ETV Bharat / state

ಕಲಾದಗಿ ಸೇತುವೆ ಕಾಮಗಾರಿಗೆ ₹ 5 ಕೋಟಿ: ಶಾಸಕ ನಿರಾಣಿ

author img

By

Published : Sep 4, 2019, 1:58 AM IST

ಬಾಗಲಕೋಟೆ ಜಿಲ್ಲೆಯ ಕಲಾದಗಿ ಹಾಗೂ ಅಂಗನವಾಡಿ ಸೇತುವೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.

ಶಾಸಕಿ ಮುರುಗೇಶ ನಿರಾಣಿ

ಬಾಗಲಕೋಟೆ: ಪ್ರವಾಹದಿಂದ ಹಾನಿಯಾಗಿರುವ ಕಲಾದಗಿ ಸೇತುವೆ ಕಾಮಗಾರಿಗೆ ₹ 5 ಕೋಟಿ, ಅಂಗನವಾಡಿ ಸೇತುವೆಗೆ ₹ 70 ಕೋಟಿ ನೀಡಲಾಗುವುದು. 20 ವರ್ಷಗಳಿಂದ ನನೆಗುದಿಗೆ ಬಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಮುರಗೇಶ ನಿರಾಣಿ ಭರವಸೆ ನೀಡಿದರು.

ಶಾಸಕ ಮುರುಗೇಶ ನಿರಾಣಿ

ಜಿಲ್ಲೆಯ ಬೀಳಗಿಯ ಕಲಾದಗಿ ಗ್ರಾಮದಲ್ಲಿ ಶಾಸಕ ಮುರಗೇಶ ನಿರಾಣಿ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳಗಡೆ ಆಗುವ ಕಲಾದಗಿ ಗ್ರಾಮವು ಸಂಪೂರ್ಣ ಸ್ಥಳಾಂತರ ಮಾಡುವ ಬಗ್ಗೆ, ಪ್ರವಾಹದಿಂದ ತೊಂದರೆ ಉಂಟಾಗಿರುವ ಸೇತುವೆ ಹಾಗೂ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆಸಿದರು.

ನೆರೆಗೆ ಸಂಬಂಧ ಪಟ್ಟ ಎಲ್ಲ ವ್ಯವಸ್ಥೆಯನ್ನು ಈಗಾಗಲೇ ಸರ್ಕಾರ ದಿಂದ ಮಾಡಲಾಗಿದೆ. ಗಂಜಿ ಕೇಂದ್ರ ಸೇರಿ ಆಹಾರ ಧಾನ್ಯಗಳ ವಿತರಣೆ ಮತ್ತು ಪರಿಹಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.ಯುಕೆಪಿ ವತಿಯಿಂದ ಸಂಪೂರ್ಣ ಸ್ಥಳಾಂತರ ಮಾಡುವ ಕಾರ್ಯ ಶೀಘ್ರವಾಗಿ ನಡೆಯಲಿದೆ ಎಂದು ಭರವಸೆ ನೀಡಿದರು.

Intro:AnchorBody:ಬಾಗಲಕೋಟೆ ಜಿಲ್ಲೆಯ ಬೀಳಗಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಲಾದಗಿ ಗ್ರಾಮದಲ್ಲಿ ಶಾಸಕ ಮುರಗೇಶ ನಿರಾಣಿ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಾರ್ವಜನಿಕ ಸಂಪರ್ಕ ಸಭೆ ನಡೆಸಿದರು.
ಸಭೆಯಲ್ಲಿ ಪ್ರಮುಖ ವಾಗಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳಗಡೆ ಆಗುವ ಕಲಾದಗಿ ಗ್ರಾಮವು ಸಂಪೂರ್ಣ ಸ್ಥಳಾಂತರ ಮಾಡುವ ಬಗ್ಗೆ, ಪ್ರವಾಹ ದಿಂದ ತೊಂದರೆ ಉಂಟಾಗಿರುವ ಸೇತುವೆ ಹಾಗೂ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಸಮಯದಲ್ಲಿ ಜಿಲ್ಲಾಧಿಕಾರಿ ಅರ್.ರಾಮಚಂದ್ರನ್ ಮಾತನಾಡಿ, ನೆರೆಗೆ ಸಂಭಂದ ಪಟ್ಟ ಎಲ್ಲಾ ವ್ಯವಸ್ಥೆ ಯನ್ನು ಈಗಾಗಲೇ ಸರ್ಕಾರ ದಿಂದ ಮಾಡಲಾಗಿದೆ.ಗಂಜೀ ಕೇಂದ್ರ ಸೇರಿದಂತೆ ಆಹಾರ ಧಾನ್ಯ ಗಳ ವಿತರಣೆ ಮತ್ತು ಹತ್ತು ಸಾವಿರ ಪರಿಹಾರ ನೀಡಲಾಗಿದೆ.ಇನ್ನೂ ಯುಕೆಪಿ ವತಿಯಿಂದ ಸಂಪೂರ್ಣ ಸ್ಥಳಾಂತರ ಮಾಡುವ ಕಾರ್ಯ ಶೀಘ್ರವಾಗಿ ನಡೆಯಲಿದೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಶಾಸಕ ಮುರಗೇಶ ನಿರಾಣಿ ಮಾತನಾಡಿ,ಮುಖ್ಯಮಂತ್ರಿ ಯಡಿಯೂರಪ್ಪ ನವರು ನಮ್ಮಗೆ ಹತ್ತಿರ ಇರುವುದರಿಂದ ಕಳೆದ ಇಪ್ಪತ್ತು ವರ್ಷಗಳ ಹಿಂದೆ ನೆನೆಗುದಿಗೆ ಬಿದ್ದಿರುವ ಕಾರ್ಯಗಳನ್ನು ಮಾಡಲು ಮುಂದಾಗಿದ್ದೇವೆ.ಸಮಾಧಾನದಿಂದ ಇರಿ,ಎಲ್ಲ ಕೆಲಸವನ್ನು ಮಾಡುತ್ತೇವೆ.ಪ್ರವಾಹ ದಿಂದ ಹಾನಿ ಆಗಿರುವ ಕಲಾದಗಿ ಸೇತುಗೆ ಐದು ಕೋಟಿ ಮಂಜೂರ ಮಾಡಲಾಗಿದೆ.ಕಲಾದಗಿ ಯಿಂದ ಕಾತರಕಿ ಸಂಚಾರ ಮಾಡುವ ಸೇತುವೆ ಪ್ರವಾಹ ದಿಂದ ಹಾನಿಗೆ ಒಳಗಾಗಿತ್ತು.ಅದರ ಕೆಲಸ ಮಾಡಲಾಗಿದೆ. ಇನ್ನು ಅಗನವಾಡಿ ಸೇತುವೆ ಗೆ 70 ಕೋಟಿ ಹಣ ನಿಗದಿ ಮಾಡಿಸಲಾಗಿದೆ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತದೆ.ಜಿಲ್ಲಾಧಿಕಾರಿ ಸೇರಿದಂತೆ ಇತರ ಅಧಿಕಾರಿಗಳು ಹೆಚ್ಚು ಲಕ್ಷ ವಹಿಸಿ,ಸಹಕಾರ ನೀಡಬೇಕು ಎಂದು ನಿರಾಣಿ ಮನವಿ ಮಾಡಿಕೊಂಡರು...

ಬೈಟ್- ಮುರಗೇಶ ನಿರಾಣಿ ( ಶಾಸಕರು)Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.