇತ್ರಕ್ಕೆ ಹೋಗಿ ಜನರಿಗೆ ಅಭಿವೃದ್ಧಿ ಕೆಲಸ ಮಾಡ್ತೇನೆ ಅಂತ ಹೇಳಿ ಸ್ಪರ್ಧೆ ಮಾಡುವವರು ರಾಜಕಾರಣಿ" ಎಂದರು.

ಇದನ್ನೂ ಓದಿ: ಈಶ್ವರಪ್ಪ ಮಹಾ ಪೆದ್ದ, ನಾಲಿಗೆಗೂ ಬ್ರೈನ್​​​ಗೂ ಲಿಂಕ್​ ತಪ್ಪೋಗಿದೆ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.